
ಪಾಕಿಸ್ತಾನವು ಭವಿಷ್ಯಕ್ಕಾಗಿ ತಂಡವನ್ನು ನಿರ್ಮಿಸಬೇಕಾಗಿದೆ
2022ರ ಆವೃತ್ತಿಯಲ್ಲೂ ತಂಡದಿಂದ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದರಲ್ಲೂ ಭಾರತ ವಿರುದ್ಧದ ಪಂದ್ಯ ಇನ್ನಷ್ಟು ರೋಚಕತೆ ಮೂಡಿಸಿದೆ. ಆದರೆ, ಭವಿಷ್ಯಕ್ಕಾಗಿ ತಂಡವನ್ನು ಕಟ್ಟದೆ ಪಾಕಿಸ್ತಾನ ಹಳಿ ತಪ್ಪಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಸ್ಪಿನ್ನರ್ ದಾನಿಶ್ ಕನೇರಿಯಾ ಹೇಳಿದ್ದಾರೆ.
"ಪಾಕಿಸ್ತಾನವು ಭವಿಷ್ಯಕ್ಕಾಗಿ ತಂಡವನ್ನು ನಿರ್ಮಿಸಬೇಕಾಗಿದೆ ಎಂದು ನಾನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಪ್ರತಿಯೊಂದು ದೇಶವೂ ಅವರ ಬಿ ತಂಡವನ್ನು ಸಿದ್ಧಪಡಿಸುತ್ತಿದ್ದಾರೆ. ಫ್ರಾಂಚೈಸ್ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತುಂಬಾ ನಡೆಯುತ್ತಿದೆ, ಆದ್ದರಿಂದ ನಿಮಗೆ ಆಟಗಾರರ ಬ್ಯಾಕ್ಅಪ್ ಮತ್ತು ಬದಲಾವಣೆ ಬೇಕು. ನೀವು ಇಡೀ ವರ್ಷ ಒಂದೇ ರೀತಿಯ ಕ್ರಿಕೆಟಿಗರೊಂದಿಗೆ ತಿರುಗಾಡಲು ಸಾಧ್ಯವಿಲ್ಲ. ಅದು ಅವರಿಗೆ ಹೊರೆಯಾಗುತ್ತದೆ ಮತ್ತು ನಂತರ ಗಾಯದಂತಹ ಸಂಗತಿಗಳು ಸಂಭವಿಸುತ್ತವೆ," ಎಂದು ಪಾಕಿಸ್ತಾನ ತಂಡಕ್ಕಾಗಿ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿರುವ ದಾನಿಶ್ ಕನೇರಿಯಾ ತಿಳಿಸಿದರು.

ನೆದರ್ಲ್ಯಾಂಡ್ಸ್ಗೆ ಶಾನ್ ಮಸೂದ್ರನ್ನು ನಾಯಕನನ್ನಾಗಿ ಕಳುಹಿಸಬೇಕಿತ್ತು
"ಪಾಕಿಸ್ತಾನ ಕ್ರಿಕೆಟ್ ತಂಡ ಒಂದು ಪ್ರಮಾದ ಮಾಡಿದೆ, ಅದು ಶಾನ್ ಮಸೂದ್ ಅವರನ್ನು ನೆದರ್ಲ್ಯಾಂಡ್ಸ್ಗೆ ನಾಯಕನನ್ನಾಗಿ ಕಳುಹಿಸಬೇಕಿತ್ತು ಮತ್ತು ವೇಗದ ಬೌಲಿಂಗ್ ಮತ್ತು ಸ್ಪಿನ್ ವಿಭಾಗದಲ್ಲಿ ಉತ್ತಮ ಬದಲಿ ಆಟಗಾರರನ್ನು ಸೇರಿಸಬೇಕಿತ್ತು. ಅವರಲ್ಲಿ ಅನೇಕ ಬ್ಯಾಟರ್ಗಳಿದ್ದಾರೆ ಆದರೆ ಅವರ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ. ಅವರು ಸೌದ್ ಶಕೀಲ್ ಅವರನ್ನು ಆಡಿಸಬೇಕಿತ್ತು," ಎಂದು ಸಲಹೆ ನೀಡಿದರು.

ಯುವ ಆಟಗಾರರಿಗೆ ಅವಕಾಶ ಸಿಗುತ್ತಿಲ್ಲ
"ಶಹನವಾಜ್ ದಹಾನಿ ಅವರ ಹೆಸರು ಮತ್ತು ಜಾಹಿದ್ ಮಹಮೂದ್ ಕೂಡ ಬರುತ್ತಿದೆ, ಆದರೆ ವಿಷಯವೆಂದರೆ ಅವರು ಬೆಂಚ್ ಮೇಲೆ ಕುಳಿತು ಏನೂ ಮಾಡುತ್ತಿಲ್ಲ. ಅವರಿಗೆ ಆ ಅವಕಾಶಗಳು ಸಿಗುತ್ತಿಲ್ಲ. ಪಾಕಿಸ್ತಾನ ಯುವ ತಂಡವನ್ನು ನೆದರ್ಲೆಂಡ್ಸ್ಗೆ ಕಳುಹಿಸಬೇಕಿತ್ತು. ಕಳೆದುಕೊಳ್ಳುವ ಭಯದ ಅಂಶವಿದೆ. ನೀವು ಭಯದ ಅಂಶವನ್ನು ಹೊಂದಿರುವಾಗ ನೀವು ತಂಡವನ್ನು ನಿರ್ಮಿಸಲು ಸಾಧ್ಯವಿಲ್ಲ, ಅದು ಪಾಕಿಸ್ತಾನ ತಂಡದಲ್ಲಿ ಸಮಸ್ಯೆಯಾಗಿದೆ," ಎಂದು ಮಾಜಿ ಪಾಕಿಸ್ತಾನ ಕ್ರಿಕೆಟಿಗ ದಾನಿಶ್ ಕನೇರಿಯಾ ಹೇಳಿದ್ದಾರೆ.


Click it and Unblock the Notifications












