For Quick Alerts
ALLOW NOTIFICATIONS  
For Daily Alerts
 

IND vs PAK: ಟಿ20 ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನ ತಂಡದಿಂದ ಪ್ರಮಾದ; ಪಾಕ್ ಮಾಜಿ ಕ್ರಿಕೆಟಿಗ

IND vs PAK: Pakistan Team Made A Mistake Ahead Of T20 World Cup; Former Cricketer Danish Kaneria

ವಿಶ್ವದ ಎಲ್ಲಾ ಅಗ್ರ ಕ್ರಿಕೆಟ್ ತಂಡಗಳು ಈ ವರ್ಷದ ಕೊನೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿವೆ. ಮೆಗಾ-ಟೂರ್ನಿಯ ಸೂಪರ್ 12 ಹಂತವು ಅಕ್ಟೋಬರ್ 22ರಂದು ಪ್ರಾರಂಭವಾಗಲಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಭಾರತ ಕ್ರಿಕೆಟ್ ತಂಡಗಳು ಅಕ್ಟೋಬರ್ 23ರಂದು ಮುಖಾಮುಖಿಯಾಗಲಿವೆ.

2022ರ ಟಿ20 ವಿಶ್ವಕಪ್‌ಗೆ ಮುನ್ನ ಎರಡೂ ತಂಡಗಳು ದ್ವಿಪಕ್ಷೀಯ ಸರಣಿಯ ಜೊತೆಗೆ ಏಷ್ಯಾ ಕಪ್ ಅನ್ನು ಆಡಲಿವೆ. ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಹೇಗೆ ಆಡುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ. 2021ರ ಆವೃತ್ತಿಯಲ್ಲಿ ಪಾಕಿಸ್ತಾನ ತಂಡವು ತಮ್ಮ ಪ್ರದರ್ಶನದಿಂದ ಎಲ್ಲರನ್ನೂ ಮೆಚ್ಚಿಸಿತು ಮತ್ತು ಸೆಮಿಫೈನಲ್‌ಗೆ ಅರ್ಹತೆ ಗಳಿಸಿತ್ತು.

ಪಾಕಿಸ್ತಾನವು ಭವಿಷ್ಯಕ್ಕಾಗಿ ತಂಡವನ್ನು ನಿರ್ಮಿಸಬೇಕಾಗಿದೆ

ಪಾಕಿಸ್ತಾನವು ಭವಿಷ್ಯಕ್ಕಾಗಿ ತಂಡವನ್ನು ನಿರ್ಮಿಸಬೇಕಾಗಿದೆ

2022ರ ಆವೃತ್ತಿಯಲ್ಲೂ ತಂಡದಿಂದ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದರಲ್ಲೂ ಭಾರತ ವಿರುದ್ಧದ ಪಂದ್ಯ ಇನ್ನಷ್ಟು ರೋಚಕತೆ ಮೂಡಿಸಿದೆ. ಆದರೆ, ಭವಿಷ್ಯಕ್ಕಾಗಿ ತಂಡವನ್ನು ಕಟ್ಟದೆ ಪಾಕಿಸ್ತಾನ ಹಳಿ ತಪ್ಪಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಸ್ಪಿನ್ನರ್ ದಾನಿಶ್ ಕನೇರಿಯಾ ಹೇಳಿದ್ದಾರೆ.

"ಪಾಕಿಸ್ತಾನವು ಭವಿಷ್ಯಕ್ಕಾಗಿ ತಂಡವನ್ನು ನಿರ್ಮಿಸಬೇಕಾಗಿದೆ ಎಂದು ನಾನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಪ್ರತಿಯೊಂದು ದೇಶವೂ ಅವರ ಬಿ ತಂಡವನ್ನು ಸಿದ್ಧಪಡಿಸುತ್ತಿದ್ದಾರೆ. ಫ್ರಾಂಚೈಸ್ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತುಂಬಾ ನಡೆಯುತ್ತಿದೆ, ಆದ್ದರಿಂದ ನಿಮಗೆ ಆಟಗಾರರ ಬ್ಯಾಕ್ಅಪ್ ಮತ್ತು ಬದಲಾವಣೆ ಬೇಕು. ನೀವು ಇಡೀ ವರ್ಷ ಒಂದೇ ರೀತಿಯ ಕ್ರಿಕೆಟಿಗರೊಂದಿಗೆ ತಿರುಗಾಡಲು ಸಾಧ್ಯವಿಲ್ಲ. ಅದು ಅವರಿಗೆ ಹೊರೆಯಾಗುತ್ತದೆ ಮತ್ತು ನಂತರ ಗಾಯದಂತಹ ಸಂಗತಿಗಳು ಸಂಭವಿಸುತ್ತವೆ," ಎಂದು ಪಾಕಿಸ್ತಾನ ತಂಡಕ್ಕಾಗಿ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿರುವ ದಾನಿಶ್ ಕನೇರಿಯಾ ತಿಳಿಸಿದರು.

ನೆದರ್ಲ್ಯಾಂಡ್ಸ್‌ಗೆ ಶಾನ್ ಮಸೂದ್‌ರನ್ನು ನಾಯಕನನ್ನಾಗಿ ಕಳುಹಿಸಬೇಕಿತ್ತು

ನೆದರ್ಲ್ಯಾಂಡ್ಸ್‌ಗೆ ಶಾನ್ ಮಸೂದ್‌ರನ್ನು ನಾಯಕನನ್ನಾಗಿ ಕಳುಹಿಸಬೇಕಿತ್ತು

"ಪಾಕಿಸ್ತಾನ ಕ್ರಿಕೆಟ್ ತಂಡ ಒಂದು ಪ್ರಮಾದ ಮಾಡಿದೆ, ಅದು ಶಾನ್ ಮಸೂದ್ ಅವರನ್ನು ನೆದರ್ಲ್ಯಾಂಡ್ಸ್‌ಗೆ ನಾಯಕನನ್ನಾಗಿ ಕಳುಹಿಸಬೇಕಿತ್ತು ಮತ್ತು ವೇಗದ ಬೌಲಿಂಗ್ ಮತ್ತು ಸ್ಪಿನ್ ವಿಭಾಗದಲ್ಲಿ ಉತ್ತಮ ಬದಲಿ ಆಟಗಾರರನ್ನು ಸೇರಿಸಬೇಕಿತ್ತು. ಅವರಲ್ಲಿ ಅನೇಕ ಬ್ಯಾಟರ್‌ಗಳಿದ್ದಾರೆ ಆದರೆ ಅವರ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ. ಅವರು ಸೌದ್ ಶಕೀಲ್ ಅವರನ್ನು ಆಡಿಸಬೇಕಿತ್ತು," ಎಂದು ಸಲಹೆ ನೀಡಿದರು.

ಯುವ ಆಟಗಾರರಿಗೆ ಅವಕಾಶ ಸಿಗುತ್ತಿಲ್ಲ

ಯುವ ಆಟಗಾರರಿಗೆ ಅವಕಾಶ ಸಿಗುತ್ತಿಲ್ಲ

"ಶಹನವಾಜ್ ದಹಾನಿ ಅವರ ಹೆಸರು ಮತ್ತು ಜಾಹಿದ್ ಮಹಮೂದ್ ಕೂಡ ಬರುತ್ತಿದೆ, ಆದರೆ ವಿಷಯವೆಂದರೆ ಅವರು ಬೆಂಚ್ ಮೇಲೆ ಕುಳಿತು ಏನೂ ಮಾಡುತ್ತಿಲ್ಲ. ಅವರಿಗೆ ಆ ಅವಕಾಶಗಳು ಸಿಗುತ್ತಿಲ್ಲ. ಪಾಕಿಸ್ತಾನ ಯುವ ತಂಡವನ್ನು ನೆದರ್ಲೆಂಡ್ಸ್‌ಗೆ ಕಳುಹಿಸಬೇಕಿತ್ತು. ಕಳೆದುಕೊಳ್ಳುವ ಭಯದ ಅಂಶವಿದೆ. ನೀವು ಭಯದ ಅಂಶವನ್ನು ಹೊಂದಿರುವಾಗ ನೀವು ತಂಡವನ್ನು ನಿರ್ಮಿಸಲು ಸಾಧ್ಯವಿಲ್ಲ, ಅದು ಪಾಕಿಸ್ತಾನ ತಂಡದಲ್ಲಿ ಸಮಸ್ಯೆಯಾಗಿದೆ," ಎಂದು ಮಾಜಿ ಪಾಕಿಸ್ತಾನ ಕ್ರಿಕೆಟಿಗ ದಾನಿಶ್ ಕನೇರಿಯಾ ಹೇಳಿದ್ದಾರೆ.

Story first published: Thursday, August 18, 2022, 21:54 [IST]
Other articles published on Aug 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+