
ಪಾಕಿಸ್ತಾನಿ ವರದಿಗಾರನಿಗೆ ಹಿಟ್ಮ್ಯಾನ್ ಶೈಲಿಯಲ್ಲಿ ಉತ್ತರ
ತಂಡ ಪಾಕಿಸ್ತಾನ ವಿರುದ್ಧ 10 ವಿಕೆಟ್ಗಳಿಂದ ಹೀನಾಯವಾಗಿ ಸೋತಿತ್ತು. ಹಾಗಾಗಿ ಈ ಬಾರಿ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ ಮತ್ತು ಭಾರತ ಹೇಗೆ ಸನ್ನದ್ಧವಾಗಿದೆ ಎಂಬುದರ ಕುರಿತು ನಾಯಕ ರೋಹಿತ್ ಶರ್ಮಾ ನಿನ್ನೆ ಮಾತನಾಡಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಎದುರಿಸಿದ ಭಾರತ ತಂಡಕ್ಕೆ ಏನಾಯಿತು ಎಂದು ನಿಮಗೆ ತಿಳಿದಿದೆಯೇ? ಆ ಸೋಲಿನ ಪರಿಣಾಮ ಇನ್ನೂ ತಂಡದಲ್ಲಿದೆಯೇ ಮತ್ತು ಅವರು ಚೇತರಿಸಿಕೊಳ್ಳುತ್ತಾರೆಯೇ ಎಂದು ಪಾಕಿಸ್ತಾನಿ ವರದಿಗಾರ ಕೇಳಿದರು.
Asia cup 2022: ಪಾಕಿಸ್ತಾನ ವಿರುದ್ಧ ದಿನೇಶ್ ಕಾರ್ತಿಕ್ ಆಡುವುದು ಅನುಮಾನ!

ನನಗೆ ನೆನಪಿನ ಶಕ್ತಿ ಕಡಿಮೆ ಎಂದ ರೋಹಿತ್
ಈ ಮೇಲ್ಕಂಡ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರೋಹಿತ್ ಶರ್ಮಾ, "ಇಲ್ಲಿ ನೋಡು.. ನನಗೆ ನೆನಪಿನ ಶಕ್ತಿ ತುಂಬಾ ಕಡಿಮೆ ಇದೆ. ಒಂದು ವರ್ಷದ ಹಿಂದೆ ನಡೆದ ಘಟನೆಗಳು ನನಗೆ ನೆನಪಿಲ್ಲ. ಹಾಗಾಗಿ ಈಗ ಏನಾದರೂ ಪ್ರಶ್ನೆ ಇದ್ದರೆ ಕೇಳಿ." ಎಂದು ರೋಹಿತ್ ಹೇಳಿದ ಮಾತು ನಗುವಿಗೆ ಕಾರಣವಾಯಿತು.
ಹೊಸ ಪಂದ್ಯಾವಳಿ, ಹೊಸ ಆರಂಭ. ಹಿಂದೆ ಏನಾಯಿತು ಎಂದು ನನಗೆ ನೆನಪಿಲ್ಲ. ಪಾಕಿಸ್ತಾನದ ವಿರುದ್ಧ ಆಡುವುದು ಯಾವಾಗಲೂ ಸವಾಲಿನ ಸಂಗತಿ. ಒಂದೊಂದು ಪಂದ್ಯದಲ್ಲೂ ಮುಂದೆ ಸಾಗುತ್ತೇವೆ. ಮೊದಲ ಪಂದ್ಯಕ್ಕೆ ನಾವು ಇನ್ನೂ ಹನ್ನೊಂದು ಆಟಗಾರರನ್ನ ಅಂತಿಮಗೊಳಿಸಿಲ್ಲ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಪಂದ್ಯದ ಬಳಿಕ ತೀರ್ಮಾನಿಸುತ್ತೇವೆ ಎಂದರು.
ಸಿಹಿ ಸುದ್ದಿ: IND vs PAK ಪಂದ್ಯಕ್ಕೂ ಮುನ್ನ ಭಾರತ ತಂಡ ಸೇರಿಕೊಂಡ ಕೋಚ್ ರಾಹುಲ್ ದ್ರಾವಿಡ್
ಪ್ರಶ್ನೆ ನಿಲ್ಲಿಸದ ಪಾಕ್ ವರದಿಗಾರನಿಗೆ ಹಿಟ್ಮ್ಯಾನ್ ಸಖತ್ ಉತ್ತರ
ಪತ್ರಕರ್ತ ಇಷ್ಟಕ್ಕೇ ನಿಲ್ಲಲಿಲ್ಲ. ಪ್ರಶ್ನೆಯನ್ನು ಮುಂದುವರೆಸಿ ಭಾರತೀಯ ಆಟಗಾರರ ಅಂತಿಮ ಪ್ಲೇಯಿಂಗ್ 11 ರ ಬಗ್ಗೆ ಅವರು ಸ್ಪಷ್ಟವಾಗಿ ಕೇಳಿದರು. "ಕಳೆದ ಕೆಲವು ಸರಣಿಗಳಲ್ಲಿ ಭಾರತ ಹೊಸ ಓಪನಿಂಗ್ ಮಾಡಲು ಪ್ರಯತ್ನಿಸುತ್ತಿದೆ, ಏಕೆಂದರೆ ಆಗ ಕೆಎಲ್ ರಾಹುಲ್ ಇರಲಿಲ್ಲ. ಆದರೆ ಈ ಬಾರಿ ಕೆಎಲ್ ರಾಹುಲ್ ವಾಪಸ್ ಆಗಿದ್ದು ಅವರನ್ನು ಓಪನಿಂಗ್ ಆಗಿ ಕಣಕ್ಕಿಳಿಸುತ್ತೀರಾ ಎಂದು ನೇರವಾಗಿ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, "ಟಾಸ್ ನಂತರ ನಿಮಗೆ ತಿಳಿಯುತ್ತದೆ. ಅದನ್ನು ರಹಸ್ಯವಾಗಿಡೋಣ. ವಿಭಿನ್ನವಾಗಿ ಪ್ರಯತ್ನಿಸುವುದು ನಮ್ಮ ಗುರಿ. ನಾವು ಇನ್ನೂ ತಂಡವನ್ನು ನಿರ್ಧರಿಸಿಲ್ಲ. ನಾವು ಹೊಸ ಸಂಯೋಜನೆಗಳನ್ನು ಪ್ರಯತ್ನಿಸಿದಾಗ ಮಾತ್ರ ನಮಗೆ ಫಲಿತಾಂಶಗಳು ತಿಳಿಯುತ್ತವೆ. ನಾವು ಏಷ್ಯಾಕಪ್ನಲ್ಲಿ ಹಲವಾರು ವಿಷಯಗಳನ್ನು ನೋಡಲು ಬಯಸುತ್ತೇವೆ. ತಂಡದ ಕಾಂಬಿನೇಷನ್ ನಾಳೆ ತಿಳಿಯಲಿದೆ. ಫಲಿತಾಂಶ ಏನೇ ಬಂದರೂ ಕೆಲವು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ ಎಂದು ರೋಹಿತ್ ಹೇಳಿದ್ದಾರೆ.


Click it and Unblock the Notifications
