For Quick Alerts
ALLOW NOTIFICATIONS  
For Daily Alerts
 

IND vs PAK: ವೀರೋಚಿತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಬಗ್ಗೆ ವಿರಾಟ್ ಕೊಹ್ಲಿ ದೊಡ್ಡ ಮಾತು

IND vs PAK: Virat Kohli Makes Big Statement About Hardik Pandyas Heroic Performance Against Pakistan

2022ರ ಏಷ್ಯಾ ಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಲು ಭಾರತ ತಂಡವನ್ನು ಪ್ರೇರೇಪಿಸಿದ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವೀರೋಚಿತ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ಪಾಂಡ್ಯರನ್ನು "ಚಾಂಪಿಯನ್' ಎಂದು ಕರೆದರು.

ಭಾನುವಾರ, ಆಗಸ್ಟ್ 28ರಂದು ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತಗಳಲ್ಲಿ 33 ರನ್ ಗಳಿಸಿದರು ಮತ್ತು ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತೀಯ ಬೌಲರ್‌ಗಳು ಪಾಕಿಸ್ತಾನದ ಮಧ್ಯಮ ಕ್ರಮಾಂಕವನ್ನು 147ಕ್ಕೆ ಆಲೌಟ್ ಮಾಡಿದರು. ಭಾರತದ ವೇಗಿಗಳು ಸೇರಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದರು, ಭುವನೇಶ್ವರ್ ಕುಮಾರ್ ಅವರು ನಾಲ್ಕು ವಿಕೆಟ್, ಹಾರ್ದಿಕ್ ಪಾಂಡ್ಯ ಮೂರು ವಿಕೆಟ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ಕ್ರಮವಾಗಿ ಎರಡು ಮತ್ತು ಒಂದು ವಿಕೆಟ್ ಪಡೆದರು.

ಪಾಕಿಸ್ತಾನದ ಸಾಧಾರಣ ಮೊತ್ತವನ್ನು ಭಾರತ ಬೆನ್ನಟ್ಟುವ ಸಂದರ್ಭದಲ್ಲಿ ಅಗ್ರ ಕ್ರಮಾಂಕದ ಆರಂಭಿಕ ಕುಸಿತದ ನಂತರ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ 52 ರನ್‌ಗಳ ಜೊತೆಯಾಟವನ್ನು ನೀಡಿ ಕುಸಿತದಿಂದ ಪಾರು ಮಾಡಿದರು. ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್ ಎಸೆದ ಅಂತಿಮ ಓವರ್‌ನಲ್ಲಿ ಕೇವಲ ಏಳು ರನ್‌ಗಳ ಅಗತ್ಯವಿದ್ದಾಗ, ಹಾರ್ದಿಕ್ ಪಾಂಡ್ಯ ನಾಲ್ಕನೇ ಎಸೆತದಲ್ಲಿ ಲಾಂಗ್-ಆನ್‌ನಲ್ಲಿ ಸಿಕ್ಸರ್ ಬಾರಿಸಿ ಭಾರತದ ಗೆಲುವಿಗೆ ಕಾರಣವಾದರು.

'ಚಾಂಪಿಯನ್' ಹಾರ್ದಿಕ್ ಪಾಂಡ್ಯ ಎಂದ ವಿರಾಟ್ ಕೊಹ್ಲಿ

'ಚಾಂಪಿಯನ್' ಹಾರ್ದಿಕ್ ಪಾಂಡ್ಯ ಎಂದ ವಿರಾಟ್ ಕೊಹ್ಲಿ

ಭಾರತವನ್ನು ರೋಚಕವಾಗಿ ಗೆಲ್ಲಿಸಿದ ನಂತರ "ಚಾಂಪಿಯನ್' ಹಾರ್ದಿಕ್ ಪಾಂಡ್ಯ ಅವರ ಚಿತ್ರವನ್ನು ವಿರಾಟ್ ಕೊಹ್ಲಿ ತಮ್ಮ Instagram ಸ್ಟೋರಿಯಲ್ಲಿ ಹಂಚಿಕೊಂಡರು.

2022ರ ಪಂದ್ಯದಲ್ಲಿ ಆಡುವಾಗ 2018ರ ಏಷ್ಯಾಕಪ್ ಅನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. 2018ರ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಬೆನ್ನಿನ ಗಾಯದಿಂದ ಬಳಲುತ್ತಿದ್ದರು ಮತ್ತು ಮೈದಾನದಿಂದ ಹೊರಗೆ ಸ್ಟ್ರೆಚರ್ ಮೂಲಕ ಕರೆದೊಯ್ಯಲಾಯಿತು. ನಾಲ್ಕು ವರ್ಷಗಳ ನಂತರ ಆಲ್‌ರೌಂಡರ್ ತನ್ನ ಪ್ರದರ್ಶನಕ್ಕಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗೆದ್ದುಕೊಂಡರು.

ಹೊರಗೆ 10 ಫೀಲ್ಡರ್‌ಗಳು ಇದ್ದರೂ ನಾನು ಹೊಡೆಯುತ್ತಿದ್ದೆ

ಹೊರಗೆ 10 ಫೀಲ್ಡರ್‌ಗಳು ಇದ್ದರೂ ನಾನು ಹೊಡೆಯುತ್ತಿದ್ದೆ

"ನಾನು ಎಲ್ಲವನ್ನೂ ನೆನಪಿಸಿಕೊಳ್ಳುತ್ತಿದ್ದೇನೆ, ನಿಮಗೆ ತಿಳಿದಿದೆ ನನ್ನನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ದರು, ಅದೇ ಡ್ರೆಸ್ಸಿಂಗ್ ರೂಮ್‌, ನೀವು ಸಾಧನೆಯ ಪ್ರಜ್ಞೆಯನ್ನು ಅನುಭವಿಸುತ್ತೀರಿ. ಏಕೆಂದರೆ ಸಂಭವಿಸಿದ ಸಂಗತಿಗಳು ಮತ್ತು ಅದರ ನಂತರ ಈ ರೀತಿಯ ಅವಕಾಶ ಸಿಕ್ಕಿತು. ಆದ್ದರಿಂದ ಪ್ರಯಾಣವು ತುಂಬಾ ಹೆಚ್ಚು ಸುಂದರವಾಗಿದೆ," ಎಂದು ಬಿಸಿಸಿಐ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

"ಕೊನೆಯ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಮತ್ತು ಐವರು ಫೀಲ್ಡರ್‌ಗಳು ಒಳಗಿದ್ದ ಕಾರಣ ಏಳು ರನ್‌ಗಳು ನನಗೆ ಹೆಚ್ಚು ಕಾಣಿಸಲಿಲ್ಲ. ಆದ್ದರಿಂದ ನನಗೆ ಅದೆಲ್ಲವೂ ಮುಖ್ಯವಲ್ಲ, ಏಕೆಂದರೆ ಹೊರಗೆ 10 ಫೀಲ್ಡರ್‌ಗಳು ಇದ್ದರೂ, ನಾನು ಹೊಡೆಯುವುದಕ್ಕೆ ಕಾಯುತ್ತಿದ್ದೆ," ಎಂದು ಹಾರ್ದಿಕ್ ಪಾಂಡ್ಯ ಪಂದ್ಯದ ನಂತರ ತಿಳಿಸಿದರು.

ಪಂದ್ಯದ ದಿಕ್ಕು ಬದಲಿಸಿದ ಬಾಬರ್ ಅಜಂ ವಿಕೆಟ್

ಪಂದ್ಯದ ದಿಕ್ಕು ಬದಲಿಸಿದ ಬಾಬರ್ ಅಜಂ ವಿಕೆಟ್

ಮೊದಲು ಬ್ಯಾಟಿಂಗ್ ಮಾಡಿದ ಎದುರಾಳಿ ಪಾಕಿಸ್ತಾನ ತಂಡ 19.5 ಓವರ್‌ಗಳಲ್ಲಿ 147ಕ್ಕೆ ಆಲೌಟ್ ಆಯಿತು. ಅನುಭವಿ ಸೀಮರ್ ಭುವನೇಶ್ವರ್ ಕುಮಾರ್ ಅವರ ನಾಲ್ಕು ಓವರ್‌ಗಳಲ್ಲಿ 26 ರನ್‌ಗಳಿಗೆ 4 ವಿಕೆಟ್ ಅಂಕಿಗಳೊಂದಿಗೆ ಮರಳಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರ ಪ್ರಮುಖ ವಿಕೆಟ್ ಪಡೆದು ಪಂದ್ಯದ ದಿಕ್ಕು ಬದಲಿಸಿದರು. ನಂತರ 148 ರನ್‌ಗಳ ಮೊತ್ತ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಗೆಲುವು ಸಾಧಿಸಿದರು. ಬುಧವಾರ ನಡೆಯಲಿರುವ ಎ ಗುಂಪಿನ ಮುಂದಿನ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ ಸೆಣಸಲಿದೆ.

Story first published: Monday, August 29, 2022, 15:26 [IST]
Other articles published on Aug 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+