ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬಳಿಕ, ಗುರುವಾರದಿಂದ ಆರಂಭವಾಗುವ ಏಕದಿನ ಸರಣಿಗಾಗಿ ಭಾರತೀಯ ಕ್ರಿಕೆಟಿಗರು ಸೋಮವಾರ ರಾತ್ರಿಯೇ ಬಾರ್ಬಡೋಸ್ಗೆ ಪ್ರಯಾಣಿಸಬೇಕಿತ್ತು.
ಎರಡನೇ ಟೆಸ್ಟ್ ಪಂದ್ಯದ 5ನೇ ದಿನ ಮಳೆಯಿಂದಾಗಿ ರದ್ದಾಗಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಫಿಟ್ ಆಗಲು ಸರಿಯಾದ ದಿನಚರಿಯನ್ನು ಅನುಸರಿಸಿದ್ದರಿಂದ ಆಟಗಾರರು ಸುಸ್ತಾಗಿದ್ದರು. ಇದೆಲ್ಲಾ ಗೊತ್ತಿದ್ದರೂ ಬಿಸಿಸಿಐ ಆಟಗಾರರಿಗೆ ರಾತ್ರಿ 11 ಗಂಟೆಗೆ ವಿಮಾನ ವ್ಯವಸ್ಥೆ ಮಾಡಿತು. ಆದರೆ ಮಧ್ಯರಾತ್ರಿ 3 ಗಂಟೆಗೆ ಬಂದ ಕಾರಣ, ಭಾರತೀಯ ಕ್ರಿಕೆಟಿಗರು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ.
ವರದಿಗಳ ಪ್ರಕಾರ, ಕ್ರಿಕೆಟಿಗರು ರಾತ್ರಿಯ ನಿದ್ರೆಯಿಂದ ವಂಚಿತರಾಗಿದ್ದಾರೆ ಮತ್ತು ಗುರುವಾರ, ಜುಲೈ 27ರಂದು ಪ್ರಾರಂಭವಾಗಲಿರುವ ಏಕದಿನ ಸರಣಿಯ ಮೊದಲು ಸರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ ಎಂದು ಕೆಲವು ಹಿರಿಯ ಆಟಗಾರರು ದೂರಿದ್ದಾರೆ.

ಅಲ್ಲದೆ, ಬಿಸಿಸಿಐನ ಉನ್ನತ ಅಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಆ ಬಳಿಕ, ಬಿಸಿಸಿಐ ಮಧ್ಯರಾತ್ರಿಯಲ್ಲಿ ಯಾವುದೇ ವಿಮಾನವನ್ನು ವ್ಯವಸ್ಥೆ ಮಾಡದಿರಲು ನಿರ್ಧರಿಸಿದೆ ಮತ್ತು ಭವಿಷ್ಯದಲ್ಲಿ ಆಟಗಾರರ ಪ್ರಯಾಣವನ್ನು ಉತ್ತಮವಾಗಿ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದೆ.
"ಆಟಗಾರರು ರಾತ್ರಿ 8:40ರ ಹೊತ್ತಿಗೆ ಹೋಟೆಲ್ನಿಂದ ವಿಮಾನ ನಿಲ್ದಾಣಕ್ಕೆ ಹೊರಟರು. ಆದರೆ, ವಿಮಾನ ನಿಲ್ದಾಣದಲ್ಲಿ ಬಹಳ ಸಮಯ ಕಾಯಬೇಕಾಯಿತು," ಎಂದು ಬಿಸಿಸಿಐ ತಿಳಿಸಿದೆ.
"ಟೆಸ್ಟ್ ಪಂದ್ಯದ ನಂತರ ಆಟಗಾರರು ಸ್ವಲ್ಪ ವಿಶ್ರಾಂತಿ ಬಯಸುವುದರಿಂದ ತಡರಾತ್ರಿಯ ವಿಮಾನಗಳ ಬದಲಿಗೆ ಬೆಳಗಿನ ವಿಮಾನವನ್ನು ಕಾಯ್ದಿರಿಸುವಂತೆ ತಂಡದ ಮ್ಯಾನೇಜ್ಮೆಂಟ್ ನಮಗೆ ವಿನಂತಿಸಿದೆ. ಬಿಸಿಸಿಐ ಇದಕ್ಕೆ ಸಮ್ಮತಿಸಿದೆ ಮತ್ತು ಮುಂದಿನ ವೇಳಾಪಟ್ಟಿಯನ್ನು ಪರಿಷ್ಕರಿಸಲು ಯೋಜಿಸುತ್ತಿದೆ," ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತೊಂದೆಡೆ, ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್ ಮತ್ತು ಉಮ್ರಾನ್ ಮಲಿಕ್ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವ ಸಲುವಾಗಿ ಈಗಾಗಲೇ ಭಾರತದಿಂದ ನೇರವಾಗಿ ಒಂದೆರಡು ದಿನಗಳ ಹಿಂದೆ ಬಾರ್ಬಡೋಸ್ ತಲುಪಿದ್ದಾರೆ.
ಗಮನಾರ್ಹವಾಗಿ, ಕೇವಲ ಎರಡು ತಿಂಗಳ ಅವಧಿಯಲ್ಲಿ 2023ರ ಏಕದಿನ ವಿಶ್ವಕಪ್ ಪ್ರಾರಂಭವಾಗಲಿದೆ. ಆಟಗಾರರು ಪಂದ್ಯಾವಳಿಯಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಮತ್ತು ತಮ್ಮ ಆಟವನ್ನು ಸಾಬೀತುಪಡಿಸಲು ಪ್ರಯತ್ನಿಸಲಿದ್ದಾರೆ.
ಇನ್ನು ಆಗಸ್ಟ್ 1ರಂದು ನಡೆಯಲಿರುವ ಅಂತಿಮ ಏಕದಿನ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಟ್ರಿನಿಡಾಡ್ಗೆ ಪ್ರಯಾಣಿಸುವ ಮೊದಲು ಮೊದಲ ಎರಡು ಏಕದಿನ ಪಂದ್ಯಗಳು ಬಾರ್ಬಡೋಸ್ನಲ್ಲಿ ನಡೆಯಲಿವೆ.
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ದಾಖಲೆಗಳು ಮತ್ತು ಸಾಧನೆಗಳ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಲು ಭಾರತ ತಂಡ ಸರಣಿಯನ್ನು ಗೆಲ್ಲುವ ಭರವಸೆಯಲ್ಲಿದೆ.