IND vs WI: 5ನೇ ಟಿ20 ಪಂದ್ಯಕ್ಕೆ ಮಳೆ ಕಾಟ?; ಹವಾಮಾನ ಮುನ್ಸೂಚನೆ, ಆಡುವ 11ರ ಬಳಗ

ಭಾನುವಾರ (ಆಗಸ್ಟ್ 7) ಫ್ಲೋರಿಡಾದ ಲಾಡರ್ಹಿಲ್ನಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ. ಈಗಾಗಲೇ ಸರಣಿಯನ್ನು 3-1 ಅಂತರದಲ್ಲಿ ಗೆದ್ದಿರುವ ಭಾರತ, ವೆಸ್ಟ್ ಇಂಡೀಸ್ ಪ್ರವಾಸವನ್ನು ಉನ್ನತ ಮಟ್ಟದಲ್ಲಿ ಮುಗಿಸುವ ಗುರಿ ಹೊಂದಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ರೋಹಿತ್ ಶರ್ಮಾ ನಾಯಕತ್ವದ ತಂಡವು ಇದೇ ಸ್ಥಳದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 59 ರನ್ಗಳ ಜಯದೊಂದಿಗೆ ಸರಣಿಯನ್ನು ಆರಾಮವಾಗಿ ವಶಕ್ಕೆ ತೆಗೆದುಕೊಂಡಿದೆ. ಶನಿವಾರದಂದು ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ಕೆಟ್ಟ ಹವಾಮಾನ ಮತ್ತು ಆನ್-ಆಂಡ್-ಆಫ್ ಮಳೆಯಿಂದಾಗಿ ತಡವಾಗಿ ಪ್ರಾರಂಭವಾಯಿತು, ಆದರೆ ಭಾನುವಾರದಂದು ಪರಿಸ್ಥಿತಿಗಳು ಪ್ರಕಾಶಮಾನವಾಗಿ ಕಾಣುತ್ತವೆ.
ಶೇ.70ರಷ್ಟು ಮೋಡದ ಹೊದಿಕೆಯೊಂದಿಗೆ 66ರಷ್ಟು ಆರ್ದ್ರತೆ ಇರುತ್ತದೆ. ಪಂದ್ಯವು ಮುಂದುವರೆದಂತೆ ತೇವಾಂಶವು ಬದಲಾಗುತ್ತದೆ, ಆದರೆ ಮೋಡ ಕವಿದ ವಾತಾವರಣ ಮುಂದುವರೆದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅಗ್ರಕ್ರಮಾಂಕದಲ್ಲಿ ಭಾರತ ಉತ್ತಮ ಆರಂಭ
ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅಗ್ರಕ್ರಮಾಂಕದಲ್ಲಿ ಭಾರತ ಉತ್ತಮ ಆರಂಭವನ್ನು ಹೊಂದಿತ್ತು. ಅವರ ಔಟಾದ ನಂತರ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ವೆಸ್ಟ್ ಇಂಡೀಸ್ ಬೌಲರ್ಗಳನ್ನು ದಂಡಿಸಿದರು, ವಿಶೇಷವಾಗಿ ಓಬೆಡ್ ಮೆಕಾಯ್ ಅವರ ನಾಲ್ಕು ಓವರ್ಗಳ ಕೋಟಾವನ್ನು 2/66 ಮುಗಿಸಿದರು.
ಇನ್ನು ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿರುವ ಕಾರಣ ಭಾರತೀಯ ತಂಡದಲ್ಲಿ ಕೆಲವು ಬದಲಾವಣೆ ಕಾಣಬಹುದಾಗಿದ್ದು, ಬಹುಶಃ ಆರಂಭಿಕ ಇಶಾನ್ ಕಿಶನ್ಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಬಹುದು.

ರೋಹಿತ್ನೊಂದಿಗೆ ಅಗ್ರಸ್ಥಾನದಲ್ಲಿರುವ ಇಶಾನ್ ಕಿಶನ್
ಇದುವರೆಗೆ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ದರು. ಯೋಜನೆಯು ಭಾರತಕ್ಕೆ ಯೋಗ್ಯ ಆರಂಭವನ್ನು ನೀಡಿತು, ಆದರೆ ಸೂರ್ಯಕುಮಾರ್ ಅವರ ಸ್ಕೋರ್ ಅನ್ನು ದೊಡ್ಡದಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮುಂಬೈ ಇಂಡಿಯನ್ಸ್ನ ಆರಂಭಿಕ ಪಾಲುದಾರ ರೋಹಿತ್ನೊಂದಿಗೆ ಅಗ್ರಸ್ಥಾನದಲ್ಲಿರುವ ಇಶಾನ್ಗೆ ಅವಕಾಶ ಕಲ್ಪಿಸಲು ಭಾರತವು ಸೂರ್ಯಕುಮಾರ್ ಅವರನ್ನು ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬಹುದು.
ಇನ್ನೊಂದು ಸಾಧ್ಯತೆ ಅಥವಾ ಬದಲಿಗೆ ಒಂದು ಪ್ರಶ್ನೆಯೆಂದರೆ, ಕುಲ್ದೀಪ್ ಯಾದವ್ಗೆ ಅವಕಾಶ ಸಿಗುತ್ತದೆಯೇ? ಫೆಬ್ರವರಿ 2022ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ಆಡಿದ ಎಡಗೈ ಮಣಿಕಟ್ಟಿನ ಸ್ಪಿನ್ನರ್, ಟಿ20 ಸರಣಿಗಾಗಿ ಕೆರಿಬಿಯನ್ಗೆ ಪ್ರಯಾಣಿಸಿದರು, ಆದರೆ ಬೆಂಚ್ ಕಾಯಿಸುತ್ತಿದ್ದಾರೆ.

ಭಾರತ ವಿರುದ್ಧ ವೆಸ್ಟ್ ಇಂಡೀಸ್ ಬಳಿ ಯಾವುದೇ ಅಸ್ತ್ರವಿಲ್ಲ
ಮತ್ತೊಂದೆಡೆ, ಈ ಸರಣಿಯಲ್ಲಿ ಭಾರತದ ಆಲ್ರೌಂಡ್ ಪ್ರದರ್ಶನದ ವಿರುದ್ಧ ವೆಸ್ಟ್ ಇಂಡೀಸ್ ಬಳಿ ಯಾವುದೇ ಅಸ್ತ್ರವಿಲ್ಲ. ಪ್ರತಿ ಪಂದ್ಯದಲ್ಲೂ ಭಾರತಕ್ಕಾಗಿ ಹೊಸಬರು ಉತ್ತಮ ಪ್ರದರ್ಶನ ನೀಡುತ್ತಾರೆ. ವೆಸ್ಟ್ ಇಂಡೀಸ್ ತಮ್ಮ ಸಂಯೋಜನೆಯನ್ನು ಗಂಭೀರವಾಗಿ ಮರುಪರಿಶೀಲಿಸಬೇಕು ಅಥವಾ ಭಾರತಕ್ಕೆ ಅಪಾಯವನ್ನುಂಟು ಮಾಡುವ ತಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಲು ಕೆಲಸ ಮಾಡಬೇಕಾಗುತ್ತದೆ.
ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಈ ಮೂವರ ಉತ್ತಮ ಬ್ಯಾಟಿಂಗ್ನಿಂದ ಭಾರತ ಐದು ವಿಕೆಟ್ಗಳ ನಷ್ಟಕ್ಕೆ 191 ರನ್ ಗಳಿಸಲು ನೆರವಾಯಿತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಬಳಿ ಇದಕ್ಕೆ ಯಾವುದೇ ಉತ್ತರ ಇರಲಿಲ್ಲ, ಏಕೆಂದರೆ ಅವರು ವೇಗವಾಗಿ ಸತತವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಇದ್ದರು. ವೆಸ್ಟ್ ಇಂಡೀಸ್ 132ಕ್ಕೆ ಆಲೌಟ್ ಆಯಿತು. ಅರ್ಷದೀಪ್ ಸಿಂಗ್ 3/12, ಅವೇಶ್ ಖಾನ್ 2/17, ರವಿ ಬಿಷ್ಣೋಯ್ 2/27 ಮತ್ತು ಅಕ್ಷರ್ ಪಟೇಲ್ 2/48 ಅಂಕಿಅಂಶಗಳ ಮೂಲಕ ಮಿಂಚಿದರು.

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್.
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ಡೊಮಿನಿಕ್ ಡ್ರೇಕ್ಸ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications