For Quick Alerts
ALLOW NOTIFICATIONS  
For Daily Alerts
 

Ind Vs Pak: ಈ ತರ ಆದ್ರೆ ಪಂದ್ಯ ಗೆಲ್ಲೋಕಾಗುತ್ತಾ? ಟೀ ಇಂಡಿಯಾ ಮೇಲೆ ಸುನಿಲ್ ಗವಾಸ್ಕರ್ ಕೋಪಕ್ಕೆ ಕಾರಣವೇನು?

India Vs Pakistan: Sunil Gavaskar Uhappy With Team Indias Players Training Session

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮುನ್ನು ಟೀಂ ಇಂಡಿಯಾ ಶುಕ್ರವಾರ ತರಬೇತಿ ಅವಧಿಯನ್ನು ಹೊಂದಿತ್ತು. ತರಬೇತಿಯಲ್ಲಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ ಸೇರಿದಂತೆ ಹಲವರು ಪಾಲ್ಗೊಂಡು ಸತತವಾಗಿ ಅಭ್ಯಾಸ ನಡೆಸಿದರು. ಆದರೆ, ಕೆಲವು ಪ್ರಮುಖ ಆಟಗಾರರು ಅಭ್ಯಾಸದಿಂದ ದೂರವುಳಿದು ವಿಶ್ರಾಂತಿ ಪಡೆದರು.

ಇದು ಐಚ್ಛಿಕ ತರಬೇತಿ ಅವಧಿಯಾಗಿದ್ದು, ಭಾಗವಹಿಸುವುದು ಅಥಬಾ ಬಿಡುವುದು ಆಟಗಾರರ ನಿರ್ಣಯವಾಗುತ್ತದೆ. ಭಾಗವಹಿಸಲೇಬೇಕೆಂಬ ಕಡ್ಡಾಯ ನಿಯಮವೇನು ಇರುವುದಿಲ್ಲ. ಇದೇ ವಿಚಾರದ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಆಟಗಾರರು ವಿಶ್ರಾಂತಿ ಪಡೆದಿರುವ ಬಗ್ಗೆ ಕೋಪಗೊಂಡಿರುವ ಸುನಿಲ್ ಗವಾಸ್ಕರ್, "ನೀವೇಕೆ ತರಬೇತಿ ನೀಡುವುದಿಲ್ಲ? ಈ ಐಚ್ಛಿಕ ತರಬೇತಿ ಪರಿಕಲ್ಪನೆಯನ್ನು ನಾನು ಒಪ್ಪುವುದಿಲ್ಲ ಮತ್ತು ಅರ್ಥವಾಗುತ್ತಿಲ್ಲ" ಎಂದು ಹೇಳಿದರು. ಐಚ್ಛಿಕ ಅಭ್ಯಾಸದ ಅವಧಿಗೆ ಆಟಗಾರರಿಗೆ ಆಯ್ಕೆ ನೀಡುವ ತಂಡದ ನಿರ್ಧಾರದ ಬಗ್ಗೆ ಗವಾಸ್ಕರ್ ಅಸಮಾಧಾನಗೊಂಡಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಶುಕ್ರವಾರ (ಅಕ್ಟೋಬರ್ 21) ಎಂಸಿಜಿಯಲ್ಲಿ ಐಚ್ಛಿಕ ತರಬೇತಿಯನ್ನು ಹೊಂದಿತ್ತು. ಹೆಚ್ಚಿನ ಆಟಗಾರರು ತರಬೇತಿಗೆ ಗೈರಾದರು. ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸದ ಟೀಮ್ ಇಂಡಿಯಾದ ವಿಧಾನವನ್ನು ಗವಾಸ್ಕರ್ ಟೀಕಿಸಿದರು ಮತ್ತು "ನಾನು ಒಪ್ಪುವುದಿಲ್ಲ" ಎಂದು ಹೇಳಿದರು.

ಅಭ್ಯಾಸ ಮಾಡದ ಬಗ್ಗೆ ಕೋಪ

ಅಭ್ಯಾಸ ಮಾಡದ ಬಗ್ಗೆ ಕೋಪ

ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಯಿತು. ನಂತರ ಟೀಂ ಇಂಡಿಯಾ ಮೆಲ್ಬೋರ್ನ್‌ಗೆ ಆಗಮಿಸಿ ಒಂದು ದಿನ ರಜೆ ಪಡೆಯಿತು. ಆದರೆ, ನಂತರ ಶುಕ್ರವಾರ ಅಭ್ಯಾಸದಲ್ಲಿ ಭಾಗವಹಿಸಬೇಕಾಗಿತ್ತು. ನೀವು ಇಷ್ಟು ಹಗುರವಾಗಿ ಪರಿಗಣಿಸಿದರೆ, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೆಲ್ಲುವುದಾದರೂ ಹೇಗೆ? ಎಂದು ಹೇಳಿದ್ದಾರೆ.

ಅಭ್ಯಾಸದಲ್ಲಿ ಎಲ್ಲಾ ಆಟಗಾರರೂ ಭಾಗವಹಿಸಬೇಕಾಗಿತ್ತು. ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯಗಳಲ್ಲಿ ಈ ರೀತಿ ಅಭ್ಯಾಸದ ಅವಧಿಯನ್ನು ತಪ್ಪಿಸಿಕೊಳ್ಳುವುದು ಉತ್ತಮ ನಡೆಯಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಟೀಂ ಇಂಡಿಯಾ ಈ ತಂಡದೊಂದಿಗೆ ಟಿ20 ವಿಶ್ವಕಪ್‌ ಫೈನಲ್ ಆಡಲಿದೆ ಎಂದ ಜಹೀರ್ ಖಾನ್

ತರಬೇತಿಯಲ್ಲಿ ಭಾಗವಹಿಸುವುದು ಕಡ್ಡಾಯವಾಗಬೇಕು

ತರಬೇತಿಯಲ್ಲಿ ಭಾಗವಹಿಸುವುದು ಕಡ್ಡಾಯವಾಗಬೇಕು

ನ್ಯೂಜಿಲೆಂಡ್ ವಿರುದ್ಧದ ಭಾರತದ ಕೊನೆಯ ಅಭ್ಯಾಸ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರಿಂದ, ಎಲ್ಲಾ ಆಟಗಾರರು ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಸಿದ್ಧರಾಗಲು ಈ ಅಭ್ಯಾಸದ ಅವಧಿಯನ್ನು ಬಳಸಬೇಕಾಗಿತ್ತು ಎಂದು ಹೇಳಿದ್ದಾರೆ.

ತರಬೇತಿ ಅವಧಿಯಲ್ಲಿ ಭಾಗವಹಿಸುವ ಬಗ್ಗೆ ಆಟಗಾರರಿಗೆ ಆಯ್ಕೆಯನ್ನು ಬಿಟ್ಟುಕೊಡುವುದು ಸೂಕ್ತವಲ್ಲ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ನಾಯಕ ಮತ್ತು ತರಬೇತುದಾರರು ಮಾತ್ರ ಐಚ್ಛಿಕ ಅಭ್ಯಾಸದ ಅವಧಿಯಲ್ಲಿ ಕರೆಯನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಭಾರತ ತಂಡದ ಹಲವು ಆಟಗಾರರು ಅಭ್ಯಾಸದ ವೇಳೆ ಗೈರಾಗಿದ್ದರೆ, ಪಾಕಿಸ್ತಾನದ ಎಲ್ಲಾ ಆಟಗಾರರು ತರಬೇತಿಯಲ್ಲಿ ಹಾಜರಾಗಿದ್ದರು.

ನಾಯಕ ಮತ್ತು ಕೋಚ್ ನಿರ್ಧಾರ ತೆಗೆದುಕೊಳ್ಳಬೇಕು

ನಾಯಕ ಮತ್ತು ಕೋಚ್ ನಿರ್ಧಾರ ತೆಗೆದುಕೊಳ್ಳಬೇಕು

ಒಂದು ಆಯ್ಕೆಯನ್ನು ನೀಡುವುದು ನಾಯಕ ಮತ್ತು ಕೋಚ್ ಮಾತ್ರ ಮಾಡಬೇಕೆಂದು ನಾನು ನಂಬುತ್ತೇನೆ. ಕಳೆದ ಪಂದ್ಯದಲ್ಲಿ ನೀವು ಶತಕ ಬಾರಿಸಿದ್ದರೆ, ನಿಮಗೆ ಅಷ್ಟು ಆತ್ಮವಿಶ್ವಾಸ ಇದ್ದರೆ, ನಾಯಕ ಮತ್ತು ಕೋಚ್ ನಿಮಗೆ ಅಭ್ಯಾಸ ಮಾಡದಿರುವ ಆಯ್ಕೆಯನ್ನು ನೀಡಬಹುದು. ಆಗ ನೀವು ವಿಶ್ರಾಂತಿ ಪಡೆಯುವ ಆಯ್ಕೆಯನ್ನು ಸರಿ ಎಂದು ಹೇಳಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.

ಅದೇ ರೀತಿ 20-30 ಓವರ್‌ಗಳನ್ನು ಬೌಲ್ ಮಾಡಿದ ಬೌಲರ್‌ನೊಂದಿಗೆ ಮತ್ತು ಭುಜದ ನೋವು ಅಥವಾ ಇನ್ನು ಯಾವುದೇ ನೋವು ಇದ್ದರೆ, ನಾಯಕ ಮತ್ತು ಕೋಚ್ ಆ ಬೌಲರ್‌ಗೆ ತರಬೇತಿಗೆ ಬಾರದಿರುವ ಆಯ್ಕೆಯನ್ನು ನೀಡಬಹುದು ಎಂದು ಹೇಳಿದ್ದಾರೆ.

ಶನಿವಾರದ ಅಭ್ಯಾಸದಲ್ಲಿ ಎಲ್ಲರೂ ಭಾಗಿ

ಶನಿವಾರದ ಅಭ್ಯಾಸದಲ್ಲಿ ಎಲ್ಲರೂ ಭಾಗಿ

ಶುಕ್ರವಾರ ಎಮ್‌ಸಿಜಿಯಲ್ಲಿ ಕೆಲವೇ ಕೆಲವು ಭಾರತೀಯ ಕ್ರಿಕೆಟ್ ಆಟಗಾರರು ಅಭ್ಯಾಸ ನಡೆಸಿದ ನಂತರ, ಟೀಮ್ ಇಂಡಿಯಾ ಪೂರ್ಣ ಪ್ರಮಾಣದ ಅಭ್ಯಾಸವನ್ನು ಶನಿವಾರ ಯೋಜಿಸಲಾಗಿದೆ. ಮೊದಲ ದಿನದಂದು, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಅಭ್ಯಾಸದ ಅವಧಿಗೆ ಕಾಣಿಸಿಕೊಂಡರು, ವಿರಾಟ್ ಕೊಹ್ಲಿ ಸೇರಿದಂತೆ ಇತರರು ಅದನ್ನು ಗೈರಾಗಿದ್ದರು. ಎರಡನೇ ದಿನದಂದು ಎಲ್ಲಾ ಆಟಗಾರರು ತರಬೇತಿ ಅವಧಿಕೆ ಹಾಜರಾಗಲಿದ್ದಾರೆ.

Story first published: Saturday, October 22, 2022, 10:24 [IST]
Other articles published on Oct 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+