
ದುಬೈನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ರಾಜಸ್ಥಾನ್ ರಾಯಲ್ಸ್ (ಆರ್ಆರ್) ಪಂದ್ಯದಲ್ಲಿ 37 ರನ್ಗಳಿಂದ ಜಯಗಳಿಸದ ಕೆಕೆಆರ್ ಎರಡನೇ ಜಯ ದಾಖಲಿಸಿತು. ಗೆಲುವಿನೊಂದಿಗೆ ಕೆಕೆಆರ್ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಏರಿತು.
ಕಳೆದ ರಾತ್ರಿ ದುಬೈ ಅಂಗಳದಲ್ಲಿ ಕೆಕೆಆರ್ ಪ್ರದರ್ಶನ ಕಂಡು ಸಖತ್ ಖುಷಿಯಾದ ಫ್ರಾಂಚೈಸಿ ಮಾಲೀಕ ಶಾರುಖ್ ಖಾನ್ ತಂಡವನ್ನು ಹುರಿದುಂಬಿಸಿದ್ದಾರೆ. ಅದರಲ್ಲೂ ಕೆಕೆಆರ್ ಗೆದ್ದ ಮೇಲೆ ಸಚಿನ್ ಪ್ರತಿಕ್ರಿಯೆ ನೋಡಿ ಮತ್ತಷ್ಟು ಸಂತೋಷಗೊಂಡಿದ್ದಾರೆ.
ಕೆಕೆಆರ್ ಗೆಲುವಿನ ನಂತರ, ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಶುಬ್ಮನ್ ಗಿಲ್, ಇಯಾನ್ ಮೊರ್ಗಾನ್ ಮತ್ತು ಆಂಡ್ರೆ ರಸ್ಸೆಲ್ ಅವರನ್ನು ಪ್ರಶಂಸಿದರು ಮತ್ತು ಯುವ ವೇಗದ ಬೌಲರ್ ಕಮಲೇಶ್ ನಾಗರಕೋಟಿ ಅವರ ಬಗ್ಗೆ ವಿಶೇಷ ಉಲ್ಲೇಖವನ್ನು ನೀಡಿದರು. ಸಚಿನ್ ಅವರ ಟ್ವೀಟ್ಗೆ ಉತ್ತರಿಸಿದ ಶಾರುಖ್ ಖಾನ್ ಕೂಡ ತಮ್ಮ ತಂಡದ ಯುವಕರು ಹೊಳೆಯುತ್ತಿರುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು.
"ಈಗ ನಾನು @KKRiders ಹುಡುಗರ ಬಗ್ಗೆ ಏನು ಹೇಳಿದರೂ ಅದು ಅರ್ಥವಾಗುವುದಿಲ್ಲ. ಏಕೆಂದರೆ ಮಹಾನ್ ವ್ಯಕ್ತಿ ಮಾತನಾಡಿದ್ದಾರೆ. ತಂಡದಲ್ಲಿರುವ ಎಲ್ಲ ಯುವಕರ ಪ್ರದರ್ಶನ ಕಂಡು ತುಂಬಾ ಸಂತೋಷವಾಗಿದೆ. ಸ್ವಲ್ಪ ದೂರದಿಂದ ಹುಡುಗರಿಗೆ ನನ್ನ ಹೆಚ್ಚಿನ ಪ್ರೀತಿ, "ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಕಳೆದ ಪಂದ್ಯದಲ್ಲಿ ಕಮಲೇಶ್ ನಾಗರಕೋಟಿ ಮತ್ತು ಶಿವಂ ಮಾವಿ ಅದ್ಭುತ ಬೌಲಿಂಗ್ ಸ್ಪೆಲ್ ಮೂಲಕ ಮಿಂಚಿದ್ರೆ, ಶುಭ್ಮನ್ ಗಿಲ್ ಎಂದಿನಂತೆ ಬ್ಯಾಟಿಂಗ್ ಹೊಳಪು ಪ್ರದರ್ಶಿಸಿದ್ರು.