ಮೈಸೂರು, ಸೆಪ್ಟೆಂಬರ್ 6: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಇಂದು (ಸೆ. 6) 2018ರ ಕರ್ನಾಟಕ ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯದಲ್ಲಿ ನವೀನ್ ಎಂಜಿ ಅವರ 43 ರನ್ ನೆರವಿನೊಂದಿಗೆ ಬಿಜಾಪುರ್ ಬುಲ್ಸ್ ತಂಡ ಕೆಪಿಎಲ್ 2018ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಿಜಾಪುರ್ ಬುಲ್ಸ್ 13.5 ಓವರ್ ನಲ್ಲಿ 3 ವಿಕೆಟ್ ಕಳೆದು 106 ರನ್ ಪೇರಿಸುವುದರೊಂದಿಗೆ 7 ವಿಕೆಟ್ ಗಳಿಂದ ಗೆಲುವನ್ನಾಚರಿಸಿತು. ಬೆಂಗಳೂರು 102 ರನ್ ಗುರಿ ನೀಡಿತ್ತು.
Full innings update! #KPLFinal2018 #NammaKPL #KPL2018 #BisiBisiCrickettu #BengaluruVsBijapur pic.twitter.com/6ThGIpeUZ7
— Namma KPL (@KPLKSCA) September 6, 2018
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬೆಂಗಳೂರು 20 ಓವರ್ ಮುಕ್ತಾಯಕ್ಕೆ 10 ವಿಕೆಟ್ ಕಳೆದು 101 ರನ್ ಪೇರಿಸಿದೆ. ಕೆಬಿ ಪವನ್ 22, ಮನೋಜ್ ಭಂಡಾಜೆ 18, ಅರ್ಷದೀಪ್ ಸಿಂಗ್ 14 ರನ್ ಪೇರಿಸಿದ್ದು ಬಿಟ್ಟರೆ ಉಳಿದ ಎಲ್ಲರೂ 9ರೊಳಗೆ ಔಟಾದರು.
ಬೆಂಗಳೂರು ಬ್ಲಾಸ್ಟರ್ಸ್ 14 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 71 ರನ್ ಪೇರಿಸಿತ್ತು. ಮನೋಜ್ ಭಂಡಾಜೆ ಮತ್ತು ಅರ್ಷದೀಪ್ ಸಿಂಗ್ ಕ್ರೀಸ್ ನಲ್ಲಿದ್ದರು.
5 ಓವರ್ ಮುಕ್ತಾಯಕ್ಕೆ 25 ರನ್ನಿಗೆ ಬೆಂಗಳೂರಿನ 2 ವಿಕೆಟ್ ಪತನ. ಚೇತನ್ ವಿಲಿಯಮ್ 1, ನಾಯಕ ರಾಬಿನ್ ಉತ್ತಪ್ಪ 9 ರನ್ ನೊಂದಿಗೆ ನಿರ್ಗಮಿಸಿದ್ದಾರೆ. ಕೆಬಿ ಪವನ್ ಮತ್ತು ಪವನ್ ದೇಶಪಾಂಡೆ ಕ್ರೀಸ್ ನಲ್ಲಿದ್ದರು.
ಟಾಸ್ ಗೆದ್ದಿರುವ ಬಿಜಾಪುರ್ ಬುಲ್ಸ್ ಫೀಲ್ಡಿಂಗ್ ಆಯ್ದುಕೊಂಡಿದೆ. ರಾಬಿನ್ ಉತ್ತಪ್ಪ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ಟೂರ್ನಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದು, ಈ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಬಿಜಾಪುರ್ ಕೂಡ ಭರ್ಜರಿ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ.
ಬೆಂಗಳೂರು ತಂಡ: ಕೆಬಿ ಪವನ್ (ವಿಕೆ), ರಾಬಿನ್ ಉತ್ತಪ್ಪ (ಸಿ), ಮಿತ್ರಕಾಂತ ಯಾದವ್, ಪವನ್ ದೇಶಪಾಂಡೆ, ಶ್ರೀಯಾಸ್ ಗೋಪಾಲ್, ಅರ್ಶ್ದೀಪ್ ಸಿಂಗ್ ಬ್ರಾರ್, ಮನೋಜ್ ಎಸ್. ಭಂಡಾಜೆ, ಚೇತನ್ ವಿಲಿಯಂ, ಅಭಿಷೇಕ್ ಭಟ್, ವಿ ಕೌಶಿಕ್, ಆನಂದ್ ದೊಡ್ಡಮನಿ.
ಬಿಜಾಪುರ್ ತಂಡ: ಭಾರತ್ ಚಿಪ್ಲಿ (ಸಿ), ಕೆಎಲ್ ಶ್ರೀಜಿತ್ (ವಿ.ಕೆ), ನವೀನ್ ಎಂಜಿ, ಮೀರ್ ಕುಯೇನ್ ಅಬ್ಬಾಸ್, ಕೆಎನ್ ಭಾರತ್, ಶಿಶಿರ್ ಭವಾನ, ಸುನೀಲ್ ರಾಜು, ಭವೇಶ್ ಗುಲೆಚಾ, ಕೆ.ಸಿ. ಕಾರಿಯಪ್ಪ, ಕೆಪಿ ಅಪ್ಪಣ್ಣ, ಸೂರಜ್ ಕಾಮತ್, ರೋನಿತ್ ಮೋರೆ, ರಿಷಬ್ ಸಿಂಗ್.