ಬೆಂಗಳೂರು, ಫೆ.16: ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಯುವರಾಜ್ ಸಿಂಗ್ ಅವರ ತಂದೆ ಹೊಸ ಬಾಂಬ್ ಸಿಡಿಸಿದ್ದಾರೆ. ವಿಶ್ವಕಪ್ ತಂಡದಿಂದ ನನ್ನ ಮಗನನ್ನು ಹೊರಹಾಕಿದ್ದು ಎಂಎಸ್ ಧೋನಿ ಎಂದು ನೇರವಾಗಿ ಆರೋಪಿಸಿದ್ದಾರೆ.
ಇಲ್ಲಿ ತನಕ ಗುಸುಗುಸು ಪಿಸು ಪಿಸು ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದ್ದ ಬಹುಚರ್ಚಿತ ವಿಷಯ ಈಗ ಯುವರಾಜ್ ಸಿಂಗ್ ತಂದೆ ಬಾಯಿಂದ ಹೊರ ಬಿದ್ದಿದೆ.

ಐಪಿಎಲ್ 8 ರ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯುವರಾಜ್ ಸಿಂಗ್ ಅವರನ್ನು 16 ಕೋಟಿ ರು ಕೊಟ್ಟು ಸೋಮವಾರ ಬೆಳಗ್ಗೆ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಸಂಪೂರ್ಣ ಅಪ್ಡೇಟ್ಸ್ ಇಲ್ಲಿ ಓದಿ].
ಅದರೆ, ವಿಶ್ವಕಪ್ ಸಂಭಾವ್ಯ 30 ಜನರ ತಂಡದಿಂದಲೂ ಯುವರಾಜ್ ಸಿಂಗ್ ಅವರನ್ನು ಕಡೆಗಣಿಸಲಾಗಿತ್ತು. ಈ ಬಗ್ಗೆ ಅಪಾರ ಆಕ್ರೋಶ ವ್ಯಕ್ತವಾಗಿತ್ತು. ಕೊನೆ ಕೊನೆಗೆ ಗಾಯಾಳು ರವೀಂದ್ರ ಜಡೇಜ ಬದಲಿಗೆ ಯುವರಾಜ್ ಸಿಂಗ್ ಸೇರುವ ಸಾಧ್ಯತೆಯಿದೆ ಎಂಬ ಸುದ್ದಿಯೂ ಹಬ್ಬಿತ್ತು.