
ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೀಡರ್ ಮಹೇಂದ್ರ ಸಿಂಗ್ ಮೈದಾನದಲ್ಲಿ ತಮ್ಮ ಕ್ರೀಡಾಸ್ಫೂರ್ತಿಯಿಂದಲೇ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಚೆನ್ನೈ 20ರನ್ಗಳ ಜಯಭೇರಿ ಬಾರಿಸಿದ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಎದುರಾಳಿ ತಂಡದ ಯುವ ಆಟಗಾರರಿಗೆ ತನ್ನಲ್ಲಿದ ಅನುಭವ, ಜ್ಞಾನ ಹಾಗೂ ಬುದ್ದಿವಂತಿಕೆಯನ್ನು ಕಿರಿಯ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆ.
ಸನ್ರೈಸರ್ಸ್ ಹೈದ್ರಾಬಾದ್ ತಂಡದ ಯುವ ಆಟಗಾರರಾದ ಪ್ರಿಯಾಮ್ ಗರ್ಗ್ , ಬೌಲಿಂಗ್ ಆಲ್ರೌಂಡರ್ ಅಭಿಷೇಕ್ ಶರ್ಮಾ ಹಾಗೂ ಅನುಭವಿ ಸ್ಪಿನ್ನರ್ ಶಬಾಜ್ ನದೀಮ್ಗೆ ತನ್ನಲ್ಲಿನ ಕ್ರಿಕೆಟ್ ಜ್ಞಾನವನ್ನು ತಿಳಿಸಿದರು.
ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಗೆಲುವಿನ ಬಳಿಕ ಎದುರಾಳಿ ನಾಯಕ ಕೆ.ಎಲ್ ರಾಹುಲ್ ಹಾಗೂ ಓಪನಿಂಗ್ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ಗೆ ಧೋನಿ ಇದೇ ರೀತಿ ತನ್ನಲ್ಲಿದ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದರು.