ಆಟಗಾರರಿಗೆ ಮಾತ್ರ ವೀಸಾ ಸಾಲಲ್ಲ
"ಈ ವೀಸಾ ಕೇವಲ ತಂಡದ ಆಟಗಾರರಿಗೆ ಮತ್ತು ಸ್ಕ್ವಾಡ್ಗೆ ಮಾತ್ರವಲ್ಲ. ನಾವು ನಮ್ಮ ಅಭಿಮಾನಿಗಳಿಗೆ ಪತ್ರಕರ್ತರಿಗೆ ಹಾಗೂ ಮಂಡಳಿಯ ಸಿಬ್ಬಂದಿಗಳಿಗೂ ವೀಸಾ ಅಗತ್ಯವಿದೆ. ಇದು ಐಸಿಸಿಯ ಆಯೋಜನಾ ಒಪ್ಪಂದದಲ್ಲಿ ಇದೆ. ಹಾಗಾಗಿ ನಾವು ನಮ್ಮ ಬೇಡಿಕೆಯನ್ನು ಸಲ್ಲಿಸುತ್ತೇವೆ" ಎಂದು ಪಿಸಿಬಿ ಮುಖ್ಯಸ್ಥ ಇಹ್ಸಾನ್ ಮನಿ ಹೇಳಿದ್ದಾರೆ.
ಮಾರ್ಚ್ ಅಂತ್ಯಕ್ಕೆ ಸ್ಪಷ್ಟನೆ ದೊರೆಯಬೇಕು
"ಈ ಬಗ್ಗೆ ಐಸಿಸಿ ಕೂಡ ನಿರ್ಲಕ್ಷ್ಯವನ್ನು ವಹಿಸಿದೆ. ಅವರು ಹೇಳಿದಂತೆ ಇವೆಲ್ಲವೂ ಡಿಸೆಂಬರ್ 31 2020ರ ವೇಳೆಗೆ ನಡೆಯಬೇಕಾಗಿತ್ತು. ಆದರೆ ಅದು ಆಗಿಲ್ಲ. ಹೀಗಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಾನು ನೇರವಾಗಿ ಐಸಿಸಿ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಬಳಿಕ ಐಸಿಸಿ ಮ್ಯಾನೇಜ್ಮೆಂಟ್ ಜೊತೆಯೂ ಮಾತುಕತೆ ನಡೆಸಿದ್ದು ಈ ಬಗ್ಗೆ ಸ್ಪಷ್ಟ ನಿರ್ಧಾರ ಮಾರ್ಚ್ ಅಂತ್ಯದ ಒಳಗೆ ದೊರೆಯಬೇಕೆಂದು ಕೇಳಿದ್ದೇನೆ" ಎಂದಿದ್ದಾರೆ ಇಹ್ಸಾನ್ ಮನಿ.
ಇಲ್ಲವಾದರೆ ಯುಎಇನಲ್ಲಿ ವಿಶ್ವಕಪ್ ಆಯೋಜನೆಯಾಗಲಿ
"ಅವರು ಮಾರ್ಚ್ ಅಂತ್ಯದ ಮುನ್ನ ಎಂಬ ಭರವಸೆಯನ್ನು ನೀಡಿದ್ದಾರೆ. ಅದರೆ ಅದು ಸಾಧ್ಯವಾಗದಿದ್ದರೆ ಭಾರತದಲ್ಲಿ ನಡೆಯಬೇಕಾದ ಟೂರ್ನಿ ಯುಎಇನಲ್ಲಿ ನಡೆಯಲಿ ಎಂದು ನಾನು ಬೇಡಿಕೆಯನ್ನು ಮುಂದಿಡುತ್ತೇನೆ. ಐಸಿಸಿ ಬಳಿ ಪರ್ಯಾಯ ಯೋಜನೆಗಳು ಇರುತ್ತವೆ. ಭಾರತದಲ್ಲಿ ಆಯೋಜನೆ ಸಾಧ್ಯವಾಗದಿದ್ದರೆ ಅದು ಪರ್ಯಾಯ ಸ್ಥಳದಲ್ಲಿ ಆಯೋಜನೆಯಾಗುತ್ತದೆ" ಎಂದು ಇಹ್ಸಾನ್ ಮನಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ