
ಅರ್ಥಪೂರ್ಣ ಮಾತುಗಳು
ಪುಲ್ವಾಮಾ ದಾಳಿ ಮತ್ತು ಪ್ರತೀಕಾರವಾಗಿ ಭಾರತ-ಪಾಕ್ ಕ್ರಿಕೆಟ್ ತಂಡಗಳ ಬಗೆಗಿನ ನಿಲುವಿನ ಕುರಿತಾಗಿ ಟ್ವಿಟರ್ ವಿಡಿಯೋದಲ್ಲಿ ಮಾತನಾಡಿರುವ ಆದಿಲ್, ಇತ್ತಂಡಗಳ ವಿಶ್ವಕಪ್ ಪಂದ್ಯ ನಡೆದರೆ ಚೆನ್ನ ಎಂದು ಹೇಳಿಕೊಂಡಿದ್ದಾರೆ. ಯಾಕೆ ನಡೆಯಬೇಕು ಎನ್ನುವುದಕ್ಕೆ ಆದಿಲ್ ಕೊಟ್ಟಿರೋ ಕಾರಣಗಳೂ ಅರ್ಥಪೂರ್ಣವಾಗಿವೆ.

ದಾಳಿ ಬಳಿಕವೂ ಅದೇ ಕ್ರಿಕೆಟ್ ಪ್ರೀತಿ
ಪುಲ್ವಾಮಾ ದಾಳಿ ನಡೆದ ಬಳಿಕವೂ ಪಾಕಿಸ್ತಾನ-ಭಾರತ ಕ್ರಿಕೆಟ್ ಅಭಿಮಾನಿಗಳು ಹಿಂದಿದ್ದ ಅದೇ ಕ್ರಿಕೆಟ್ ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಅಭಿಮಾನದ ವಿಚಾರಕ್ಕೆ ಬಂದರೆ ಇಲ್ಲಿ ಹಗೆಯ ಛಾಯೆ ಇಣುಕೋದಿಲ್ಲ, ಇಣುಕಿದರೆ ಅದೂ ಸರಿಯೂ ಅಲ್ಲ ಎಂಬರ್ಥದಲ್ಲಿ ತಾಜ್ ಮಾತನಾಡಿದ್ದಾರೆ.

ಆಡಕೂಡದು ಎಂದಿದ್ದ ಭಜ್ಜಿ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಮೃತರಾದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್, ಈ ಬಾರಿ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಕೂಡದು ಎಂದಿದ್ದರು.

ಕ್ರಿಕೆಟ್ ಅಸ್ತ್ರ ಬಳಸಿದ ಬಿಸಿಸಿಐ
ಭಯೋತ್ಮಾದನೆ ವಿಚಾರದಲ್ಲಿ ವಿಶ್ವಕ್ಕೆ ತಲೆನೋವಾಗಿರುವ ಪಾಕ್ ಕಿವಿ ಹಿಂಡುವ ಬಗೆಯನ್ನು ಮನಗಂಡಿದ್ದ ಬಿಸಿಸಿಐ ಕ್ರಿಕೆಟ್ ಅನ್ನು ಅಸ್ತ್ರವಾಗಿ ಬಳಸಲು ಯೋಚಿಸಿತ್ತು. 2019ರ ವಿಶ್ವಕಪ್ನಲ್ಲಿ ಪಾಕ್ ನಿಷೇಧಿಸುವಂತೆ ಬಿಸಿಸಿಯು ಐಸಿಸಿಯನ್ನು ಕೋರಲು ಮುಂದಾಗಿತ್ತು.


Click it and Unblock the Notifications













