ಭಯೋತ್ಪಾದನಾ ಬೆದರಿಕೆ ಇದ್ದರೂ ಪಾಕಿಸ್ತಾನಕ್ಕೆ ಶ್ರೀಲಂಕಾ ಪ್ರವಾಸ!?

ಇಸ್ಲಮಾಬಾದ್, ಸೆಪ್ಟೆಂಬರ್ 14: ಶ್ರೀಲಂಕಾ ಕ್ರಿಕೆಟ್ ತಂಡ, ಪಾಕಿಸ್ತಾನದಲ್ಲಿ ಭಯೋತ್ಪಾದನಾ ದಾಳಿಯ ಬೆದರಿಕೆಯಿದ್ದರೂ ಪಾಕ್ಗೆ ಪ್ರವಾಸ ಕೈಗೊಳ್ಳಲಿದೆಯಾ? ಹೌದು ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ (ಪಿಸಿಬಿ) ಅಧ್ಯಕ್ಷ ಎಹ್ಸಾನ್ ಮನಿ.
ಲಾಹೋರ್ನಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಹ್ಸಾನ್, ಪಾಕಿಸ್ತಾನಕ್ಕೆ ಶ್ರೀಲಂಕಾ ಪ್ರವಾಸ ಸರಣಿಯ ಬಗ್ಗೆ ತಮಗೆ ಸಕಾರಾತ್ಮಕ ನಂಬಿಕೆಯಿದೆ ಎಂದಿದ್ದಾರೆ. ಲಂಕಾ ಕ್ರಿಕೆಟ್ ತಂಡವನ್ನು ಪಾಕ್ಗೆ ಬರಮಾಡಿಕೊಳ್ಳುವ ಬಗ್ಗೆ ಚರ್ಚೆಯೂ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
'ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶ್ರೀಲಂಕಾ ಕ್ರಿಕೆಟ್ ತಂಡದ ಕುರಿತು ನಕಾರಾತ್ಮಕ ಅಬಿಪ್ರಾಯವಿಲ್ಲ. ಇಲ್ಲಿಗೆ ಬರೋದಿಲ್ಲ ಎಂತ ಲಂಕಾ ಕ್ರಿಕೆಟಿಗರು ಹೇಳಿಲ್ಲ,' ಎಂದು ಎಹ್ಸಾನ್ ಮನಿ ಹೇಳಿದ್ದಾರೆ. ಪಾಕ್ ಪ್ರವಾಸ ಸರಣಿ ವೇಳೆ ಭಯೋತ್ಪಾದನ ದಾಳಿಯ ಭಯದಿಂದ ಲಂಕಾದ 10 ಪ್ರಮುಖ ಆಟಗಾರರು ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ತಾಳಿದ್ದರು.
ಲಾಹೋರ್ನಲ್ಲಿನ ಟೆಸ್ಟ್ ಪಂದ್ಯವೊಂದಕ್ಕಾಗಿ 2009ರ ಮಾರ್ಚ್ನಲ್ಲಿ ಶ್ರೀಲಂಕಾ ತಂಡ ಪಾಕ್ಗೆ ತೆರಳಿದ್ದಾಗ ಲಂಕಾ ಆಟಗಾರರಿದ್ದ ಬಸ್ನ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಅದಾಗಿ ಇದೇ ಮೊದಲ ಬಾರಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಸಂಪೂರ್ಣ ಪ್ರವಾಸ ಸರಣಿಗಾಗಿ ಪಾಕ್ಗೆ ತೆರಳುವುದರಲ್ಲಿದೆ.
ಶ್ರೀಲಂಕಾ ತಂಡದ ಪಾಕಿಸ್ತಾನ ಪ್ರವಾಸ ಸರಣಿ 3 ಪಂದ್ಯಗಳ ಏಕದಿನ, 3 ಪಂದ್ಯಗಳ ಟಿ20 ಸರಣಿಗಳನ್ನು ಒಳಗೊಂಡಿದೆ. ಸೆಪ್ಟೆಂಬರ್ 27ರಂದು ಕರಾಚಿಯಲ್ಲಿ ಏಕದಿನ ಪಂದ್ಯದ ಮೂಲಕ ಪ್ರವಾಸ ಪಂದ್ಯಗಳು ನಡೆಯುವುದರಲ್ಲಿದೆ. ಅಕ್ಟೋಬರ್ 9ರಂದು ಕೊನೇ ಟಿ20 ಪಂದ್ಯದ ಮೂಲಕ ಸರಣಿ ಕೊನೆಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications