
ಧೋನಿ ನಾಯಕತ್ವ
ಐಪಿಎಲ್ ಆರಂಭವಾಗಿದ್ದರಿಂದ ಇದುವರೆಗೂ ಸಿಎಸ್ಕೆ ತಂಡವನ್ನು ಧೋನಿ, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. 2 ವರ್ಷಗಳ ನಿಷೇಧದ ಅವಧಿಯನ್ನು ಹೊರತು ಪಡಿಸಿದರೆ, ಇದುವರೆಗೂ ಆಡಿರುವ 9 ಟೂರ್ನಿಗಳಲ್ಲಿ 7 ಬಾರಿ ತಂಡವನ್ನು ಫೈನಲ್ ಹಂತಕ್ಕೇರಿಸಿದ್ದಾರೆ. ಮುಂದಿನ ಐಪಿಎಲ್ ನಲ್ಲಿ ಧೋನಿ ಆಡುವುದು ಅನುಮಾನ ಎಂಬ ಮಾತುಗಳು ಕ್ರೀಡಾವಲಯದಲ್ಲಿ ಕೇಳಿ ಬರುತ್ತಿರುವುದರಿಂದ ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಟ್ರೋಫಿ ಎತ್ತಿಕೊಳ್ಳವುದು ಬಹುತೇಕ ಖಚಿತವಾಗಿದೆ.

ರೈನ ಭರವಸೆ
ಈ ನಡುವೆ ಚೆನ್ನೈ ತಂಡದ ಮತ್ತೊಬ್ಬ ದಾಂಡಿಗ ಸುರೇಶ್ ರೈನ ಅವರೂ ಮಹೇಂದ್ರ ಸಿಂಗ್ ಧೋನಿಗಾಗಿ ನಾವು 2018ರ ಕಪ್ ಗೆದ್ದೇ ಗೆಲ್ತೀವಿ ಎಂದು ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ ಕೂಡ. ಅಲ್ಲಿಗೆ ತಂಡದ ಪ್ರತಿಯೊಬ್ಬರೂ ಮೆಚ್ಚಿನ ನಾಯಕ ಧೋನಿಗೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಶ್ರಮಿಸುವುದು ಖಂಡಿತಾ.

ಆಲ್ ರೌಂಡರ್ಸ್
ಅತ್ತ ಸನ್ ರೈಸರ್ಸ್ ನಲ್ಲಿ ಬ್ಯಾಟ್ಸ್ಮನ್ ಗಳನ್ನು ಸಂಪೂರ್ಣ ನಂಬುವಂತಿಲ್ಲ. ಹೈದರಾಬಾದ್ ಹೆಚ್ಚಿನ ಸಾರಿ ರಶೀದ್ ಖಾನ್, ಕೇನ್ ವಿಲಿಯಮ್ಸನ್ ಅವರು ಸೇರಿದಂತೆ ಒಂದಿಷ್ಟು ಆಟಗಾರರನ್ನು ಅವಲಂಬಿಸುತ್ತದೆ. ಚೆನ್ನೈಯಲ್ಲಿ ಆಲ್ ರೌಂಡರ್ ಗಳು ಹೆಚ್ಚಿದ್ದು ಬಹುತೇಕ ಆಟಗಾರರು ಪಂದ್ಯವನ್ನು ತಿರುಗಿಸಬಲ್ಲರು.

ಪ್ರಿಯಾ ವಾರಿಯಾರ್ ಕಿಕ್ಕು
ಈ ಎಲ್ಲದರ ನಡುವೆ ಅತ್ತ ಕಣ್ಣೊಡೆಯೋ ಹುಡ್ಗಿ ಪ್ರಿಯಾ ಪ್ರಕಾಶ್ ವಾರಿಯಾರ್ ಚೆನ್ನೈ ಗೆಲ್ಲಬೇಕು; ಚೆನ್ನೈ ಗೆದ್ದರೆ ತಂಡಕ್ಕೋಸ್ಕರ ನಾನು ಕಣ್ ಹೊಡೆದು ಫ್ಲೈಯಿಂಗ್ ಕಿಸ್ ಕೊಡುವ ನನ್ನ ಫೇಮಸ್ ನಟನೆಯನ್ನು ಮಾಡುವುದಾಗಿ ಚೆನ್ನೈ ಹುಡುಗರನ್ನು ರೊಚ್ಚಿಗೆಬ್ಬಿಸಿದ್ದಾರೆ ಬೇರೆ. ಇನ್ನು ಚೆನ್ನೈ ಸೋಲಲು ಕಾರಣವೇನಿದೆ ಹೇಳಿ?


Click it and Unblock the Notifications












