
ಹೈದರಾಬಾದ್, ಮೇ 12: ಮೊದಲ ಎಸೆತದಿಂದಲೇ ಪಂದ್ಯದ ಸನ್ನಿವೇಶಗಳಿಗೆ ತಕ್ಕಂತೆ ಜಾಗೃತವಾಗುವ ಗುಣದಿಂದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಯಶಸ್ವಿ ನಾಯಕರನ್ನಾಗಿಸಿದೆ ಎಂದು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
'ಧೋನಿಯ ಆಟದ ಜಾಗೃತಿ ಉತ್ತಮವಾಗಿ ದಾಖಲಿಸಲ್ಪಟ್ಟಿದೆ. ಇತ್ತ ರೋಹಿತ್ ಕೂಡ ರಾಷ್ಟ್ರೀಯ ತಂಡದಲ್ಲಿ ಉಪ ನಾಯಕ ಸ್ಥಾನದಲ್ಲಿರುವ ಆಟಗಾರ. ಇಬ್ಬರೂ ಐಪಿಎಲ್ನ ಯಶಸ್ವಿ ನಾಯಕರು. ಇಬ್ಬರೂ ನಾಯಕರಾದಾಗಿನಿಂದ ಎರಡೂ ತಂಡಗಳು ಮೂರು ಬಾರಿ ಪ್ರಶಸ್ತಿ ಗೆದ್ದಿವೆ' ಎಂದು ಸಚಿನ್ ಹೇಳಿಕೊಂಡಿದ್ದಾರೆ.
ಐಪಿಎಲ್ 2019 ಫೈನಲ್: ಮುಂಬೈ vs ಚೆನ್ನೈ, Live ಸ್ಕೋರ್ಕಾರ್ಡ್
ಇಬ್ಬರ ನಾಯಕತ್ವದ ಬಗ್ಗೆ ಮಾತನಾಡುತ್ತ ತೆಂಡೂಲ್ಕರ್, 'ಧೋನಿ ಕೆಲ ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ನಾಯಕತ್ವವೂ ಚೆನ್ನಾಗಿದೆ. ಇಬ್ಬರಲ್ಲೂ ಆಟದ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಗುಣವಿದೆ. ಇಬ್ಬರೂ ಶಾರ್ಪ್ ಇದ್ದಾರೆ ಎಂದು ನನಗನ್ನಿಸುತ್ತಿದೆ' ಎಂದರು.
ಧೋನಿ ನಾಯಕತ್ವದ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು 2019ರಲ್ಲೂ ಐಪಿಎಲ್ ಫೈನಲ್ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದವು. ಎರಡೂ ತಂಡಗಳು ಐಪಿಎಲ್ ಫೈನಲ್ ಜಯದಲ್ಲಿ 3-3ರ ಸಮಬಲ ಸಾಧಿಸಿವೆ.