
ಸೆಹ್ವಾಗ್ಗೆ ಅಖ್ತರ್ ಸವಾಲು
ಬೌಲಿಂಗ್ ವೇಳೆಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಬಳಿ ಬಂದ ಶೊಯೆಬ್ ಅಖ್ತರ್ ತನ್ನ ಎಸೆತಕ್ಕೆ ಸವಾಲೊಂದನ್ನು ಹಾಕಿದ್ದರಂತೆ. ಅದಕ್ಕೆ ವೀರೇಂದ್ರ ಸೆಹ್ವಾಗ್ ಸ್ಟ್ರೈಕ್ನಲ್ಲಿ ಬ್ಯಾಟಿಂಗ್ನಲ್ಲಿದ್ದ ಸಚಿನ್ ತೋರಿಸಿ ಅಲ್ಲಿ ನಿನ್ನ ತಂದೆ ನಿಂದಿದ್ದಾರೆ, ನಿನ್ನ ಎಸೆತಕ್ಕೆ ಆತ ಬಾರಿಸಿ ತೋರಿಸುತ್ತಾರೆ ಎಂದು ಉತ್ತರಿಸಿದ್ದಾಗಿ ಹೇಳಿದ್ದರು. ಅದಾದ ಬಳಿಕ ಸಚಿನ್ ಅಖ್ತರ್ ಎಸೆತಕ್ಕೆ ಬಾರಿಸಿದ ಹೊಡೆವನ್ನು ಉದ್ದೇಶಿಸಿ ಅಖ್ತರ್ಗೆ 'ತಂದೆ ತಂದೆಯೇ ಮಗ ಮಗನೇ' ಎಂದು ಹೇಳಿದ್ದ ವಿಚಾರವನ್ನು ಹಂಚಿಕೊಂಡಿದ್ದರು.

ಹಾಗೆ ಹೇಳಿದ್ದರೆ ಉಳಿಯುತ್ತಿದ್ದನಾ?
ಆದರೆ ಇತ್ತೀಚೆಗೆ ಪಾಕಿಸ್ತಾನಿ ಪತ್ರಕರ್ತನೋರ್ವನ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಅಖ್ತರ್ ಬಳಿ ಈ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು,. ಆಗ ಅಖ್ತರ್ ಅಂದಿನ ಪಂದ್ಯದಲ್ಲಿ ಆ ರೀತಿ ಘಟನೆಯೇ ನಡೆದಿಲ್ಲ ಎಂದು ಹೇಳಿದ್ದಾರೆ. ಹಾಗೆ ಹೇಳಿದ್ದರೆ ಆತ ಅಲ್ಲಿ ಉಳಿಯುತ್ತಿದ್ದನಾ? ನಾನು ಆತನನ್ನು ಬಿಡುತ್ತಿದ್ದೆನಾ? ಎಂದು ಪ್ರಶ್ನಿಸಿದ್ದಾರೆ.

ಶತಕದಂಚಿನಲ್ಲಿ ಎಡವಿದ್ದ ಸಚಿನ್
ಸಚಿನ್ ತೆಂಡೂಲ್ಕರ್ 98 ರನ್ಗಳ ಸ್ಪೋಟಕ ಬ್ಯಾಟಿಂಗ್ನಿಂದಾಗಿ ಆ ಪಂದ್ಯದಲ್ಲಿ ಭಾರತ 6 ವಿಕೆಟ್ಗಳಿಂದ ಪಾಕಿಸ್ತಾನವನ್ನು ಮಣಿಸಿತ್ತು. ಆದರೆ ಶತಕದಂಚಿನಲ್ಲಿ ಸಚಿನ್ ಎಡವಿ ಅಖ್ತರ್ಗೆ ವಿಕೆಟ್ ಒಪ್ಪಿಸಿದ್ದರು. ಆರಂಭಿಕನಾಗಿ ಸಚಿನ್ ಜೊತೆಗೆ ಕಣಕ್ಕಿಳಿದಿದ್ದ ಸೆಹ್ವಾಗ್ ಸ್ಪೋಟಕ ಆರಂಭ ಪ್ರದರ್ಶಿಸಿ ಮೊದಲ 6 ಓವರ್ಗಳಲ್ಲಿ 53 ರನ್ಗಳ ಭರ್ಜರಿ ಜೊತೆಯಾಟವನ್ನು ನೀಡಿದ್ದರು.

ಭರ್ಜರಿ ಗೆಲುವು
ಈ ಪಂದ್ಯದಲ್ಲಿ ಪಾಕಿಸ್ತಾನ ಸಯೀದ್ ಅನ್ವರ್ ಶತಕದ ಸಹಾಯದಿಂದ 7 ವಿಕೆಟ್ ಕಳೆದುಕೊಂಡು 273 ರನ್ ಬಾರಿಸಿತ್ತು, ಇದನ್ನು ಬೆನ್ನಟ್ಟಿದ ಭಾರತ 4 ವಿಕೆಟ್ ಕಳೆದುಕೊಂಡು 45.5 ಓವರ್ಗಳಲ್ಲೇ ಗುರಿ ತಲುಪಿತ್ತು. ಅಂತಿಮವಾಗಿ ಯುವರಾಜ್ ಸಿಂಗ್ ಅಜೇಯ 50 ಹಾಗೂ ರಾಹುಲ್ ದ್ರಾವಿಡ್ ಅಜೇಯ 44 ರನ್ ಬಾರಿಸಿ ಗೆಲುವನ್ನು ಸುಲಭವಾಗಿಸಿದರು.


Click it and Unblock the Notifications












