
ಭುವನೇಶ್ವರ್ ತುಂಬಾ ಉತ್ತಮ ಬೌಲರ್
"ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್ ಇದ್ದಾರೆ, ಅವರು ಹೊಸ ಚೆಂಡಿನೊಂದಿಗೆ ಉತ್ತಮವಾಗಿದ್ದಾರೆ. ಆದರೆ ಆ ವೇಗದೊಂದಿಗೆ, ಚೆಂಡು ಸ್ವಿಂಗ್ ಆಗದಿದ್ದರೆ, ಅವರು ಬಹುಶಃ ಅಲ್ಲಿ ಕಷ್ಟಪಡುತ್ತಾರೆ. ಆದರೆ ಅವರು ತುಂಬಾ ಉತ್ತಮ ಬೌಲರ್. ನಿಸ್ಸಂದೇಹವಾಗಿ, ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುತ್ತಾರೆ, ಯಾರ್ಕರ್ ಹೊಂದಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ನಿಮಗೆ ವೇಗದ ಅಗತ್ಯವಿದೆ," ಎಂದು ಖಲೀಜ್ ಟೈಮ್ಸ್ಗೆ ವಾಸಿಂ ಅಕ್ರಮ್ ತಿಳಿಸಿದರು.
"ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿದೆ, ಆಸ್ಟ್ರೇಲಿಯನ್ನರು ಬಹುಶಃ ಚೆನ್ನಾಗಿ ಆಡುತ್ತಾರೆ. ಅವರು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ, ಅವರಿಗೆ ಆ ಪಿಚ್ಗಳು ತಿಳಿದಿವೆ," ಎಂದು ಮಾಜಿ ಆಟಗಾರ ವಾಸಿಂ ಅಕ್ರಮ್ ಮತ್ತಷ್ಟು ಹೇಳಿದರು.

ಮೊಹಮ್ಮದ್ ಶಮಿ ಅಥವಾ ಮೊಹಮ್ಮದ್ ಸಿರಾಜ್
ಸದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಹೆಸರಿಸದಿರಲು ಭಾರತ ತಂಡ ನಿರ್ಧರಿಸಿದೆ. ಆದರೆ ಮೊಹಮ್ಮದ್ ಶಮಿ ಅಥವಾ ಮೊಹಮ್ಮದ್ ಸಿರಾಜ್ ಅವರಲ್ಲಿ ಒಬ್ಬರು ಅವರ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.
"ಭಾರತ ತಂಡವು ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಆದರೆ ಅವರು ಇನ್ನೂ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಹೆಸರಿಸಿಲ್ಲ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಅಭಿಪ್ರಾಯಪಟ್ಟರು.

ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಅಭಿಯಾನ
ಭಾರತವು ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡವು ತಮ್ಮ 2021ರ ಟಿ20 ವಿಶ್ವಕಪ್ ಮತ್ತು ಏಷ್ಯಾ ಕಪ್ 2022ರ ಸೋಲನ್ನು ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಅನುಭವಿಸಿದೆ. ಇದೀಗ ಉತ್ತಮವಾಗಿ ಪ್ರದರ್ಶನ ನೀಡುವ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಭಾರತ ತಂಡವು ದ್ವಿಪಕ್ಷೀಯ ಪಂದ್ಯಗಳಲ್ಲಿ ಬಲವಾದ ಪ್ರದರ್ಶನದೊಂದಿಗೆ ಟಿ20 ವಿಶ್ವಕಪ್ಗೆ ಬರುತ್ತಿದೆ, ಆದಾಗ್ಯೂ, ಐಸಿಸಿ ಪಂದ್ಯಾವಳಿಗಳ ದೊಡ್ಡ ಪಂದ್ಯಗಳಲ್ಲಿ ಭಾರತದ ವಿಧಾನದ ಬಗ್ಗೆ ಕೆಲವು ಅನುಮಾನಗಳಿವೆ.


Click it and Unblock the Notifications












