
ದೊಡ್ಡ ತಂಡಗಳಿಗೂ ಎಚ್ಚರಿಕೆಯ ಘಂಟೆ ರವಾನಿಸಿದೆ
2022ರ ಏಷ್ಯಾಕಪ್ ಚಾಂಪಿಯನ್ ಆಗಿರುವ ಶ್ರೀಲಂಕಾವನ್ನು ನಮೀಬಿಯಾದಂತಹ ತಂಡ ಸೋಲಿಸಬಹುದು ಎಂಬ ಅಂಶವು ಇಡೀ ಪಂದ್ಯಾವಳಿಯ ಕಣ್ಣು ತೆರೆಸಿದ್ದು, ಇತರ ದೊಡ್ಡ ತಂಡಗಳಿಗೂ ಎಚ್ಚರಿಕೆಯ ಘಂಟೆ ರವಾನಿಸಿದೆ. ಏಕೆಂದರೆ ಟಿ20 ಸ್ವರೂಪದಲ್ಲಿ ಯಾವ ತಂಡ ಬೇಕಾದರೂ ಯಾವ ತಂಡವನ್ನಾದರೂ ಸೋಲಿಸಬಹುದು ಎಂಬುದು ಖಾತರಿಯಾಗಿದೆ.
ಆದರೆ, ಶ್ರೀಲಂಕಾದ ಈ ಸೋಲು ಇಡೀ ಪಂದ್ಯಾವಳಿಯ ಮೇಲೆ ದೊಡ್ಡ ಪರಿಣಾಮಗಳನ್ನು ಬೀರಬಹುದು. ನಿಯಮಗಳ ಪ್ರಕಾರ, ಎರಡು ಅರ್ಹತಾ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೂಪರ್ 12ಗೆ ಪ್ರವೇಶಿಸುತ್ತವೆ.

ಏಷ್ಯಾಕಪ್ನಲ್ಲಿ ಭಾರತವನ್ನು ಸೋಲಿಸಿದ್ದ ಶ್ರೀಲಂಕಾ
ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದಂತಹ ತಂಡಗಳನ್ನು ಹೊಂದಿರುವ ಭಾರತದ ಗುಂಪಿನ ಬಗ್ಗೆ ಹೇಳುವುದಾದರೆ, ಬಿ ಗುಂಪಿನ ವಿಜೇತರು ಮತ್ತು ಗುಂಪಿನ ಎ ರನ್ನರ್ ಅಪ್ ಗುಂಪನ್ನು ಸೇರಿಕೊಳ್ಳುತ್ತವೆ.
ವೆಸ್ಟ್ ಇಂಡೀಸ್ ಬಿ ಗ್ರೂಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ನಮೀಬಿಯಾ ವಿರುದ್ಧದ ಸೋಲಿನಿಂದ ಶ್ರೀಲಂಕಾ ಈಗ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಳ್ಳುವುದನ್ನು ಎ ಗುಂಪಿನಲ್ಲಿ ಕಾಣಬಹುದು. ಹೀಗಾಗಿ ಭಾರತಕ್ಕೆ ಎರಡು ಬಲಿಷ್ಠ ತಂಡಗಳು ಸವಾಲೊಡ್ಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಆದ್ದರಿಂದ, ರೋಹಿತ್ ಶರ್ಮಾ ನಾಯಕತ್ವದ ಭಾರತದ ತಂಡ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವೆ ಅಗ್ರ ಸ್ಥಾನಗಳಿಗಾಗಿ ತೀವ್ರ ಹೋರಾಟವನ್ನು ಕಾಣಬಹುದು. ಇತ್ತೀಚೆಗಷ್ಟೇ ಶ್ರೀಲಂಕಾ ತಂಡ ಏಷ್ಯಾಕಪ್ನಲ್ಲಿ ಭಾರತವನ್ನು ಸೋಲಿಸಿ ಫೈನಲ್ನಲ್ಲಿ ಸ್ಥಾನ ಕಾಯ್ದಿರಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ.

ಐಸಿಸಿ ಟಿ20 ವಿಶ್ವಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಶಮಿ.
ಸ್ಟ್ಯಾಂಡ್ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್


Click it and Unblock the Notifications
