For Quick Alerts
ALLOW NOTIFICATIONS  
For Daily Alerts
 

T20 World Cup: ಮೊಹಮ್ಮದ್ ಶಮಿ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದ ರೋಹಿತ್ ಶರ್ಮಾ

T20 World Cup: Team India Skipper Rohit Sharma Impressed With Mohammad Shami’s Recovery

ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಒತ್ತಡದಿಂದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಡಿಸುವುದು ಹೆಚ್ಚು ಅಪಾಯಕಾರಿ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಅವರ ಬದಲಾಗಿ ತಂಡಕ್ಕೆ ಆಯ್ಕೆಯಾಗಿರುವ ಮೊಹಮ್ಮದ್ ಶಮಿ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ಗೆ ಮುನ್ನ ನಾಯಕರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ರೋಹಿತ್, ಜುಲೈನಿಂದ ಕ್ರಿಕೆಟ್ ಆಡದಿದ್ದರೂ ತಂಡಕ್ಕೆ ಆಯ್ಕೆಯಾಗಿರುವ ಮೊಹಮ್ಮದ್ ಶಮಿ ಬಗ್ಗೆ ಮಾಹಿತಿ ನೀಡಿದರು.

"ಎರಡು-ಮೂರು ವಾರಗಳ ಹಿಂದೆ ಶಮಿಗೆ ಕೋವಿಡ್ ಇತ್ತು. ನಂತರ ಅವರನ್ನು ಎನ್‌ಸಿಎಗೆ ಕರೆಯಲಾಯಿತು, ಅವರು ಕಳೆದ 10 ದಿನಗಳಿಂದ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರು ಈಗ ಬ್ರಿಸ್ಬೇನ್‌ನಲ್ಲಿದ್ದಾರೆ. ನಮ್ಮೊಂದಿಗೆ ಅಭ್ಯಾಸ ನಡೆಸಲಿದ್ದಾರೆ" ಎಂದು ರೋಹಿತ್ ಹೇಳಿದ್ದಾರೆ.

ಕಡಿಮೆ ಅವಧಿಯಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿ ವೇಗವಾಗಿ ಚೇತರಿಸಿಕೊಂಡ ಬಗ್ಗೆ ನಾಯಕ ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಂತರ ಅವರು ಕ್ರಿಕೆಟ್ ಆಡದಿದ್ದರೂ, ಅದು ಹೆಚ್ಚಿನ ಸಮಸ್ಯೆಯಾಗುವುದಿಲ್ಲ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಶಮಿ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ

ಶಮಿ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ

"ಮೊಹಮ್ಮದ್ ಶಮಿ ಚೇತರಿಕೆಯ ಬಗ್ಗೆ ಸಾಕಷ್ಟು ಸಕಾರಾತ್ಮಕ ಮಾತುಗಳು ಕೇಳಿಬರುತ್ತಿವೆ. ಅವರು ಉತ್ತಮವಾಗಿ ಅಭ್ಯಾಸ ಮಾಡಲಿದ್ದಾರೆ. ಕಳೆದ 12 ತಿಂಗಳುಗಳಲ್ಲಿ ಆಟಗಾರರ ನಿರ್ವಹಣೆ ಮಾಡಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ, ಗಾಯಗಳು ಸಂಭವಿಸುತ್ತವೆ. ಆಟದಲ್ಲಿ ಅದು ಸಹಜ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಬೆನ್ನುನೋವಿನಿಂದ ಬುಮ್ರಾ ಪಂದ್ಯಾವಳಿಯಿಂದ ಹೊರಗುಳಿದರು, ಬೌಲಿಂಗ್ ವಿಭಾಗಕ್ಕೆ ಅದು ದೊಡ್ಡ ಹೊಡೆತವಾಗಿದೆ. ಕಳೆದ ಒಂದು ವರ್ಷದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಸಾಕಷ್ಟು ಸುಧಾರಣೆಯಾಗಿದ್ದರು, ಬೌಲಿಂಗ್ ತಂಡದ ದೌರ್ಬಲ್ಯವಾಗಿದೆ.

Women's Asia Cup 2022 Final: ಇತಿಹಾಸ ಸೃಷ್ಟಿಸಿದ ಭಾರತದ ವನಿತೆಯರು, 7ನೇ ಬಾರಿಗೆ ಟ್ರೋಫಿ ಗೆಲುವು

ಬುಮ್ರಾ ತಂಡದ ಬೌಲಿಂಗ್ ಶಕ್ತಿಯಾಗಿದ್ದರು

ಬುಮ್ರಾ ತಂಡದ ಬೌಲಿಂಗ್ ಶಕ್ತಿಯಾಗಿದ್ದರು

ಬುಮ್ರಾ ಗುಣಮಟ್ಟದ ಬೌಲರ್. ಅವರ ಗಾಯದ ಬಗ್ಗೆ ನಾವು ಸಾಕಷ್ಟು ತಜ್ಞರೊಂದಿಗೆ ಮಾತನಾಡಿದ್ದೇವೆ ಆದರೆ ಪ್ರತಿಕ್ರಿಯೆ ಹೆಚ್ಚು ಸಕಾರಾತ್ಮಕವಾಗಿಲ್ಲ. ವಿಶ್ವಕಪ್ ಮುಖ್ಯ ಆದರೆ ಅವರ ವೃತ್ತಿಜೀವನವು ಹೆಚ್ಚು ಮುಖ್ಯವಾಗಿದೆ, ಅವರಿಗೆ ಇನ್ನೂ 28 ವರ್ಷ ವಯಸ್ಸು. ಆತನನ್ನು ಆಡಿಸುವುದು ಸದ್ಯದ ಮಟ್ಟಿಗೆ ಅಪಾಯ, ತಜ್ಞರು ಕೂಡ ಅದನ್ನೇ ಹೇಳಿದರು. ದೊಡ್ಡ ವೇದಿಕೆಯಲ್ಲಿ ಖಂಡಿತವಾಗಿಯೂ ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ರೋಹಿತ್ ಹೇಳಿದ್ದಾರೆ.

ಗಾಯಗಳು ದುರದೃಷ್ಟಕರ ಆದರೆ ಅನಿವಾರ್ಯ ಮತ್ತು ಕಳೆದ 12 ತಿಂಗಳುಗಳಲ್ಲಿ ಭಾರತವು ದೊಡ್ಡ ಆಟಗಾರರ ಗುಂಪನ್ನು ರಚಿಸುವತ್ತ ಗಮನಹರಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ರೋಹಿತ್ ಶರ್ಮಾ ಹೇಳಿದರು.

 ಯುವಕರಿಗೆ ಹೆಚ್ಚಿನ ಅವಕಾಶ

ಯುವಕರಿಗೆ ಹೆಚ್ಚಿನ ಅವಕಾಶ

ಬ್ಯಾಟಿಂಗ್ ಅಥವಾ ಬೌಲಿಂಗ್ ಆಗಿರಲಿ, 12 ತಿಂಗಳ ಹಿಂದೆ ವಿಶ್ವಕಪ್‌ನಿಂದ ಬೇಗನೆ ನಿರ್ಗಮಿಸಿದ ನಂತರ ಭಾರತವು ಯುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡಿತು, ಜೊತೆಗೆ ಅವರ ಆಟದ ಶೈಲಿಯನ್ನು ತೀವ್ರವಾಗಿ ಬದಲಾಯಿಸಿತು.

"ಗಾಯಗಳು ಕ್ರೀಡೆಯ ಭಾಗ ಮತ್ತು ಭಾಗವಾಗಿದೆ. ಹೆಚ್ಚಿನ ಪಂದ್ಯಗಳನ್ನು ಆಡಿದರೆ ಗಾಯಗಳಾಗುತ್ತವೆ. ಕಳೆದ ಒಂದು ವರ್ಷದಲ್ಲಿ ನಮ್ಮ ಗಮನವು ನಮ್ಮ ಬೆಂಚ್ ಬಲವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ನಾವು ಹೊಸಬರಿಗೆ ಅವಕಾಶ ನೀಡಿದ್ದೇವೆ" ಎಂದು ಅವರು ಹೇಳಿದರು.

 ಭಾರತ ತಂಡ ಬಲಿಷ್ಠವಾಗಿದೆ

ಭಾರತ ತಂಡ ಬಲಿಷ್ಠವಾಗಿದೆ

ಗಾಯಗೊಂಡವರ ಬಗ್ಗೆ ಯೋಚಿಸುವುದಕ್ಕಿಂತ ತಂಡವು ಲಭ್ಯವಿರುವ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ರೋಹಿತ್ ಹೇಳಿದರು. "ಇದರ ಬಗ್ಗೆ ನಿರಾಶೆಗೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಏನು ಮಾಡಬೇಕು ಎಂಬುದು ಮುಖ್ಯ. ಆಸ್ಟ್ರೇಲಿಯಾದಲ್ಲಿ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದೇವೆ. ಇನ್ನೂ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ, ನಾವು ಈಗಾಗಲೇ ಸಿದ್ಧರಾಗಿದ್ದೇವೆ" ಎಂದು ಅವರು ಹೇಳಿದರು.

"ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ಮುನ್ನ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಕೊನೆಯ ಕ್ಷಣದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಸಂಬಂಧಪಟ್ಟ ಎಲ್ಲಾ ಆಟಗಾರರಿಗೆ ಮುಂಚಿತವಾಗಿ ತಿಳಿಸಲಾಗಿದೆ," ಎಂದು ರೋಹಿತ್ ಶರ್ಮಾ ಹೇಳಿದರು.

Story first published: Saturday, October 15, 2022, 15:58 [IST]
Other articles published on Oct 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+