ಇಷ್ಟೊಂದು ಧೂಳು ಮತ್ತು ಮಾಲಿನ್ಯ
ನವದೀಪ್ ಸೈನಿ ವಿಡಿಯೋದಲ್ಲಿ ಬೈಕ್ ಮೂಲಕ ಧೂಳು ಎಬ್ಬಿಸುತ್ತಿರುವುದಕ್ಕೆ ಕಿಡಿಕಾರಿರುವ ನೆಟ್ಟಿಗರು ಇಷ್ಟೊಂದು ಧೂಳು ಎಬ್ಬಿಸುವುದರ ಮೂಲಕ ವಾಯುಮಾಲಿನ್ಯಕ್ಕೆ ಕಾರಣರಾಗಿದ್ದೀರಿ ಎಂದು ಸೈನಿಯ ಕಾಲೆಳೆದಿದ್ದಾರೆ.
ನೀವೊಬ್ಬ ಟೀಮ್ ಇಂಡಿಯಾ ಆಟಗಾರ ಎನ್ನುವುದು ನೆನಪಿರಲಿ
ಇನ್ನೂ ಕೆಲವರು ನೀವೊಬ್ಬ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರ ಎನ್ನುವುದು ನೆನಪಿರಲಿ, ಈ ರೀತಿಯ ಕೆಲಸಗಳನ್ನು ಮಾಡಿ ನಿಮ್ಮ ಹೆಸರಿಗೆ ನೀವೆ ಮಸಿಬಳಿದುಕೊಳ್ಳುತ್ತಿದ್ದೀರ ಎಂದು ಸೈನಿಗೆ ಬುದ್ದಿವಾದ ಹೇಳಿದ್ದಾರೆ.
ಕೊಹ್ಲಿ ಎಲ್ಲಿದೀಯಪ್ಪ?
ನಿಮಗೆಲ್ಲಾ ನೆನಪಿರಬಹುದು ದೀಪಾವಳಿ ಸಮಯದಲ್ಲಿ ವಿರಾಟ್ ಕೊಹ್ಲಿ ವಾಯುಮಾಲಿನ್ಯ ಮಾಡಬೇಡಿ ಎಂದು ಜನರಿಗೆ ಸಂದೇಶವನ್ನು ನೀಡಿದ್ದರು. ಅದನ್ನು ಗುರಿಯಾಗಿಸಿಕೊಂಡು ನೆಟ್ಟಿಗನೊಬ್ಬ ವಿರಾಟ್ ಕೊಹ್ಲಿ ಎಲ್ಲಿದೀಯಪ್ಪ ಈಗ ನಿಮ್ಮ ಕಣ್ಣಿಗೆ ವಾಯುಮಾಲಿನ್ಯ ಕಾಣುವುದಿಲ್ಲವಾ? ಎಂದು ಕೊಹ್ಲಿ ಮತ್ತು ಸೈನಿ ಇಬ್ಬರ ಕಾಲನ್ನೂ ಎಳೆದಿದ್ದಾನೆ.
ಇದಷ್ಟೇ ಅಲ್ಲದೆ ಇನ್ನೂ ಹಲವಾರು ರೀತಿಯ ಕಾಮೆಂಟ್ ಮಾಡಿ ನೆಟ್ಟಿಗರು ನವದೀಪ್ ಸೈನಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.