
ಜೂನ್ ಅಂತ್ಯದಲ್ಲಿ ಐರ್ಲೆಂಡ್ನಲ್ಲಿ ನಡೆಯಲಿರುವ 2 ಪಂದ್ಯಗಳ ಟಿ20 ಸರಣಿಗೆ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಜೊತೆಗೆ ಸಿತಾಂಶು ಕೊಟಕ್, ಸಾಯಿರಾಜ್ ಬಹುತುಲೆ ಮತ್ತು ಮುನಿಶ್ ಬಾಲಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತರಬೇತುದಾರರು ಎನ್ಸಿಎ ಮುಖ್ಯಸ್ಥರೊಂದಿಗೆ ತೆರಳುತ್ತಿದ್ದಾರೆ. ಅವರು ಮುಖ್ಯ ಕೋಚ್ನ ಕರ್ತವ್ಯವನ್ನು ನಿರ್ವಹಿಸುತ್ತಾರೆ ಮತ್ತು ಇಂಗ್ಲೆಂಡ್ನಲ್ಲಿ ಭಾರತದ ಏಕೈಕ ಟೆಸ್ಟ್ಗೆ ಸಿದ್ಧತೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ರಾಹುಲ್ ದ್ರಾವಿಡ್ ಹೆಜ್ಜೆ ಹಾಕಲಿದ್ದಾರೆ.
ಭಾರತವು ಜೂನ್ 26 ಮತ್ತು 28 ರಂದು 2 ಟಿ20 ಪಂದ್ಯಗಳನ್ನು ಆಡಲು ತೆರಳುತ್ತಿದೆ. ಇದೇ ವೇಳೆ ಕಳೆದ ವರ್ಷದ ಸರಣಿಯ ಮುಂದುವರೆದ ಭಾಗದ ಉಳಿದಿರುವ ಏಕೈಕ ಟೆಸ್ಟ್ಗೆ ಭಾರತದ ಸಿದ್ಧತೆ ನಡೆಸುತ್ತಿದೆ. ಇಂಗ್ಲೆಂಡ್ನಲ್ಲಿ ನಡೆದ ಅಪೂರ್ಣ ಟೆಸ್ಟ್ ಸರಣಿಯಲ್ಲಿ ಭಾರತ 2-1 ರಿಂದ ಇಂಗ್ಲೆಂಡ್ ವಿರುದ್ಧ ಮುನ್ನಡೆ ಸಾಧಿಸಿದೆ.
ಜೂನ್ 24ರಿಂದ 27 ರವರೆಗೆ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್ಶೈರ್ ವಿರುದ್ಧ ಆಡಲಿರುವ ಭಾರತೀಯ ಟೆಸ್ಟ್ ತಂಡದೊಂದಿಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಇರಲಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಈ ಹಿಂದೆ ರಚಿಸಲಾದ ಭಾರತ ಎ ತಂಡದ ಭಾಗವಾಗಿದ್ದ ಸಿತಾಂಶು ಕೊಟಕ್ ಬ್ಯಾಟಿಂಗ್ ಕೋಚ್ ಆಗಿದ್ದರೆ, ಈ ವರ್ಷದ ಆರಂಭದಲ್ಲಿ ಕೆರಿಬಿಯನ್ನಲ್ಲಿ ನಡೆದ ಅಂಡರ್-19 ವಿಶ್ವಕಪ್ ಅಭಿಯಾನದ ಭಾಗವಾಗಿದ್ದ ಮುನಿಶ್ ಬಾಲಿ ಮತ್ತು ಸಾಯಿರಾಜ್ ಬಹುತುಲೆ ಅವರಿಗೆ ಫೀಲ್ಡಿಂಗ್ ಮತ್ತು ಬೌಲಿಂಗ್ ಕೋಚ್ ಕರ್ತವ್ಯಗಳನ್ನು ವಹಿಸಲಾಗಿದೆ. ಪಿಟಿಐ ಪ್ರಕಾರ, ಎನ್ಸಿಎ ಮೂವರು ತರಬೇತುದಾರರು ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ತಂಡವನ್ನು ಸೇರಿಕೊಂಡಿದ್ದಾರೆ.
ಐರ್ಲೆಂಡ್ ಸರಣಿಗೆ ಭಾರತದ ತಂಡವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಭಾರತವು ಐರ್ಲೆಂಡ್ ವಿರುದ್ಧ ಪ್ರಾಥಮಿಕವಾಗಿ ಟಿ20 ತಜ್ಞರ ತಂಡವನ್ನು ಕಣಕ್ಕಿಳಿಸುತ್ತದೆ. ಆದರೆ ಜುಲೈ 7ರಿಂದ ಮೂರು ಟಿ20 ಪಂದ್ಯಗಳು ಮತ್ತು ಅಷ್ಟೇ ಏಕದಿನ ಪಂದ್ಯಗಳನ್ನು ಒಳಗೊಂಡಿರುವ ಇಂಗ್ಲೆಂಡ್ ಪ್ರವಾಸದ ವೈಟ್-ಬಾಲ್ ಕ್ರಿಕೆಟ್ಗೆ ಪೂರ್ಣ ಸಾಮರ್ಥ್ಯದ ತಂಡವನ್ನು ನಿರೀಕ್ಷಿಸಲಾಗಿದೆ.
"ಹಿರಿಯ ಸಹಾಯಕ ಸಿಬ್ಬಂದಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ನಂತರ, ಸಿತಾಂಶು ಕೊಟಕ್, ಮುನಿಶ್ ಬಾಲಿ ಮತ್ತು ಸಾಯಿರಾಜ್ ಬಹುತುಲೆ ದಕ್ಷಿಣ ಆಫ್ರಿಕಾ ವಿರುದ್ಧದ ರಾಜ್ಕೋಟ್ ಮತ್ತು ಬೆಂಗಳೂರಿನಲ್ಲಿ ಉಳಿದಿರುವ ಟಿ20 ಪಂದ್ಯಗಳಿಗಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ".
"ಈ ತರಬೇತಿದಾರರು ಈಗಾಗಲೇ ಸೀಮಿತ ಓವರ್ಗಳ ತಂಡದೊಂದಿಗೆ ಸ್ವಲ್ಪ ಸಮಯದಿಂದ ಇದ್ದಾರೆ. ಹಿರಿಯ ಸಹಾಯಕ ಸಿಬ್ಬಂದಿ ಇಂಗ್ಲೆಂಡ್ಗೆ ತೆರಳುತ್ತಾರೆ. ಆಗ ಇವರು ಕಾರ್ಯಕ್ಕೆ ಸಿದ್ಧರಾಗುತ್ತಾರೆ," ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.