24 ವರ್ಷದ ಕೇರಳದ ಸ್ಪಿನ್ನರ್ ವಿಘ್ನೇಶ್ ಪುತ್ತೂರು ಐಪಿಎಲ್ 2025 ರಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯ ಗೆದ್ದರು. ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ವಿರುದ್ಧ ನಾಲ್ಕು ವಿಕೆಟ್ಗಳಿಂದ ಸೋತಿತು. ಆದರೆ ಮುಂಬೈ ತಂಡದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರು 3 ವಿಕೆಟ್ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ವಿಘ್ನೇಶ್ ಪುತ್ತೂರು 4 ಓವರ್ಗಳಲ್ಲಿ ಕೇವಲ 32 ರನ್ಗಳಿಗೆ ನಾಯಕ ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರಂತಹ ಸ್ಟಾರ್ ಆಟಗಾರರ ವಿಕೆಟ್ಗಳನ್ನು ಪಡೆದರು. ಅವರ ಅದ್ಭುತ ಪ್ರದರ್ಶನವು ಪಂದ್ಯದ ಕೊನೆಯ ಓವರ್ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಎಂಎಸ್ ಧೋನಿಯನ್ನೂ ಮೆಚ್ಚಿಸಿತು.
ಪಂದ್ಯದ ನಂತರ, ಧೋನಿ ಕೂಡ ಯುವ ಆಟಗಾರನನ್ನು ಭೇಟಿಯಾಗಿ ಅವರ ಅದ್ಭುತ ಬೌಲಿಂಗ್ಗೆ ಬೆನ್ನು ತಟ್ಟಿದರು. ವಿಘ್ನೇಶ್ ಪುತ್ತೂರು ಈ ವಿಶೇಷ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಕಾಮೆಂಟರಿ ಬಾಕ್ಸ್ನಲ್ಲಿದ್ದ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದರು. ಇದೀಗ ಮೈಖೇಲ್ ನಡೆಸಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಮಗನ ಸಾಧನೆ ಬಗ್ಗೆ ವಿಘ್ನೇಶ್ ಪೋಷಕರು ಮಾತನಾಡಿದ್ದಾರೆ.

ತಮ್ಮ ಮಗನ ಕನಸಿನ ಚೊಚ್ಚಲ ಐಪಿಎಲ್ ಪಂದ್ಯದ ಬಗ್ಗೆ ವಿಘ್ನೇಶ್ ಪುತ್ತೂರು ಅವರ ತಂದೆ ಸುನೀಲ್ ಕುಮಾರ್ ಮತ್ತು ತಾಯಿ ಕೆ ಪಿ ಬಿಂದು ಸಂತಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯದಲ್ಲಿ ನಮ್ಮ ಮಗ ವಿಘ್ನೇಶ್ ಆಡುತ್ತಾನೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ಮುಂಬೈ ಪರ ಅವನ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ. ಮೊದಲ ಪಂದ್ಯದಲ್ಲಿ ಅವನ ತಂಡಕ್ಕೆ ಬರುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಕೆ ಪಿ ಬಿಂದು ಹೇಳಿದ್ದಾರೆ.
ಸಿಎಸ್ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಸಂಜೆ 5:30 ಕ್ಕೆ ವಿಘ್ನೇಶ್ ಕರೆ "ನಾನು ಮೊದಲ ಪಂದ್ಯಕ್ಕೆ ತಂಡದೊಂದಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದನು. ಈ ಪಂದ್ಯದಲ್ಲಿ ಮುಂಬೈ ಪರ ಆಡಲು ಅವಕಾಶ ಸಿಗುತ್ತದೆಯೇ ಎಂದು ಕೇಳಿದಾಗ, ಅದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಉತ್ತರಿಸಿದ್ದನು ಎಂದು ಪಂದ್ಯಕ್ಕೂ ಮೊದಲು ಮಾತನಾಡಿರುವ ಬಗ್ಗೆ ಬಿಂದು ತಿಳಿಸಿದ್ದಾರೆ.
ಮಗನ ಸಾಧನೆಯ ಬಗ್ಗೆ ವಿಘ್ನೇಶ್ ತಂದೆ ಸುನೀಲ್ ಕುಮಾರ್ ಹೆಮ್ಮೆಪಟ್ಟಿದ್ದಾರೆ. ಮುಂಬೈ ಪರ ಅವನು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮೂರು ವಿಕೆಟ್ಗಳನ್ನು ಕಬಳಿಸಿದ್ದಾರೆ ಎಂದು ಹೇಳಿದ್ದಾರೆ. ದೇವರ ದಯೆಯಿಂದ ರೋಹಿತ್ ಬದಲಿಗೆ ನನ್ನ ಮಗನಿಗೆ (ಇಂಪ್ಯಾಕ್ಟ್ ಸಬ್) ಅವಕಾಶ ಸಿಕ್ಕಿತು. ಅವನು ತುಂಬಾ ಚೆನ್ನಾಗಿ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಸುನೀಲ್ ಸಂತಸ ಹಂಚಿಕೊಂಡಿದ್ದಾರೆ.
ಪಂದ್ಯದ ನಂತರ ಅವನು ನಮಗೆ ಮಧ್ಯರಾತ್ರಿ 12:30 ಕ್ಕೆ ಕರೆ ಮಾಡಿದರು. ನಂತರ 2 ಗಂಟೆಗೆ ಕರೆ ಮಾಡಿ ತನ್ನ ಆಟದ ಬಗ್ಗೆ ಮಾತನಾಡಿದನು ಎಂದು ಬಿಂದು ಮಾಹಿತಿ ಹಂಚಿಕೊಂಡಿದ್ದಾರೆ.