For Quick Alerts
ALLOW NOTIFICATIONS  
For Daily Alerts
 

ಅವಕಾಶ ಕೊಟ್ಟು ಸಾಕಾಯ್ತು, ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನ ತಂಡದಿಂದ ಕೈ ಬಿಡುವ ಸಮಯ ಬಂದಾಯ್ತು!

ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌, ತಮ್ಮ ಸ್ಫೋಟಕ ಆಟಕ್ಕೆ ಹೆಸರುವಾಸಿ. ಸ್ಪಿನ್ನರ್‌ಗಳನ್ನ ಹುರಿದು ಮುಕ್ಕಿ ಬಿಡುವ ಸ್ವಭಾವದವನು. ತನ್ನ ವಿಭಿನ್ನ ಹೊಡೆತಗಳ ಮೂಲಕ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಆದರೆ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಮ್ಯಾಕ್ಸ್‌ವೆಲ್‌ ಚೆಂಡನ್ನ ಎದುರಿಸಲು ಪರದಾಡುತ್ತಿದ್ದಾನೆ.

ಹೌದು, ಗ್ಲೆನ್ ಮ್ಯಾಕ್ಸ್‌ವೆಲ್ ಇಲ್ಲಿಯವರೆಗೆ ಆಡಿರುವ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಂದು ಬಾರಿ ಸಹ 20 ರನ್‌ ಗಡಿ ದಾಟಲು ವಿಫಲರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ 18 ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾನೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳಿಸಿದರು ಬ್ಯಾಟ್ ಬೀಸಲು ಹೆಣಗಾಡುತ್ತಿದ್ದಾನೆ. ಹೀಗಾಗಿ ಆತನನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಕೈ ಬಿಡುವ ಸಮಯ ಬಂದಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಕೈ ಬಿಡುವ ಸಮಯ ಏಕೆ ಬಂದಿದೆ?

ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಕೈ ಬಿಡುವ ಸಮಯ ಏಕೆ ಬಂದಿದೆ?

ಪಂಜಾಬ್ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಪ್ರಸಕ್ತ ಸೀಸನ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಮೊದಲೆರಡು ಸ್ಥಾನಗಳನನನು ಪಡೆದಿದ್ದು, ತಲಾ ಒಂದು ಶತಕ ಸಹ ಸಿಡಿಸಿದ್ದಾರೆ.

ಇದಲ್ಲದೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರು ಇಲ್ಲಿಯವರೆಗೆ ಬ್ಯಾಟಿಂಗ್ ಮಾಡಲು ಸಿಕ್ಕಿರುವ ಅವಕಾಶಗಳಲ್ಲಿ ಬೆರಗುಗೊಳಿಸಿದ್ದಾರೆ. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಅವರು ಅಜೇಯ 8 ಎಸೆತಗಳನ್ನು 25 ರನ್ ಗಳಿಸಿದರು, ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನಿಂದ ಅವರು ತಮ್ಮ ತಂಡದಲ್ಲಿ ಅಗ್ರ ಸ್ಕೋರರ್ ಆಗಿದ್ದರು, ಕೇವಲ 27 ಎಸೆತಗಳಲ್ಲಿ 44 ರನ್ ಗಳಿಸಿದರು.

IPL 2020: ಮುಂಬೈ ವಿರುದ್ಧ ಪಂಜಾಬ್‌ಗೆ ಸೋಲು, ಟೀಕೆಗೆ ಗುರಿಯಾದ ಅನಿಲ್ ಕುಂಬ್ಳೆ, ರಾಹುಲ್

ಮಧ್ಯಮ ಕ್ರಮಾಂಕದಲ್ಲಿ ಪಂಜಾಬ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಕರುಣ್ ನಾಯರ್ ಕೂಡ ಮಿಂಚಲು ವಿಫಲಾಗಿದ್ದು, ಕಿವೀಸ್ ಆಲ್‌ರೌಂಡರ್ ಜಿಮ್ಮಿ ನೀಶಮ್ ಕೆಲವು ಉತ್ತಮ ಹೊಡೆತಗಳಿಗೆ ಸಾಕ್ಷಿಯಾಗಿದ್ದಾರೆ.

ಕಾಗದದ ಹುಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್

ಕಾಗದದ ಹುಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್

ಹೌದು, ಗ್ಲೆನ್ ಮ್ಯಾಕ್ಸ್‌ವೆಲ್ ತಂಡದಲ್ಲಿ ಹೆಸರಿಗೆ ಮಾತ್ರ ಉತ್ತಮ ಆಯ್ಕೆಯಂತಿರುವುದು ಸುಳ್ಳಲ್ಲ. ಕಳೆದ ನಾಲ್ಕು ಪಂದ್ಯಗಳಲ್ಲಿ ಆತ ಒಂದು ಬಾರಿಯು 20 ರನ್‌ ಗಡಿ ದಾಟಲು ವಿಫಲರಾಗಿದ್ದಾರೆ.

ಪಂಜಾಬ್‌ಗೆ ಮತ್ತೊಂದು ಬೌಲಿಂಗ್ ಅಸ್ತ್ರ ಬೇಕಾಗಿದೆ!

ಪಂಜಾಬ್‌ಗೆ ಮತ್ತೊಂದು ಬೌಲಿಂಗ್ ಅಸ್ತ್ರ ಬೇಕಾಗಿದೆ!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ತಂಡಕ್ಕೆ ಕೊನೆಗೆ ಬೌಲಿಂಗ್ ವಿಭಾಗದಲ್ಲಿ ಆಯ್ಕೆಗಳೇ ಇರಲಿಲ್ಲ. ನಾಯಕ ರಾಹುಲ್, ಶೆಲ್ಡನ್ ಕಾಟ್ರೆಲ್ ಅವರನ್ನು ಮೊದಲೇ ಬೌಲ್ ಮಾಡಿಸಿದ್ದರು, ಮತ್ತು ಅದು ಅವರಿಗೆ ಡೆತ್ ಓವರ್‌ಗಳಲ್ಲಿ ಯಾವುದೇ ಆಯ್ಕೆಯಿಲ್ಲ. ಆದ್ದರಿಂದ, ಅವರು ಅಂತಿಮ ಓವರ್‌ನಲ್ಲಿ ಕೃಷ್ಣಪ್ಪ ಗೌತಮ್ ಅವರ ಆಫ್ ಸ್ಪಿನ್‌ಗೆ ಕೊಡಬೇಕಾಯ್ತು.

ಸುರೇಶ್ ರೈನಾ - ಹರ್ಭಜನ್ ಸಿಂಗ್ ಈ ಟೂರ್ನಿ ಮಾತ್ರವಲ್ಲ ಮುಂದಿನ ಐಪಿಎಲ್‌ನಿಂದಲೂ ಔಟ್?

ಮುಂಬೈ ಬ್ಯಾಟ್ಸ್‌ಮನ್‌ಗಳು ಗೌತಮ್‌ರ ಅಂತಿಮ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಸಹಿತ 25 ರನ್‌ಗಳನ್ನು ಬಾರಿಸಿದರು. ಹೀಗಾಗಿ ಈ ಪಂದ್ಯದ ಬಳಿಕ ನಾಯಕನಾಗಿ ಅರಿವಾಗಿದ್ದು ತಮ್ಮ ತಂಡಕ್ಕೆ ಮತ್ತೊಂದು ಬೌಲಿಂಗ್ ಆಯ್ಕೆ ಬೇಕು ಎಂಬ ಅಂಶವನ್ನು ರಾಹುಲ್ ಒಪ್ಪಿಕೊಂಡರು.

ಮುಜೀಬ್ ಅಥವಾ ಜೋರ್ಡಾನ್ ಆಯ್ಕೆ ಸೂಕ್ತವಾಗಬಹುದೇ?

ಮುಜೀಬ್ ಅಥವಾ ಜೋರ್ಡಾನ್ ಆಯ್ಕೆ ಸೂಕ್ತವಾಗಬಹುದೇ?

ಕ್ರಿಸ್ ಜೋರ್ಡಾನ್ ನಂತಹ ಬೌಲರ್‌ ಕೈಗೆಟುಕುತ್ತಿದ್ದರೂ, ಮಾರ್ಕಸ್ ಸ್ಟೋಯ್ನಿಸ್‌ರನ್ನ ತಂಡದಿಂದ ಕೈಬಿಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಒಂದು ಕೆಟ್ಟ ಪಂದ್ಯದಿಂದ ಆಟಗಾರನನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಹೀಗಾಗಿ ಉಳಿದಿರುವ ಆಯ್ಕೆ ಮ್ಯಾಕ್ಸ್‌ವೆಲ್‌ ರನ್ನ ಪ್ಲೇಯಿಂಗ್ ಇಲೆವೆನ್‌ನಿಂದ ಕೈ ಬಿಟ್ಟು ಮತ್ತೊಬ್ಬ ಬೌಲರ್‌ನನ್ನ ಕಣಕ್ಕಿಳಿಸುವ ಅನಿವಾರ್ಯತೆಯು ಎದುರಿಗಿದೆ.

ಅಲ್ಲದೆ, ಮ್ಯಾಕ್ಸ್‌ವೆಲ್ ಸ್ಥಾನದಲ್ಲಿ ಪಂಜಾಬ್ ತಂಡದಲ್ಲಿ ಸ್ಥಾನ ಪಡೆಯಬಹುದಾದ ಮತ್ತೊಬ್ಬ ವಿದೇಶಿ ಆಟಗಾರ ಮುಜೀಬ್ ಉರ್ ರಹಮಾನ್. ಮುಜೀಬ್ ಸ್ಕೀಡಿ ಆಕ್ಷನ್ ಹೊಂದಿದ್ದಾನೆ ಮತ್ತು ಆತನ ಬೌಲಿಂಗ್ ತಂಡಕ್ಕೆ ವರವಾಗಿ ಬಳಸಬಹುದು. ಮುಜೀಬ್ ಕೂಡ ಮಧ್ಯಮ ಓವರ್‌ಗಳಲ್ಲಿ ಬಂದು ರನ್‌ಗಳ ಹರಿವನ್ನು ತಡೆಯಬಹುದು, ಮತ್ತು ಇದು ಪಂಜಾಬ್ ತಂಡಕ್ಕೆ ತುಂಬಾ ಉಪಯುಕ್ತವಾಗಿದೆ.

Story first published: Friday, October 2, 2020, 15:29 [IST]
Other articles published on Oct 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+