
ವಿಶ್ವಕಪ್ಗೂ ಮುನ್ನ ಸುಧಾರಿಸಬೇಕಿದೆ
ಒತ್ತಡದ ಸಂದರ್ಭದಲ್ಲಿ ನಾವಿನ್ನೂ ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದ ಶದಾಬ್ ಖಾನ್ ಸುಧಾರಣೆಯಾಗಬೇಕು ಎಂದು ಹೇಳಿದರು. "ಒತ್ತಡದ ಸಂದರ್ಭಗಳಲ್ಲಿ ಉತ್ತಮ ತಂಡವು ಈ ರೀತಿಯ ಕುಸಿತವನ್ನು ಅನುಭವಿಸಬಾರದು ಎಂದು ನಾನು ಭಾವಿಸುತ್ತೇನೆ, ವಿಶೇಷವಾಗಿ ನಾನು ಕೆಟ್ಟ ಹೊಡೆತಕ್ಕೆ ಮುಂದಾದೆ. ನಾನು ಚೆನ್ನಾಗಿ ಸೆಟ್ ಆಗಿದ್ದೆ, ಪಂದ್ಯವನ್ನು ನಾನೇ ಮುಗಿಸಬೇಕಾಗಿತ್ತು" ಎಂದು ಲೆಗ್ ಸ್ಪಿನ್ನರ್ ರಶೀದ್ ಖಾನ್ಗೆ ಔಟಾದ ನಂತರ ಅವರು ಹೇಳಿದ್ದಾರೆ.
ಏಷ್ಯಾಕಪ್ ಪಂದ್ಯಾವಳಿ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿದೆ ಮತ್ತು ಶಾದಾಬ್ ತನ್ನ ಪಾಕಿಸ್ತಾನ ತಂಡಕ್ಕೆ ಇನ್ನೂ ಕೆಲಸವಿದೆ ಎಂದು ಹೇಳಿದರು.
ಅಫ್ಘಾನಿಸ್ತಾನದ ಬೌಲರ್ಗೆ ಬ್ಯಾಟ್ನಿಂದ ಹೊಡೆಯಲು ಯತ್ನಿಸಿದ ಆಸಿಫ್ ಅಲಿ

ನಾವು ಚಾಂಪಿಯನ್ ತಂಡವಲ್ಲ
ಪಾಕಿಸ್ತಾನ ಉತ್ತಮ ತಂಡ ಆದರೆ ಚಾಂಪಿಯನ್ ತಂಡವಲ್ಲ, ಭಾನುವಾರ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಒತ್ತಡವನ್ನು ನಿಭಾಯಿಸಿದರೆ ಮಾತ್ರ ಗೆಲ್ಲಲು ಸಾಧ್ಯವಿದೆ ಎಂದು ಶದಾಬ್ ಖಾನ್ ಹೇಳಿದ್ದಾರೆ.
"ಏಷ್ಯಾಕಪ್ 2022ರ ಆರಂಭದಲ್ಲಿ ನಾನು ಹೇಳಿದಂತೆ, ನಾವು ಉತ್ತಮ ತಂಡ ಆದರೆ ಚಾಂಪಿಯನ್ ತಂಡವಲ್ಲ, ಚಾಂಪಿಯನ್ ತಂಡವಾಗುವುದು ನಮ್ಮ ಗುರಿಯಾಗಿದೆ. ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಮತ್ತು ನಮ್ಮ ತಪ್ಪುಗಳನ್ನು ಪುನರಾವರ್ತಿಸದಿರಲು ಪ್ರಯತ್ನಿಸುತ್ತೇವೆ." ಎಂದು ಹೇಳಿದ್ದಾರೆ.

ಬೌಲರ್ಗಳಿಗೆ ಬ್ಯಾಟಿಂಗ್ ಮಾಡಲು ಉತ್ತೇಜನ
ಪಾಕಿಸ್ತಾನ ಟೀಂ ಮ್ಯಾನೇಜ್ಮೆಂಟ್ ತಂಡದ ಬೌಲರ್ಗಳಿಗೆ ಸ್ವಲ್ಪಮಟ್ಟಿಗೆ ಬ್ಯಾಟಿಂಗ್ ಮಾಡಲು ಉತ್ತೇಜಿಸಿದೆ ಏಕೆಂದರೆ ಆಟದಲ್ಲಿ ಯಾವ ಪರಿಸ್ಥಿತಿ ಬರುತ್ತದೆ ಎಂದು ನಿಮಗೆ ತಿಳಿದಿಲ್ಲ. ನಮ್ಮ ಬೌಲರ್ಗಳು ಸಹ ಬ್ಯಾಟ್ನೊಂದಿಗೆ ಪಂದ್ಯಗಳನ್ನು ಮುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಶದಾಬ್ ಖಾನ್ ಹೇಳಿದರು.
4 ಓವರ್ ಬೌಲ್ ಮಾಡಿ 27 ರನ್ ನೀಡಿ 1 ವಿಕೆಟ್ ಪಡೆದ ಶಾದಾಬ್ ಖಾನ್, ಬ್ಯಾಟಿಂಗ್ನಲ್ಲಿ 26 ಎಸೆತಗಳಲ್ಲಿ 1 ಬೌಂಡರಿ, ಮೂರು ಸಿಕ್ಸರ್ ಸಹಿತ 36 ರನ್ ಗಳಿಸಿದರು. ತಮ್ಮ ಪ್ರದರ್ಶನಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಬ್ಯಾಟಿಂಗ್ ಅಭ್ಯಾಸ ಮಾಡುತ್ತೇನೆ ಎಂದ ನಸೀಮ್ ಶಾ
ಎರಡು ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿದ ನಸೀಮ್ ಶಾ ಮಾತನಾಡಿ, "ನಾನು ಬ್ಯಾಟಿಂಗ್ಗೆ ಬಂದಾಗ, ನಾನು ಸಿಕ್ಸರ್ಗಳನ್ನು ಬಾರಿಸಬಲ್ಲೆ ಎಂಬ ನಂಬಿಕೆ ನನಗಿತ್ತು. ನಾಣು ಬ್ಯಾಟಿಂಗ್ ಅಭ್ಯಾಸ ಮಾಡಿದ್ದೇನೆ. ಯಾರ್ಕರ್ ಎಸೆಯುತ್ತಾರೆ ಎನ್ನುವ ನಿರೀಕ್ಷೆ ಇತ್ತು, ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿದ್ದೆ. ಉತ್ತಮ ಹೊಡೆತಗಳನ್ನು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದೆ" ಎಂದು ಹೇಳಿದ್ದಾರೆ.
ಶುಕ್ರವಾರ ಶ್ರೀಲಂಕಾ-ಪಾಕಿಸ್ತಾನ ನಡುವೆ ಸೂಪರ್ 4 ಹಂತದ ಪಂದ್ಯ ನಡೆಯಲಿದ್ದು. ಭಾನುವಾರ ಮತ್ತೆ ಎರಡೂ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.


Click it and Unblock the Notifications











