
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫಾರ್ಮ್ಗೆ ಮರಳುವ ಅವಕಾಶ
ವಿರಾಟ್ ಕೊಹ್ಲಿ ತನ್ನ ಹಳೆಯ ಫಾರ್ಮ್ಗೆ ಮರಳಲು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯು ಪ್ರಮುಖ ವೇದಿಕೆಯಾಗಿತ್ತು. ಆದ್ರೆ ಆತನ ಇಂಜ್ಯುರಿಯು ಗಂಭೀರವಾಗಿರದೇ ಇದ್ದಲ್ಲಿ, ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಗಳನ್ನಾಡಲು ಎದುರು ನೋಡಬೇಕು.
ಏಕದಿನ ಕ್ರಿಕೆಟ್ನಲ್ಲಿ ಅತ್ಯದ್ಭುತ ದಾಖಲೆ ಹೊಂದಿರುವ ವಿರಾಟ್ಗೆ ಈಗ ಅಗ್ನಿಪರೀಕ್ಷೆಗೆ ಎದುರಿಗಿದೆ. ಇದರಲ್ಲಿ ಸಫಲರಾಗುತ್ತಾರೆ ಅಥವಾ ಎಡವುತ್ತಾರ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ದೇಶೀಯ ಕ್ರಿಕೆಟ್ ಆಡಿ, ಫಾರ್ಮ್ ಮರಳಿ: ಸೈಯದ್ ಕಿರ್ಮಾನಿ
ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಸೈಯದ್ ಕಿರ್ಮಾನಿ ವಿರಾಟ್ ಕೊಹ್ಲಿ ಉತ್ತಮ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಹೀಗೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಪದೇ ಪದೇ ವಿಫಲರಾಗುವುದಕ್ಕಿಂತ ದೇಶೀಯ ಕ್ರಿಕೆಟ್ನಲ್ಲಿ ಆಡಿ, ಆತ್ಮವಿಶ್ವಾಸ ಪಡೆದುಕೊಂಡು ಫಾರ್ಮ್ಗೆ ಮರಳಬೇಕಿದೆ. ತದನಂತರ ಆತನ ಫಿಟ್ ಆಗಿದ್ದಾನೆಯೇ ಎಂಬುದನ್ನ ಪರಿಗಣಿಸಬಹುದು ಎಂದಿದ್ದಾರೆ.
IND vs ENG ಪ್ರಥಮ ಏಕದಿನ: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಶಿಖರ್ ಧವನ್ ಮತ್ತು ರೂಟ್ ಕಣ್ಣು

ಕೊಹ್ಲಿ ಜೊತೆಗೆ ಮಾತನಾಡಲು ಆಯ್ಕೆಗಾರರ ಹಿಂದೇಟು?
ಟೀಂ ಇಂಡಿಯಾದಲ್ಲಿ ಹೊಸ ಬೆಂಚ್ ಮಾರ್ಕ್ ಸೃಷ್ಟಿಸಿದ ವಿರಾಟ್ ಕೊಹ್ಲಿ ತಂಡಕ್ಕೆ ಹೊರೆಯಾಗಿ ಪರಿಣಮಿಸಿದ್ದಾರೆ ಎಂದು ಹೇಳಲು ಆಯ್ಕೆಗಾರರು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಕಿರ್ಮಾನಿ ವಾದವಾಗಿದೆ.
1546 ರನ್!: ಸಚಿನ್, ಕೊಹ್ಲಿ ಅಲ್ಲ, ಇಂಗ್ಲೆಂಡ್ ವಿರುದ್ಧ ಅತಿಹೆಚ್ಚು ಏಕದಿನ ರನ್ ಚಚ್ಚಿರುವ ಭಾರತೀಯ ಈತ!

ವಿರಾಟ್ ಕೊಹ್ಲಿಯನ್ನ ಬೆಂಬಲಿಸಿದ ಅಮಿತ್ ಮಿಶ್ರಾ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿರುವ ಸ್ಪಿನ್ನರ್ ಅಮಿತ್ ಮಿಶ್ರಾ ಟೀಂ ಇಂಡಿಯಾ ಮಾಜಿ ನಾಯಕನನ್ನು ಬೆಂಬಲಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಇನ್ನೂ ಪ್ರಮುಖ ಆಟಗಾರರಾಗಿದ್ದಾರೆ ಎಂದು ಹೇಳಿದ್ದಾರೆ.
"ಅವರು ಪ್ರಸ್ತುತ ಫಾರ್ಮ್ನಲ್ಲಿಲ್ಲ ಎಂದು ನಾವು ಹೇಳಬಹುದು ಆದರೆ ಅವರು ಅಂತಹ ಖ್ಯಾತಿಯನ್ನು ಸೃಷ್ಟಿಸಿದ್ದಾರೆ, ತುಂಬಾ ಪ್ರದರ್ಶನ ನೀಡಿದ್ದಾರೆ ಮತ್ತು ಹಲವಾರು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಅವರನ್ನು ಬೆಂಬಲಿಸುವುದು ಮುಖ್ಯವಾಗಿದೆ. ಆಟಗಾರನಾಗಿ, ಅವರು ಮ್ಯಾಚ್ ವಿನ್ನರ್ ಆಗಿದ್ದಾರೆ ಮತ್ತು ಕಷ್ಟಕರ ಸಂದರ್ಭಗಳಲ್ಲಿ ಯಾವಾಗಲೂ ಸಂದರ್ಭಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ''
''ಯುವ ಆಟಗಾರರಂತೆ, ಕೆಲವೊಮ್ಮೆ ಹಿರಿಯರಿಗೂ ಅದೇ ಬೆಂಬಲ ಬೇಕಾಗುತ್ತದೆ. ಆದ್ದರಿಂದ ಆ ನಂಬಿಕೆಯನ್ನು ಉಳಿಸಿಕೊಳ್ಳಿ ಮತ್ತು ಅವರು ಆ ವಿಶ್ವಾಸವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ'' ಎಂದು ಮಿಶ್ರಾ ಹೇಳಿದರು.


Click it and Unblock the Notifications












