
ಹಾರ್ದಿಕ್ಗೆ ನಡೆಯಲು ಆಗಲಿಲ್ಲ
ಸ್ಟ್ರೆಚರ್ ಮೂಲಕ ಹೊರ ಬಂದ ಅವರಿಗೆ ಬಹಳ ಕಾಲ ಏಳಲು ಸಾಧ್ಯವಾಗಲಿಲ್ಲ. ಆದರೆ ಈಗ ಅವರು ಅಲ್ಪ ಸುಧಾರಿಸಿಕೊಂಡಿದ್ದು, ನಡೆಯಲು ಆರಂಭಿಸಿದ್ದಾರೆ. ಪೂರ್ಣ ವೈದ್ಯಕೀಯ ಬರುವ ವರೆಗೆ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ನೀಡಲಾಗದು ಎಂದು ಮ್ಯಾನೆಜ್ಮೆಂಟ್ ಹೇಳಿದೆ.

ದುಬೈನ ಅತಿಯಾದ ಬಿಸಿಲು ಬವಳಿಸುತ್ತಿದೆ
ನಿನ್ನೆಯ ಪಂದ್ಯದಲ್ಲಿ 4.5 ಓವರ್ ಬೌಲಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ 24 ರನ್ ನೀಡಿದ್ದರು. ಉಳಿದ ಒಂದು ಬಾಲನ್ನು ಅಂಬಟಿ ರಾಯುಡು ಪೂರ್ಣ ಮಾಡಿದರು. ದುಬೈನಲ್ಲಿ ಅತಿಯಾದ ಬಿಸಿಲಿರುವುದು ಸಹ ಆಟಗಾರರಿಗೆ ಸ್ನಾಯು ಸೆಳೆತಕ್ಕೆ ಕಾರಣವಾಗುತ್ತಿದೆ.
ಏಷ್ಯಾ ಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ಭುವನೇಶ್ವರ್ ಕುಮಾರ್ ಗಾಯದಿಂದ ಮರಳಿದ್ದಾರೆ
ಇತ್ತೀಚೆಗಷ್ಟೆ ಭುವನೇಶ್ವರ್ ಕುಮಾರ್ ಅವರು ಗಾಯದಿಂದ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಪೂರ್ಣ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೇದಾರ್ ಜಾದವ್ ಸಹ ಭುಜದ ಗಾಯದಿಂದಾಗಿ ಒಂದು ವರ್ಷದಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದರು.

ಹಾರ್ದಿಕ್ ಪಾಂಡ್ಯಾ ಸರಣಿಯಿಂದ ಹೊರಕ್ಕೆ
ಗಾಯಗೊಂಡಿರುವ ಹಾರ್ದಿಕ್ ಪಟೇಲ್ ಸರಣಿಯಿಂದ ಹೊರಗುಳಿಯುವ ಕಾರಣ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ತಂಡದಲ್ಲಿ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಕೇದಾರ್ ಜಾದವ್ ಮೂವರು ಸ್ಪಿನ್ನರ್ಗಳು ಇದ್ದಾರೆ ಹಾಗಾಗಿ ಮತ್ತೊಬ್ಬ ಸ್ಪಿನ್ನರ್ ಆಲ್ರೌಂಡರ್ ಆದ ಅಕ್ಷರ್ ಪಟೇಲ್ಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಹಾರ್ದಿಕ್ ಪಟೇಲ್ ಬದಲು ಫಾರ್ಮ್ನಲ್ಲಿ ಇಲ್ಲದ ಶಾರ್ದೂಲ್ ಠಾಕೂರ್ ಅವರನ್ನು ಕಣಕ್ಕಿಳಿಸುತ್ತಾರಾ ಅಥವಾ ಹೊಸ ಆಟಗಾರರಿಗೆ ಅವಕಾಶ ಸಿಗುತ್ತದೆಯೋ ನೋಡಬೇಕು.
ಪಾಕಿಸ್ತಾನದ ವಿರುದ್ಧ ಭಾರತ ವಿರೋಜಿತ ವಿಜಯ: ಟ್ವಿಟ್ಟರ್ನಲ್ಲಿ ಸಂಭ್ರಮಾಚರಣೆ


Click it and Unblock the Notifications













