
ಉತ್ತಮ ಫಾರ್ಮ್ನಲ್ಲಿದ್ದಾಗಲೇ ಫಿಟ್ನೆಸ್ ಕಾರಣದಿಂದ ಹೊರಕ್ಕೆ
"ಹಾರ್ದಿಕ್ ಪಾಂಡ್ಯ ತಂಡದ ಸಮತೋಲನವನ್ನು ಪೂರ್ಣಗೊಳಿಸುತ್ತಾರೆ. ಅವರು ಉತ್ತಮ ಫಾರ್ಮ್ನಲ್ಲಿದ್ದಾಗಲೇ ಫಿಟ್ನೆಸ್ ಕಾರಣದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ತಂಡದಿಂದ ಹೊರಗುಳಿದರು. ಅವರು ತಮ್ಮ ಜೀವನದ ಬಗ್ಗೆ ಸಾಂದರ್ಭಿಕರಾಗಿದ್ದರು ಮತ್ತು ಈಗ ಉತ್ತಮವಾಗಿದ್ದಾರೆ. ಅವರು ಆಟದ ಕುರಿತು ಹೆಚ್ಚು ಗಮನಹರಿಸುತ್ತಾರೆ. ಅವರು ಜೀವನವನ್ನು ಆನಂದಿಸುತ್ತಿದ್ದಾರೆಂದು ತೋರುತ್ತದೆ. ಮೈದಾನದ ಹೊರಗೆ ಹೆಚ್ಚು ಆನಂದಿಸಬೇಡಿ ಏಕೆಂದರೆ ಅವರು ಅಪರೂಪದ ಪ್ರತಿಭೆ," ಎಂದು ಶೋಯೆಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ
ತನ್ನ ಫಿಟ್ನೆಸ್ನಿಂದಾಗಿ ತಂಡದಿಂದ ಹೊರಹಾಕಲ್ಪಟ್ಟ ನಂತರ ಹಾರ್ದಿಕ್ ಪಾಂಡ್ಯ ತನ್ನನ್ನು ತಾನು ಮರುಕಂಡುಕೊಂಡಿದ್ದಾನೆ ಎಂದು ಅಖ್ತರ್ ಭಾವಿಸಿದ್ದಾರೆ. ಈ ಆಟಗಾರ ಭಾರತೀಯ ತಂಡಕ್ಕೆ ಹೆಚ್ಚಿನ ಸಮತೋಲನವನ್ನು ತಂದಿದ್ದಾನೆ. ಏಪ್ರಿಲ್ನಿಂದ ಹಾರ್ದಿಕ್ ಪಾಂಡ್ಯ ನಾಯಕನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಐರ್ಲೆಂಡ್ನಲ್ಲಿ ಭಾರತೀಯ ತಂಡದ ನಾಯಕತ್ವವನ್ನೂ ಸಹ ಮಾಡಿದ್ದಾರೆ.
"ಹಾರ್ದಿಕ್ ಪಾಂಡ್ಯ ಉತ್ತಮ ಫೀಲ್ಡರ್ ಮತ್ತು ಉತ್ತಮ ವೇಗದ ಬೌಲರ್ ಅದೇ ರೀತಿ ಸ್ಫೋಟಕ ಬ್ಯಾಟಿಂಗ್ ಕೂಡ ನಿರ್ವಹಿಸಲಬಲ್ಲರು. ಬಹಳಷ್ಟು ಬೌಲರ್ಗಳು ಕಷ್ಟಪಡುವ ನಂತರದ ಓವರ್ಗಳಲ್ಲಿ ಅವರು ಪ್ರದರ್ಶನ ನೀಡುತ್ತಾರೆ ಮತ್ತು ಅವರು ಉಳಿದ ಬೌಲರ್ಗಳನ್ನು ಮೀರಿಸುವಲ್ಲಿ ಯಶಸ್ವಿಯಾದರು," ಎಂದು ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ತಿಳಿಸಿದರು.

ರಾಷ್ಟ್ರದ ಸ್ಟಾರ್ ಆಗುವುದು ದೊಡ್ಡ ಜವಾಬ್ದಾರಿ
"ಭಾರತವು ದೊಡ್ಡದಾಗಿದೆ ಮತ್ತು ಅಂತಹ ದೊಡ್ಡ ರಾಷ್ಟ್ರದ ಸ್ಟಾರ್ ಆಗುವುದು ದೊಡ್ಡ ಜವಾಬ್ದಾರಿಯಾಗಿದೆ. ಪಾಂಡ್ಯ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರ ಆಟದ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರು ಎಲ್ಲಾ ರೀತಿಯ ಖ್ಯಾತಿ, ಹಣ ಮತ್ತು ಗೌರವವನ್ನು ಪಡೆಯುತ್ತಾರೆ. ಆದ್ದರಿಂದ ಆಟದ ಕಡೆ ಗಮನಹರಿಸಿ ಹಾರ್ದಿಕ್ ಪಾಂಡ್ಯ," ಎಂದು ಶೋಯೆಬ್ ಅಖ್ತರ್ ಸಲಹೆ ನೀಡಿದ್ದಾರೆ.
"ಅವರು ನಿಸ್ಸಂಶಯವಾಗಿ ಶ್ರೇಷ್ಠ ಬ್ಯಾಟರ್. ಅವರು ಅನೇಕ ಕಾಂಪ್ಯಾಕ್ಟ್ ಹೊಡೆತಗಳನ್ನು ಪಡೆದಿದ್ದಾರೆ ಮತ್ತು ಅವರು ಎಸೆತಗಳನ್ನು ತಡವಾಗಿ ಆಡುತ್ತಾರೆ. ಹಾಗಾಗಿ ಅವರು ವಿಶ್ವದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ. ಏಕಾಗ್ರತೆಯಿಂದ ಇರಿ," ಎಂದು ಪಾಕಿಸ್ತಾನ ಮಾಜಿ ವೇಗಿ ಹೇಳಿದರು.


Click it and Unblock the Notifications
