ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 ವಿಶ್ವಕಪ್‌ 2022: ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಸಂಚಕಾರ!

Bhuvneshwar kumar

ಐಸಿಸಿ ಟಿ20 ವಿಶ್ವಕಪ್ ಶುರುವಿಗೂ 10 ತಿಂಗಳ ಮೊದಲು ಭಾರತ ತಂಡವನ್ನು ಆಯ್ಕೆ ಮಾಡಲು ಕೇಳಿದ್ದರೆ, ನಾವು ಭುವನೇಶ್ವರ್ ಕುಮಾರ್ ಅವರ ಹೆಸರನ್ನು ಪ್ರಮುಖವಾಗಿ ತೆಗೆದುಕೊಳ್ಳುತ್ತಿದ್ದೆವು. ಆದ್ರೆ ಆದರೆ ಕಾಲ ಬದಲಾದಂತೆ ದೃಶ್ಯಗಳೂ ಬದಲಾದವು. ಭುವನೇಶ್ವರ್ ಕುಮಾರ್ ಎಲ್ಲಾ ಸಣ್ಣ ಸರಣಿಗಳಲ್ಲಿ ಉತ್ತಮ ಬೌಲಿಂಗ್ ಮಾಡುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು.

ಆದ್ರೆ ಟಿ20 ವಿಶ್ವಕಪ್‌ಗೂ ಏಷ್ಯಾಕಪ್‌ನಿಂದ ಫಾರ್ಮ್ ಕಳೆದುಕೊಂಡಿರುವ ಭುವನೇಶ್ವರ್ ಕುಮಾರ್ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣರಾದರು. ಅದ್ರಲ್ಲೂ 19ನೇ ಓವರ್‌ನಲ್ಲಿ ಬೌಲಿಂಗ್ ಮಾಡಿ ಭುವಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಭುವಿಗೆ ಯಾವುದೇ ಕಾರಣಕ್ಕೂ ಡೆತ್ ಓವರ್‌ನಲ್ಲಿ ಬೌಲಿಂಗ್ ಕೊಡಬೇಡಿ ಎಂಬ ಕೂಗು ಹೆಚ್ಚಾಯಿತು. ಇದೀಗ ಟಿ20 ವಿಶ್ವಕಪ್‌ನಲ್ಲಿ ಭುವಿ ಸ್ಥಾನ ಅಲುಗಾಡತೊಡಗಿದೆ.

ಭುವನೇಶ್ವರ್ ಕುಮಾರ್ ಪ್ಲೇಯಿಂಗ್ 11ನಿಂದ ಕೈ ಬಿಡಬೇಕು ಎಂಬ ಟೀಕೆ!

ಭುವನೇಶ್ವರ್ ಕುಮಾರ್ ಪ್ಲೇಯಿಂಗ್ 11ನಿಂದ ಕೈ ಬಿಡಬೇಕು ಎಂಬ ಟೀಕೆ!

ಈ ಪರಿಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಅವರ ಜಾಗಕ್ಕೆ ದೀಪಕ್ ಚಹಾರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ದೀಪಕ್ ಚಹಾರ್ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಮೀಸಲು ಆಟಗಾರರಾಗಿದ್ದಾರೆ.

ದೀಪಕ್ ಚಹಾರ್‌ಗೆ ಅವಕಾಶ

ದೀಪಕ್ ಚಹಾರ್‌ಗೆ ಅವಕಾಶ

ದೀಪಕ್ ಚಹಾರ್ ಅವರು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ದೀಪಕ್ ಚಹಾರ್ ಹೊಸ ಚೆಂಡನ್ನು ಚೆನ್ನಾಗಿ ಸ್ವಿಂಗ್ ಮಾಡಬಹುದು. ಜೊತೆಗೆ ಚೆಂಡನ್ನು ಕೀಪಿಂಗ್ ಮತ್ತು ನಿಧಾನವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುತ್ತಾರೆ. ಮತ್ತು ದೀಪಕ್ ಚಹಾರ್ ಬ್ಯಾಟ್‌ನೊಂದಿಗೆ ಆಕ್ರಮಣಕಾರಿಯಾಗಿ ಆಡಬಲ್ಲರು.

ಮನೆ ನಾಯಿಗೆ ಓರಿಯೊ ಎಂದು ಕರೆಯುವ ವೀಡಿಯೋ ಬಿಡುಗಡೆ ಮಾಡಿದ ಗಂಭೀರ್: ಧೋನಿಗೆ ಪರೋಕ್ಷವಾಗಿ ಟಾಂಗ್‌

ದೀಪಕ್ ಚಹಾರ್ ಬ್ಯಾಟಿಂಗ್ ಕೂಡ ಮಾಡಬಲ್ಲರು!

ದೀಪಕ್ ಚಹಾರ್ ಬ್ಯಾಟಿಂಗ್ ಕೂಡ ಮಾಡಬಲ್ಲರು!

ಕೊನೆಯಲ್ಲಿ ದೀಪಕ್ ಚಹಾರ್ ಬಂದರೆ ಮುಂಚೂಣಿಯ ಬ್ಯಾಟ್ಸ್‌ಮನ್‌ಗಳು ವೇಗವಾಗಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಬಲ್ಲರು. ಪ್ರತಿ ತಂಡದಲ್ಲಿ 9 ಆಟಗಾರರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ ಭಾರತ ತಂಡ 7 ಆಟಗಾರರ ಮೀರಿದರೆ ಬ್ಯಾಟಿಂಗ್ ಮಾಡುವುದಿಲ್ಲ. ಹೀಗಾಗಿ ದೀಪಕ್ ಚಹಾರ್ ಸೇರ್ಪಡೆಯಿಂದ ಬ್ಯಾಟಿಂಗ್ ಲೈನಪ್ ಕೂಡ ಬಲಗೊಳ್ಳಲಿದೆ.

ಧೋನಿಯಿಂದ ನಿಮ್ಮ ಕ್ರಿಕೆಟ್ ಜೀವನ ಅಂತ್ಯವಾಯಿತು ಎಂದ ಅಭಿಮಾನಿಗೆ ಇರ್ಫಾನ್ ಕೊಟ್ಟ ಉತ್ತರವೇನು ಗೊತ್ತಾ?

ಭುವಿಗೆ ಅಗ್ನಿಪರೀಕ್ಷೆ

ಭುವಿಗೆ ಅಗ್ನಿಪರೀಕ್ಷೆ

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭುವಿ ಅನುಪಸ್ಥಿತಿಯಲ್ಲಿ ಚಹಾರ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ದೀಪಕ್ ಚಹಾರ್ ಖಂಡಿತವಾಗಿಯೂ ಟಿ20 ವಿಶ್ವಕಪ್ ಮುಖ್ಯ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಇದರಿಂದ ಭುವನೇಶ್ವರ್ ಕುಮಾರ್ ಸ್ಥಾನ ಅಪಾಯದಲ್ಲಿದೆ. ಹೀಗಾಗಿ, ದಕ್ಷಿಣ ಆಫ್ರಿಕಾ ಸರಣಿಯನ್ನು ಆಧರಿಸಿ ಭಾರತ ತನ್ನ ಅಂತಿಮ ಹನ್ನೊಂದು ಆಟಗಾರರನ್ನ ಆಯ್ಕೆ ಮಾಡುತ್ತದೆ.

Story first published: Tuesday, September 27, 2022, 23:28 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X