ಸುಲಭದ ರನೌಟ್ ಅವಕಾಶ
ಖಲೀಲ್ ಬೌಲಿಂಗ್ನಲ್ಲಿ ಶಾಯ್ ಹೋಪ್ ಬಾರಿಸಿದ ಚೆಂಡು ಸಮೀಪದಲ್ಲಿಯೇ ಇದ್ದ ರಾಹುಲ್ ಅವರ ಕೈ ಸೇರಿತು. ರನ್ಗಾಗಿ ಗಡಿಬಿಡಿ ಮಾಡಿದ್ದ ಶಾಯ್ ಹೋಪ್ ಇನ್ನೊಂದು ತುದಿಯತ್ತ ಓಡಿದರು. ಅತ್ತ ಇದ್ದ ಶಿಮ್ರೋನ್ ಹೆಟ್ಮೇರ್ ಮೊದಲು ರನ್ಗಾಗಿ ಯೋಚಿಸಿದರೂ ಬಳಿಕ ವಾಪಸ್ ತಮ್ಮ ಕ್ರೀಸ್ನತ್ತ ಮರಳಿದ್ದರು.
ಇಬ್ಬರೂ ಬ್ಯಾಟ್ಸ್ಮನ್ಗಳು ಒಂದೇ ತುದಿಯಲ್ಲಿ ಇದ್ದರೆ, ಇತ್ತ ವಿಕೆಟ್ ಕೀಪರ್ ಕಡೆಗೆ ರಾಹುಲ್ ಎಸೆದ ಚೆಂಡು ಕೀಪರ್ ದಿನೇಶ್ ಕಾರ್ತಿಕ್ ಅವರ ಜಿಗಿತಕ್ಕೂ ಸಿಗದಷ್ಟು ಎತ್ತರದಲ್ಲಿತ್ತು. ಅದೃಷ್ಟವಶಾತ್ ಕಾರ್ತಿಕ್ ಹಿಂದಿನಿಂದ ಕವರ್ ಮಾಡಿದ ಮನೀಶ್ ಪಾಂಡೆ, ಚೆಂಡು ಹಿಡಿದು ರನೌಟ್ ಮಾಡಿದರು. ಒಂದು ವೇಳೆ ಮನೀಶ್ ಪಾಂಡೆ ಸಮಯ ಪ್ರಜ್ಞೆ ಮೆರೆಯದೆ ಹಿಂದೆ ಬಾರದೆ ಇದ್ದಿದ್ದರೆ ಸುಲಭದ ರನೌಟ್ ಅವಕಾಶ ಕೈತಪ್ಪುತ್ತಿತ್ತು.
ಕೆಟ್ಟ ಫೀಲ್ಡಿಂಗ್
ಕೆಎಲ್ ರಾಹುಲ್ ಇಂದು ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿದರು. ಮೊದಲು, ತಮ್ಮ ಕೆಟ್ಟ ಎಸೆತದಿಂದ ರನೌಟ್ ಅವಕಾಶವನ್ನು ಹೆಚ್ಚೂ ಕಡಿಮೆ ಮಿಸ್ ಮಾಡಿದ್ದರು. ಬಳಿಕ ಬೌಂಡರಿಯಲ್ಲಿ ಎತ್ತರದ ಕ್ಯಾಚ್ಅನ್ನು ಕೈಚೆಲ್ಲಿದರು. ಅವರು ತಮ್ಮ ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ತೇಜನ್ ಗುಪ್ತಾ ಟ್ವೀಟ್ ಮಾಡಿದ್ದಾರೆ.
ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್' ಎಂದ ಅನುಷ್ಕಾ
ನಗೆ ಪ್ರಹಸನ
ಕೆಎಲ್ ರಾಹುಲ್ ಅವರ ನಗೆಯುಕ್ಕಿಸುವ ಎಸೆತ, ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ಗಳು ಒಂದೇ ಕ್ರೀಸ್ಕಡೆಗೆ ಓಡಿದ ಹಾಸ್ಯ... ಎಂತಹ ಪ್ರಹಸನ ಎಂದು ಅರುಣ್ ರತ್ನಂ ಟ್ವೀಟಿಸಿದ್ದಾರೆ.
ಪಾಂಡೆಗೆ ಶ್ರೇಯಸ್ಸು
ಆ ಥ್ರೋ ಎಷ್ಟು ಕೆಟ್ಟದಾಗಿತ್ತು ಎಂದರೆ, ರನೌಟ್ ಮಾಡಿದ್ದು ಮನೀಶ್ ಪಾಂಡೆ ಎಂದೇ ಪರಿಗಣಿಸಿದ್ದಾರೆಯೇ ಹೊರತು ಕೆಎಲ್ ರಾಹುಲ್ ಎಂದು ಅಲ್ಲ ಎಂಬುದಾಗಿ ಮನೀಶ್ ಎಂಬುವವರು ತಮಾಷೆ ಮಾಡಿದ್ದಾರೆ.
ವೈರಲ್ ವಿಡಿಯೋ: ಧೋನಿಯ ಹೆಲಿಕಾಪ್ಟರ್ ಶಾಟ್ ಕದ್ದ ಆಸೀಸ್ನ ಸ್ಮಿತ್!
ಕರ್ನಾಟಕ-ತಮಿಳುನಾಡು
ಅದು ಕೆಎಲ್ ರಾಹುಲ್ ಅವರ ಎಸೆತ. ಕರ್ನಾಟಕ ಸೊಗಸಾಗಿ ತಮಿಳುನಾಡನ್ನು ನಿರ್ಲಕ್ಷಿಸಿದೆ ಎಂದು ವಿನಾಯಕ್ ಕೆ ಎಂಬುವವರು ಎರಡು ರಾಜ್ಯಗಳ ವಿವಾದದ ಎಳೆಯನ್ನು ನೆನಪಿಸಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕಗಳ ನಡುವೆ ಯಾವಾಗಲೂ ಸಂವಹನದ ಕೊರತೆ ಸ್ವಲ್ಪ ಇರುತ್ತದೆಯಲ್ಲವೇ ಎಂಬ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರ ಹೇಳಿಕೆಯನ್ನೂ ಅವರು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಕೊಹ್ಲಿ ಥರ ಕಾಣುವುದಕ್ಕೆ...
ಕೆಎಲ್ ರಾಹುಲ್ ತಂಡದಲ್ಲಿ ಇರುವುದು ದೂರದಿಂದ ಅವರು ವಿರಾಟ್ ಕೊಹ್ಲಿ ತರಹ ಕಾಣಿಸುತ್ತಾರೆ ಎಂಬ ಕಾರಣಕ್ಕೆ ಮಾತ್ರ ಎಂದು ಸೌರಭ್ ಕುಮಾರ್ ಎಂಬುವವರು ಟ್ರಾಲ್ ಮಾಡಿದ್ದಾರೆ.


Click it and Unblock the Notifications












