ಉತ್ತಮ ಜೊತೆಯಾಟದ ಲಾಭ ಕರ್ನಾಟಕಕ್ಕೆ
ಮೂರನೇ ದಿನದ ಭೋಜನ ವಿರಾಮದ ವೇಳೆಗೆ 446/5 ಸ್ಕೋರ್ ಮಾಡಿ 312ರನ್ ಲೀಡ್ ಪಡೆದುಕೊಂಡಿತ್ತು. ಕರುಣ್ ನಾಯರ್ ತಮ್ಮ ವೈಯಕ್ತಿಕ ಮೊತ್ತ 70ರನ್ ಸೇರಿಸಿ 5ನೇ ಶತಕ ದಾಖಲಿಸಿದ್ದರು(200), ಕೆಎಲ್ ರಾಹುಲ್ 183ರನ್. 639 ಎಸೆತಗಳಲ್ಲಿ 362ರನ್ ಜೊತೆಯಾಟ ಹೊಂದಿದ್ದರು.
ನೋವಿನ ನಡುವೆ ನಲಿವು: ಕೆಎಲ್ ರಾಹುಲ್
ಕೆಎಲ್ ರಾಹುಲ್ ಅವರು ಭೋಜನ ವಿರಾಮ ನಂತರ ತಮ್ಮ್ ಮೊತ್ತಕ್ಕೆ 5 ರನ್ ಸೇರಿಸಿ ಔಟ್ ಆದರು. ಮೊಣಕೈ, ಮೊಣಕಾಲು ನೋವಿನಿಂದ ಬಳಲುತ್ತಿರುವ ರಾಹುಲ್ ಅವರು ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿ ತಂಡಕ್ಕಾಗಿ ಕಣಕ್ಕಿಳಿದು ದಿಟ್ಟ ಪ್ರದರ್ಶನ ನೀಡಿದರು. ತಂಡದ ಮೊತ್ತ 470ರನ್ಗಳಾಗಿದ್ದಾಗ ಈ ಜೋಡಿಯನ್ನು ತಮಿಳುನಾಡು ಬೌಲರ್ ರಂಗರಾಜನ್ ಮುರಿದರು. ಕೆಎಲ್ ರಾಹುಲ್ 188ರನ್ (320ಎ, 17X4, 3X6) ಗಳಿಸಿ ಪೆವಿಲಿಯನ್ ತಲುಪಿದರು.
ಶ್ರೇಯಸ್ ಗೋಪಾಲ್ ಅಚ್ಚರಿ ಸೋಲು
ಈ ನಡುವೆ ಕರ್ನಾಟಕದ ಕೆಳಕ್ರಮಾಂಕದ ಆಟಗಾರರನ್ನು ಬೇಗ ಔಟ್ ಮಾಡಲು ಸಾಕಷ್ಟು ತಂತ್ರ ನಡೆಸಿದರೂ ಫಲ ನೀಡಲಿಲ್ಲ. ಮಿಥುನ್ 39ರನ್ ಗಳಿಸಿದರೆ ನಂತರ ಬಂದ ಶ್ರೇಯಸ್ ಗೋಪಾಲ್ 11 ರನ್ ಗಳಿಸಿ ಔಟಾಗಿದ್ದು ಅಚ್ಚರಿ ಮೂಡಿಸಿತು. ಶ್ರೇಯಸ್ ಗೋಪಾಲ್ 10 ಪಂದ್ಯಗಳಲ್ಲಿ 652 ರನ್ ಗರಿಷ್ಠ 145, ಸರಾಸರಿ 59.27, 2 ಸೆಂಚುರಿ, 3 ಅರ್ಧಶತಕ.ಗಳಿಸಿರುವ ಶ್ರೇಯಸ್ ಫೈನಲ್ ಪಂದ್ಯದಲ್ಲಿ ಹೆಚ್ಚಿನ ಕೊಡುಗೆ ನೀಡಲಾಗಿಲ್ಲ.
ಪ್ರಶಸ್ತಿಗೆ ಮುತ್ತಿಡಲು ಕಾತುರದಿಂದ ಕಾದಿದೆ
ನಾಯಕ ವಿನಯ್ ಕುಮಾರ್ ಅವರು 175ಎಸೆತಗಳಲ್ಲಿ 41ರನ್ ಗಳಿಸಿ ಅಜೇಯರಾಗಿ ಉಳಿದು ಕರುಣ್ ನಾಯರ್ ಅವರಿಗೆ ಉತ್ತಮ ಸಾಥ್ ನೀಡಿದ್ದಾರೆ.. ದಿನದ ಅಂತ್ಯಕ್ಕೆ 484ರನ್ ಮುನ್ನಡೆಯೊಂದಿಗೆ 618/7ಸ್ಕೋರ್ ಮಾಡಿರುವ ಕರ್ನಾಟಕ ಪ್ರಶಸ್ತಿಗೆ ಮುತ್ತಿಡಲು ಕಾತುರದಿಂದ ಕಾದಿದೆ. ಕರುಣ್ ನಾಯರ್310 ರನ್(533 ಎ, 45x4, 1x6) ಗಳಿಸಿದ್ದಾರೆ. ಇನ್ನಷ್ಟು ದಾಖಲೆ ಮುರಿಯುವ ಉತ್ಸಾಹದಲ್ಲಿದ್ದಾರೆ.