ಬೆಂಗಳೂರು, ಜ.30: ಕರ್ನಾಟಕದ ಕ್ರಿಕೆಟ್ ಕಲಿ ಕೆಎಲ್ ರಾಹುಲ್ ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಮೂಲಕ ನಾಡಿನ ಹೆಮ್ಮೆಯ ಪುತ್ರ ಎನಿಸಿಕೊಂಡಿದ್ದಾರೆ. ಉತ್ತರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ತ್ರಿಶತಕ ದಾಖಲಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಮುನ್ನೂರು ರನ್ ಗಡಿ ದಾಟಿದ ಪ್ರಪ್ರಥಮ ಕನ್ನಡಿಗ ಎಂಬ ಕೀರ್ತಿ ರಾಹುಲ್ ಗೆ ಸಲ್ಲುತ್ತದೆ.
ಉತ್ತರಪ್ರದೇಶದ ವಿರುದ್ಧದ ರಣಜಿ ಪಂದ್ಯದ ಎರಡನೇ ದಿನವಾದ ಶುಕ್ರವಾರ ಕೆಎಲ್ ರಾಹುಲ್ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ 300 ರನ್ ಮೈಲಿಗಲು ದಾಟಿದರು. ಚಹಾ ವಿರಾಮದ ವೇಳೆ 317 ರನ್ (422 ಎಸೆತ, 45X4, 3X6) ಸಿಡಿಸಿ ಕ್ರೀಸ್ ನಲ್ಲಿದ್ದಾರೆ. ಕರ್ನಾಟಕ 154 ಓವರ್ ಗಳಲ್ಲಿ 633/6 ಸ್ಕೋರ್ ಮಾಡಿದೆ. [ಮೊದಲ ದಿನದ ವರದಿ ನೋಡಿ]
ಒನ್ ಇಂಡಿಯಾ ಸುದ್ದಿ