ರೋಹಿತ್ ಶರ್ಮಾಗೆ ಹೆಚ್ಚು ಸಮಯವಿಲ್ಲ: ಆಟಗಾರರ ಫಿಟ್ನೆಸ್ ದೊಡ್ಡ ಸಮಸ್ಯೆಯಾಗಿದೆ ಎಂದ ಸಾಬಾ ಕರೀಂ

ರೋಹಿತ್ ಶರ್ಮಾ ಭಾರತವನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಿರುವುದರಿಂದ ನಿರೀಕ್ಷೆಗಳು ಹೆಚ್ಚಿವೆ. ಆರಂಭದಲ್ಲಿ, ರೋಹಿತ್ಗೆ ಸೀಮಿತ ಓವರ್ಗಳಲ್ಲಿ ಮಾತ್ರ ನಾಯಕತ್ವವನ್ನು ನೀಡಲಾಯಿತು, ಆದರೆ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದಾಗ ಪೂರ್ಣ ಪ್ರಮಾಣದ ನಾಯಕರಾಗಿ ರೋಹಿತ್ ಹೊರಹೊಮ್ಮಿದ್ದಾರೆ.
ಈ ವರ್ಷದ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಮತ್ತು ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿರುವುದರಿಂದ ನಾಯಕನಾಗಿ ರೋಹಿತ್ ಮುಂದೆ ದೊಡ್ಡ ಸವಾಲು ಇದೆ. ಹೀಗಾಗಿ ಅವರು ತಂಡವನ್ನ ಹಾಗೂ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನು ಸಿದ್ಧಪಡಿಸಬೇಕಾದ ಜವಾಬ್ದಾರಿ ಇದೆ. ಅನೇಕ ಯುವ ಪ್ರತಿಭಾವಂತ ಆಟಗಾರರಿದ್ದರೂ ಕ್ಯಾಪ್ಟನ್ ಶರ್ಮಾ ಮುಂದೆ ದೊಡ್ಡ ಸವಾಲಿದೆ.

ಐಸಿಸಿ ಟ್ರೋಫಿ ಗೆಲ್ಲದ ಕೊಹ್ಲಿಯನ್ನ ವಜಾಗೊಳಿಸಲಾಗಿತ್ತು!
ಐಸಿಸಿ ಟ್ರೋಫಿಗಳ ಕೊರತೆಯಿಂದಾಗಿ ಭಾರತದ ನಾಯಕತ್ವ ಸ್ಥಾನದಿಂದ ಕೊಹ್ಲಿಯನ್ನು ತೆಗೆದುಹಾಕಲಾಯಿತು. ಹೀಗಾಗಿ ನಾಯಕನಾಗಿ ಮುಂದುವರಿಯುವಾಗ ರೋಹಿತ್ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳನ್ನು ಭಾರತದ ಮಾಜಿ ವಿಕೆಟ್ ಕೀಪರ್ - ಬ್ಯಾಟ್ಸ್ಮನ್ ಸಬಾ ಕರೀಂ ತಿಳಿಸಿದ್ದಾರೆ. 'ರೋಹಿತ್ ಶರ್ಮಾ ಅವರ ಪ್ರಮುಖ ಗುರಿ ಈ ವರ್ಷದ ಟಿ20 ವಿಶ್ವಕಪ್ ಮತ್ತು ಮುಂದಿನ ವರ್ಷದ ಏಕದಿನ ವಿಶ್ವಕಪ್. ಅವನ ಮುಂದೆ ಹೆಚ್ಚು ಸಮಯವಿಲ್ಲ'' ಎಂದು ಸಾಬಾ ಕರೀಂ ಎಚ್ಚರಿಸಿದ್ದಾರೆ.

ಆಟಗಾರರ ಫಿಟ್ನೆಸ್ ದೊಡ್ಡ ಸಮಸ್ಯೆಯಾಗಿದೆ
ಆಟಗಾರರ ಸ್ಥಿರ ಪ್ರದರ್ಶನ ಮತ್ತು ಫಿಟ್ನೆಸ್ ಪ್ರಮುಖ ಸಮಸ್ಯೆಯಾಗಿದೆ. ಫಿಟ್ನೆಸ್ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಆಟಗಾರರಿಗೆ ನಿರ್ದಿಷ್ಟ ಗಮನ ನೀಡಬೇಕು. ನಾವು ಆಟಗಾರರನ್ನು ಸರಿಯಾದ ಸ್ಥಾನಕ್ಕೆ ತರಬೇಕು ಮತ್ತು ಅವರನ್ನು ಬೆಂಬಲಿಸಬೇಕು ಎಂಬುದನ್ನು ರೋಹಿತ್ ಗಮನಿಸಬೇಕು ಎಂದು ಸಾಬಾ ಕರೀಂ ಹೇಳಿದರು.
ಐಪಿಎಲ್ 2022: ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿವೆ ಟೂರ್ನಿಯ ಈ ಪ್ರಮುಖ ಅಂಶಗಳು

2021ರ ವಿಶ್ವಕಪ್ನಲ್ಲಿ ಭಾರತ ಗಾಯಾಳುಗಳ ಸಮಸ್ಯೆ ಎದುರಿಸಿತ್ತು!
ಕಳೆದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಗಾಯಾಳುಗಳ ಸಮಸ್ಯೆಯನ್ನ ಎದುರಿಸದ್ದರ ಜೊತೆಗೆ ಫಿನಿಶರ್ ಪಾತ್ರದಲ್ಲಿ ಫಿಟ್ನೆಸ್ ಸಮಸ್ಯೆ ಇರುವ ಹಾರ್ದಿಕ್ ಅವರನ್ನು ಭಾರತ ಬೆಂಬಲಿಸಿತ್ತು. ಇದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಈ ಬಾರಿ ವೆಂಕಟೇಶ್ ಅಯ್ಯರ್ ಅವರನ್ನು ಭಾರತ ಫಿನಿಶರ್ ಪಾತ್ರಕ್ಕೆ ತರಲಾಗುತ್ತಿದೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ಮಿಂಚಿದ್ದ ವೆಂಕಟೇಶ್ ಶ್ರೀಲಂಕಾ ಸರಣಿಯಲ್ಲೂ ಮಿಂಚಿದರೆ ಟಿ20 ವಿಶ್ವಕಪ್ ನಲ್ಲಿ ವೆಂಕಟೇಶ್ ಗೆ ಫಿನಿಶರ್ ಆಡುವ ಅವಕಾಶ ಸಿಗಬಹುದು.
ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷೆಗೆ ತಕ್ಕಂತೆ ಇರದಿದ್ದಾಗ ರೋಹಿತ್ನಿಂದ ಇಂತಹ ಪ್ರತಿಕ್ರಿಯೆಗಳು ಕಂಡುಬಂದವು. ರೋಹಿತ್ ಮೈದಾನದ ಒಳಗೆ ಮತ್ತು ಹೊರಗೆ ಹೇಗೆ ಇರುತ್ತಾರೆ ಎಂಬುದು ಅವರ ತಂಡದ ಆಟಗಾರರಿಗೆ ಚೆನ್ನಾಗಿ ತಿಳಿದಿದೆ. ರೋಹಿತ್ಗೆ ಹಲವು ಜವಾಬ್ದಾರಿಗಳಿವೆ. ಸದ್ಯ ಭಾರತ ಯಶಸ್ಸಿನ ಹಾದಿಯಲ್ಲಿದೆ. ಅವರು ಸೋತಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ನಮಗೆ ಗೊತ್ತಿದೆ ಎಂದು ಕರೀಂ ಹೇಳಿದರು.
ಈ ದಿನ ಅಂದು: ಏಕದಿನ ಕ್ರಿಕೆಟ್ನಲ್ಲಿ ಸಚಿನ್ 200: ಏಕದಿನ ಇತಿಹಾಸದ ಪ್ರಥಮ ದ್ವಿಶತಕಕ್ಕೆ 12 ವರ್ಷ!

ಟೀಂ ಇಂಡಿಯಾ ಕಪ್ ಗೆಲ್ಲಲು ರೋಹಿತ್ ಅತಿದೊಡ್ಡ ಭರವಸೆ
ರೋಹಿತ್ ಮುಂಬೈ ಇಂಡಿಯನ್ಸ್ ಅನ್ನು ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದಾರೆ. ಅವರು ಇದುವರೆಗೆ ನಾಯಕತ್ವ ವಹಿಸಿರುವ ಎಲ್ಲಾ ಪಂದ್ಯಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಇದು ತಂಡಕ್ಕೂ ದೊಡ್ಡ ಭರವಸೆ ಮೂಡಿಸಿದೆ. ಭಾರತ ಈಗ ಟಿ20 ವಿಶ್ವಕಪ್ ಗೆಲ್ಲುವ ಯೋಚನೆಯಲ್ಲಿದೆ. ರಾಹುಲ್ ದ್ರಾವಿಡ್-ರೋಹಿತ್ ಜೊತೆಯಾಟವೂ ಅತ್ಯುತ್ತಮವಾಗಿದೆ. ಯುವ ಆಟಗಾರರನ್ನು ಹೊಂದಿರುವ ಉತ್ತಮ ತಂಡವನ್ನು ರೂಪಿಸಲು ಭಾರತ ಪ್ರಯತ್ನಿಸುತ್ತಿದೆ. ರೋಹಿತ್ ನಾಯಕತ್ವದಲ್ಲಿ ಮುಂಬರುವ ಸರಣಿ ಮತ್ತು ವಿಶ್ವಕಪ್ನಲ್ಲಿ ಭಾರತವು ತನ್ನ ಅದ್ಭುತ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗುತ್ತದೆಯೇ ಎಂದು ನೋಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications