
ಪಿಸಿಬಿ ಇದನ್ನು ಅನುಸರಿಸುತ್ತಿಲ್ಲ
ಇತರ ಎಲ್ಲಾ ಕ್ರಿಕೆಟ್ ಬೋರ್ಡ್ಗಳು ತಮ್ಮಲ್ಲಿನ ಮಾಜಿ ಕ್ರಿಕೆಟಿಗರನ್ನು ದೇಶಿ ಕ್ರಿಕೆಟ್ಗೆ ಸಂಬಂಧಿಸಿದ ಹುದ್ದೆಗಳಿಗೆ ಬಳಸಿಕೊಳ್ಳುತ್ತವೆ. ಆದರೆ ಇದನ್ನು ಪಿಸಿಬಿ ಅನುಸರಿಸುತ್ತಿಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಬಳಲುತ್ತಿದೆ ಎಂದು ಶೋಯೆಬ್ ಹೇಳಿಕೊಂಡಿದ್ದಾರೆ.

ಗಂಗೂಲಿ, ದ್ರಾವಿಡ್ಗೆ ಒಳ್ಳೆ ಸ್ಥಾನ
'ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ, ರಾಹುಲ್ ದ್ರಾವಿಡ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ಗ್ರೇಮ್ ಸ್ಮಿತ್ ಕ್ರಿಕೆಟ್ ಸೌತ್ ಆಫ್ರಿಕಾದ ಮುಖ್ಯಸ್ಥ, ಮಾರ್ಕ್ ಬೌಚರ್ ಮುಖ್ಯ ಕೋಚ್. ಇವೆಕ್ಕೆಲ್ಲ ವಿರುದ್ಧ ಅನ್ನಿಸುವಂತದ್ದು ಪಾಕಿಸ್ತಾನದಲ್ಲಿ ನಡೆಯುತ್ತಿದೆ,' ಎಂದು ಮಾಧ್ಯಮವೊಂದರಲ್ಲಿ ಮಾತನಾಡುತ್ತ ಅಖ್ತರ್ ಹೇಳಿದ್ದಾರೆ.

ಟಿವಿ ಶೋ ಮುಂದೆ ಕೂರೋದಷ್ಟೇ ಅಲ್ಲ
ಮಾತು ಮುಂದುವರೆಸಿದ ಅಖ್ತರ್, 'ಕ್ರಿಕೆಟ್ನ ಅನುಭವ ಹೊಂದಿರುವ ನನ್ನನ್ನು ಪಾಕಿಸ್ತಾನ ಯಾವತ್ತೂ ಸರಿಯಾಗಿ ಬಳಸಿಕೊಂಡಿಲ್ಲ. ನನ್ನ ಕೆಲಸ ಬರೀ ಟಿವಿ ಶೋಗಳ ಮುಂದೆ ಕೂರುವುದಷ್ಟೇ ಅಲ್ಲ. ಪಾಕ್ ನನಗೆ ಕ್ರಿಕೆಟ್ ನಡೆಸಲು ಅವಕಾಶ ಮಾಡಿಕೊಡಬೇಕು,' ಎಂದಿದ್ದಾರೆ.

ಪಿಎಸ್ಎಲ್ ಬಗ್ಗೆಯೂ ಗರಂ
'ನನ್ನ ಕೋಪಕ್ಕೆ ಪಿಎಸ್ಎಲ್ ಕೂಡ ಕಾರಣ. ಪಾಕಿಸ್ತಾನಕ್ಕೆ ಎಷ್ಟೋ ವರ್ಷಗಳ ಬಳಿಕ ಕ್ರಿಕೆಟ್ ಬಂದಿದೆ. ಆದರೆ ನಮ್ಮ ದೇಶದಲ್ಲಿ ಪಿಎಸ್ಎಲ್ ಆರಂಭವಾಗಿದ್ದು ಇದೇ ಮೊದಲಬಾರಿ. ಇದೀಗ ಅದೂ ಕೂಡ ತೊಂದರೆಯಲ್ಲಿದೆ. ಕದ ಮುಚ್ಚಿದ ಮೈದಾನದಲ್ಲಿ ಟೂರ್ನಿ ನಡೆಯುವಂತಾಗಿದೆ,' ಎಂದು ಅಖ್ತರ್ ಹೇಳಿದ್ದಾರೆ.


Click it and Unblock the Notifications
