For Quick Alerts
ALLOW NOTIFICATIONS  
For Daily Alerts
 

ಪದೇ ಪದೇ ಶಾರ್ಟ್ ಬಾಲ್‌ಗೆ ಔಟಾಗುತ್ತಿರುವ ಶ್ರೇಯಸ್‌ ಅಯ್ಯರ್‌: ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗೋದು ಅನುಮಾನ!

Shreyas iyer

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್‌ಗಳಲ್ಲಿ ಒಬ್ಬಾತ ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ಫಾರ್ಮ್ ದಿನೇ ದಿನೇ ಕುಸಿತ ಕಾಣುತ್ತಿರುವ ಬಗ್ಗೆ ಮಾಜಿ ಆಟಗಾರ ಹಾಗೂ ಬಿಸಿಸಿಐ ಮಾಜಿ ಸೆಲೆಕ್ಟರ್ ಜತಿನ್ ಪರಾಂಜಪೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಘಾತಕಾರಿ ಸೋಲು ಕಂಡಿತು.

ಈ ಪಂದ್ಯದಲ್ಲಿ ಮೂರನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಜೊತೆಗೆ, ಇಂಗ್ಲೆಂಡ್ ವಿಕೆಟ್ ಪಡೆಯುವಲ್ಲಿ ಟೀಂ ಇಂಡಿಯಾ ಎಡವಿದ ಪರಿಣಾಮ ಗೆಲ್ಲುವ ಪಂದ್ಯವನ್ನ ಟೀಮ್ ಇಂಡಿಯಾ ಬಿಟ್ಟುಕೊಟ್ಟಿತು.

ಶಾರ್ಟ್‌ ಬಾಲ್‌ ಆಡುವುದು ಶ್ರೇಯಸ್ ಅಯ್ಯರ್‌ ದೊಡ್ಡ ದೌರ್ಬಲ್ಯ

ಶಾರ್ಟ್‌ ಬಾಲ್‌ ಆಡುವುದು ಶ್ರೇಯಸ್ ಅಯ್ಯರ್‌ ದೊಡ್ಡ ದೌರ್ಬಲ್ಯ

ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ದೊಡ್ಡ ದೌರ್ಬಲ್ಯ ಬೌನ್ಸರ್ ಬಾಲ್ ಎಂದು ಬೆಳಕಿಗೆ ಬಂದಿದೆ. ಕೋಲ್ಕತ್ತಾ ತಂಡದ ಕೋಚ್ ಆಗಿದ್ದ ಮೆಕಲಮ್ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದಾರೆ. ಮೆಕಲಮ್ ಶ್ರೇಯಸ್ ಅಯ್ಯರ್ ಅವರಿಗೆ ಶಾರ್ಟ್ ಬೌಲಿಂಗ್ ಮಾಡುವಂತೆ ಸೂಚಿಸಿದರು ಮತ್ತು ಅದು ಯಶಸ್ವಿಯಾಯಿತು.

ಎಡ್ಜ್‌ಬಾಸ್ಟನ್‌ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿ ಭೋಜನ ವಿರಾಮದ ವೇಳೆಗೆ ಭಾರತ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಆದರೆ, ಶ್ರೇಯಸ್ ಅಯ್ಯರ್ ಅವರ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಲು ಇಂಗ್ಲೆಂಡ್ ಬೌಲರ್ ಗಳಿಗೆ ತಂಡದ ಕೋಚ್ ಮೆಕಲಮ್ ಸನ್ನೆ ಮಾಡಿ ಯಶಸ್ವಿಯಾದ್ರು. ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿರುವ ಮೆಕಲಮ್ ಅಯ್ಯರ್ ಅವರ ದೌರ್ಬಲ್ಯವನ್ನು ಚೆನ್ನಾಗಿ ತಿಳಿದಿದ್ದರು. ಈ ಕ್ರಮದಲ್ಲಿ ಅವರು ತಮ್ಮ ಬೌಲರ್‌ಗಳಿಗೆ ಆತ ಕ್ರೀಸ್‌ನಲ್ಲಿ ನೆಲೆಯೂರದಂತೆ ಹಲವು ಸನ್ನೆಗಳನ್ನು ಮಾಡಿದರು.

ಅಯ್ಯರ್ ಶಾರ್ಟ್ ಪಿಚ್ ಬಾಲ್ ಗಳನ್ನು ಆಡುವುದರಲ್ಲಿ ಸೀಮಿತವಾಗಿರುತ್ತಾರೆ ಎಂದು ಮೆಕಲಮ್ ತಮ್ಮ ಸನ್ನೆಗಳ ಮೂಲಕ ಬೌಲರ್ ಗಳಿಗೆ ಸೂಚಿಸಿದರು. ತರಬೇತುದಾರರ ಸೂಚನೆಯ ಮೇರೆಗೆ ಇಂಗ್ಲೆಂಡ್ ಶಾರ್ಟ್ ಪಿಚ್ ಎಸೆತಗಳಲ್ಲಿ ಅಯ್ಯರ್ ಅವರನ್ನು ಔಟ್ ಮಾಡಿತು.

5 ಪಂದ್ಯದಲ್ಲಿ 288 ರನ್ ಚಚ್ಚಿರುವ ಈತನಿಂದ ಕೊಹ್ಲಿ ಸ್ಥಾನಕ್ಕೆ ಕುತ್ತು: ಈತನೇ ಕೊಹ್ಲಿಯ ಬದಲಿ ಆಟಗಾರ!

ಅಯ್ಯರ್ ಶಾರ್ಟ್‌ ಬಾಲ್ ಸಮಸ್ಯೆ ಸರಿಪಡಿಸಿಕೊಳ್ಳದಿದ್ರೆ ಕಷ್ಟವಾದೀತು!

ಅಯ್ಯರ್ ಶಾರ್ಟ್‌ ಬಾಲ್ ಸಮಸ್ಯೆ ಸರಿಪಡಿಸಿಕೊಳ್ಳದಿದ್ರೆ ಕಷ್ಟವಾದೀತು!

ಇಂಗ್ಲೆಂಡ್ ಬೌಲರ್‌ಗಳು ಎಸೆದ ಶಾರ್ಟ್‌ಬಾಲ್‌ಗಳಿಂದ ಸ್ವಲ್ಪ ಸಮಯದವರೆಗೆ ಪಾರಾದ ಶ್ರೇಯಸ್ ಅಯ್ಯರ್ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 19 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿ ಮೋಸ ಔಟಾದ ಶ್ರೇಯಸ್ ಶಾರ್ಟ್ ಬಾಲ್ ಸಮಸ್ಯೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಅವಕಾಶ ಸಿಗುವುದಿಲ್ಲ ಎನ್ನುತ್ತಿದ್ದಾರೆ ತಜ್ಞರು.

ಶ್ರೇಯಸ್‌ ಅಯ್ಯರ್‌ಗೆ ಬಿಸಿಸಿಐ ಮಾಜಿ ಅಧಿಕಾರಿ ಸಲಹೆ

ಶ್ರೇಯಸ್‌ ಅಯ್ಯರ್‌ಗೆ ಬಿಸಿಸಿಐ ಮಾಜಿ ಅಧಿಕಾರಿ ಸಲಹೆ

ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಅಧಿಕಾರಿ ಜತಿನ್ ಪರಾಂಜಪೆ ಶ್ರೇಯಸ್‌ಗೆ ಸಲಹೆ ನೀಡಿದ್ದಾರೆ. ಅದರಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರಿಗೆ ತುಂಬಾ ಆಸಕ್ತಿ ಇದೆ. ಆದರೆ ನಾನು ಹೇಳುವ ಪಾಠವನ್ನು ಕಲಿಯುವುದನ್ನು ಆತ ಮಿಸ್ ಮಾಡುತ್ತಿದ್ದಾನೆ ಎಂದಿದ್ದಾರೆ.

ಅನುಭವವು ಪ್ರಮುಖವಾಗಿದೆ ಮತ್ತು ಅವರು ಔಟಾದ ಏಕೈಕ ರೀತಿ ಸರಿಯಿಲ್ಲ ಎಂದಿದ್ದಾರೆ. ಇಲ್ಲದಿದ್ದರೆ, ಅವರು ಸುಮಾರು 30 ನಿಮಿಷಗಳ ಕಾಲ ಮೈದಾನದಲ್ಲಿ ಉತ್ತಮವಾಗಿ ಆಡಿದರು ಮತ್ತು ಉತ್ತಮ ಸ್ಕೋರ್ ಗಳಿಸಲು ಬಯಸಿದ್ದರು. ಆದಾಗ್ಯೂ, ಅವರು ಔಟ್ ಆಗಿದ್ದರು. ಹಾಗಾಗಿ ಶಾರ್ಟ್ ಬಾಲ್ ಗಳ ಆಯ್ಕೆಯನ್ನು ಅನುಭವದ ಮೂಲಕವೇ ಕಲಿಯಬಹುದು ಎಂದು ಜತಿನ್ ಪರಾಂಜಪೆ ಹೇಳಿದ್ದಾರೆ.

ಇತಿಹಾಸದಲ್ಲಿ ಯಾವ ನಾಯಕನೂ ಮಾಡಿರದ ದಾಖಲೆ ಮಾಡಿದ ರೋಹಿತ್; ಕೊಹ್ಲಿ ದಾಖಲೆಯೂ ಉಡೀಸ್!

ಮೈದಾನದಲ್ಲಿ ಕಠಿಣ ಅಭ್ಯಾಸ ಮಾಡಬೇಕು!

ಮೈದಾನದಲ್ಲಿ ಕಠಿಣ ಅಭ್ಯಾಸ ಮಾಡಬೇಕು!

ರಾಹುಲ್ ದ್ರಾವಿಡ್ ಅವರೊಂದಿಗೆ ಚಹಾದ ಬಗ್ಗೆ ಸಮಾಲೋಚಿಸಿದರೆ, ಅದು ನಿಮಗೆ ದೊಡ್ಡ ಪಾಠವನ್ನು ಕಲಿಸುವುದಿಲ್ಲ. ನೇರವಾಗಿ ಮೈದಾನಕ್ಕೆ ಜಿಗಿದು ಸತತ ಅಭ್ಯಾಸ ಮಾಡುವ ಮೂಲಕ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ. ಹಾಗಾಗಿ ಶ್ರೇಯಸ್ ಅಯ್ಯರ್ ಅವಕಾಶಗಳನ್ನು ಪಡೆಯುತ್ತಲೇ ಸುಧಾರಿಸಿಕೊಳ್ಳುತ್ತಾರೆ ಎಂದು ಜತಿನ್ ಪರಾಂಜಪೆ ಹೇಳಿದ್ದಾರೆ.

Story first published: Friday, July 8, 2022, 10:56 [IST]
Other articles published on Jul 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+