
ವಿಶ್ವಕಪ್ನಲ್ಲಿ ಒಂದು ತಪ್ಪು ಹೆಜ್ಜೆ ಇಟ್ಟರೂ ವಿಶ್ವಕಪ್ ಗೆಲ್ಲುವುದು ಸುಲಭವಲ್ಲ!
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಸಿಸಿ ಟಿ20 ವಿಶ್ವಕಪ್ನಲ್ಲಿ ಪ್ರತಿ ಪಂದ್ಯವು ಎಷ್ಟು ಮಹತ್ವವಾದದ್ದು ಎಂಬುದನ್ನ ಅರಿತಿದ್ದಾರೆ. ವಿಶ್ವಕಪ್ನಂತಹ ಮಹಾ ಟೂರ್ನಿಯಲ್ಲಿ ಒಂದು ತಪ್ಪು ಹೆಜ್ಜೆ ಇಟ್ಟರೂ ಯೋಜನೆಗಳೆಲ್ಲಾ ತಲೆಕೆಳಗಾಗಬಹುದು ಎಂಬುದು ಮನವರಿಕೆಯಾಗಿದೆ. ಜೊತೆಗೆ 2021ರ ವಿಶ್ವಕಪ್ನಲ್ಲಿ ಅನುಭವಿಸಿದ ಮುಖಭಂಗ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕಿದೆ.
ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಿಷಭ್ ಪಂತ್: ವಿಶ್ವಕಪ್ನಲ್ಲಿ ಆಡೋದು ಬಿಟ್ಟು, ಇದೇನಿದು?

ಪಾಕಿಸ್ತಾನ ವಿರುದ್ಧ ಪಂದ್ಯಕ್ಕೂ ಮುನ್ನ ಹಿಟ್ಮ್ಯಾನ್ ಮಹತ್ವದ ಹೇಳಿಕೆ
ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಮಾಧ್ಯಮದೊಂದಿಗೆ ಮಾತನಾಡಿದ್ದು '' ಪ್ರತಿ ಬಾರಿ ವಿಶ್ವಕಪ್ ಪ್ರವೇಶಿಸಿದ್ದಾಗಲೂ ಅದ್ಭುತ ಭಾವನೆಗಳಿರುತ್ತವೆ. ಪರ್ತ್ನಲ್ಲಿ ಉತ್ತಮ ಟ್ರೈನಿಂಗ್ ಕ್ಯಾಂಪ್ ಮುಗಿಸಿದ್ದೇವೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಎರಡು ಸರಣಿಗಳನ್ನ ಗೆದ್ದಿದ್ದರೂ, ಆಸ್ಟ್ರೇಲಿಯಾ ನೆಲದಲ್ಲಿ ಸವಾಲು ಬೇರೆ ರೀತಿಯಲ್ಲಿರುತ್ತದೆ. ಇಲ್ಲಿನ ಪರಿಸ್ಥಿತಿ ಸವಾಲಿನಿಂದ ಕೂಡಿದ್ದರ ಪರಿಣಾಮ, ನಾವು ಸ್ವಲ್ಪ ಬೇಗನೆ ಇಲ್ಲಿಗೆ ಬಂದು ಅಭ್ಯಾಸ ಮಾಡಿದ್ದೇವೆ'' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
''ಮುಂಬರುವ ಪಂದ್ಯವು ಬಹುದೊಡ್ಡ ಸವಲಾಗಿದ್ದರೂ ಸಹ ನಾವು ರಿಲ್ಯಾಕ್ಸ್ ಆಗಿ ಮತ್ತು ಫೋಕಸ್ ಆಗಿದ್ದುಕೊಂಡು, ವೈಯಕ್ತಿಕವಾಗಿ ಪ್ರತಿಯೊಬ್ಬರು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ. ಇದು ನಮಗೆ ಕೀ ಪಾಯಿಂಟ್ ಆಗಿದೆ'' ಎಂದು ರೋಹಿತ್ ತಿಳಿಸಿದ್ದಾರೆ.
ಅಕ್ಟೋಬರ್ 23ರಂದು ಭಾನುವಾರ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಮೆಲ್ಬರ್ನ್ನ ಎಂಸಿಜಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
ಏಷ್ಯಾಕಪ್ನಲ್ಲಿ ಭಾರತ ಭಾಗವಹಿಸದಿದ್ರೆ, ಏಷ್ಯಾಕಪ್ ನಡೆಯೋದೆ ಇಲ್ಲ: ಕಾರಣ ಏನೆಂದು ತಿಳಿಸಿದ ಆಕಾಶ್ ಚೋಪ್ರಾ

ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಅಂತಿಮ 15 ಆಟಗಾರರ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಸ್ಟ್ಯಾಂಡ್ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್.


Click it and Unblock the Notifications
