ಲಂಡನ್, ಜೂನ್ 06: ಕೋಹ್ಲಿ ನೇತೃತ್ವದ ಟೀಂ ಇಂಡಿಯಾ ದೇಣಿಗೆ ಕಾರ್ಯಕ್ರಮದಲ್ಲಿ ಉದ್ಯಮಿ ವಿಜಯ್ ಮಲ್ಯ ಅವರ ಆಗಮನವಾಗುತ್ತಿದ್ದಂತೆ ತಂಡದ ಅನೇಕ ಆಟಗಾರರು ಮುಜುಗರದಿಂದ ಅತ್ತಿತ್ತ ನೋಡ ತೊಡಗಿದ್ದಾರಂತೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಮನಿಲಾಂಡ್ರಿಂಗ್ ಕೇಸಿನ ಆರೋಪ ಹೊತ್ತಿರುವ ವಿಜಯ್ ಮಲ್ಯ ಅವರು ಭಾರತ ತೊರೆದು ಇಂಗ್ಲೆಂಡಿನಲ್ಲಿ ನೆಲೆಸಿದ್ದು, ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ತನಿಖಾ ತಂಡಗಳು ಹರ ಸಾಹಸ ಪಡುತ್ತಿವೆ.[]
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಲಂಡನ್ನಿನಲ್ಲಿ ಜಸ್ಟೀಸ್ ಅಂಡ್ ಕೇರ್ ಸಂಸ್ಥೆಗೆ ಹಣ ಸಂಗ್ರಹಿಸಲು ಚಾರಿಟಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಡಿನ್ನರ್ ಜತೆಗೆ ದೇಣಿಗೆ ಸಂಗ್ರಹ ಮಾಡಲಾಯಿತು. [ಮ್ಯಾಚ್ ನೋಡಲು ಬಂದ ಮಲ್ಯಗೆ ಆಯ್ತು ಕೆಟ್ಟ ಅನುಭವ!]
ಈ ಕಾರ್ಯಕ್ರಮಕ್ಕೆ ಮಲ್ಯ ಆಗಮಿಸಿದ್ದು, ಹಲವರಿಗೆ ಇರುಸು ಮುರುಸು ಉಂಟು ಮಾಡಿದೆ. ಅವಧಿಗೂ ಮುನ್ನವೇ ರಾತ್ರಿ ಊಟ ಮುಗಿಸಿ ಅನೇಕ ಆಟಗಾರರು ಜಾಗ ಬಿಟ್ಟು ತಮ್ಮ ಹೋಟೆಲ್ ಗೆ ತೆರಳಿದರು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಸಿಸಿಐ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. (ಪಿಟಿಐ)