
ವಿರಾಟ್ ಕೊಹ್ಲಿಯಿಂದ ಬಂತು ಅಮೂಲ್ಯ ಉಡುಗೊರೆ
ಪತ್ರಕರ್ತ ವಿಮಲ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಅವರೊಂದಿಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿ, ವಿರಾಟ್ ಕೊಹ್ಲಿಯಿಂದ ಆ ಅಮೂಲ್ಯವಾದ ಉಡುಗೊರೆಯನ್ನು ಹೇಗೆ ಪಡೆದರು ಎಂಬುದನ್ನು ಬಹಿರಂಗಪಡಿಸಿದರು ಮತ್ತು ಇದು ಇತರ ಕ್ರಿಕೆಟ್ ತಾರೆಯರಿಂದ ಹಸ್ತಾಕ್ಷರದ ಬ್ಯಾಟ್ಗಳ ವಿಶೇಷ ಸಂಗ್ರಹದ ಭಾಗವಾಗಿ ಇದು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿ ಅವರು 8-9 ವರ್ಷಗಳಿಂದ ಕ್ರಿಕೆಟ್ ತಾರೆಗಳಿಂದ ಹಸ್ತಾಕ್ಷರದ ಬ್ಯಾಟ್ಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಪಟ್ಟಿಯು ಸ್ಟಾರ್-ಸ್ಟಡ್ಡ್ ಆಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಹಸ್ತಾಕ್ಷರ ಪಡೆದದ್ದು ನನ್ನ ಅದೃಷ್ಟ
"ಹೌದು, ವಿರಾಟ್ ಕೊಹ್ಲಿ ಭಯ್ಯಾ ಸಹಿ ಮಾಡಿ ಉಡುಗೊರೆಯಾಗಿ ನೀಡಿದ ಬ್ಯಾಟ್ ನನ್ನ ಕೈಯಲ್ಲಿದೆ. ಅವರು ಇಂದು ಶತಕ ಬಾರಿಸಿದ್ದು ನನಗೆ ಖುಷಿ ನೀಡಿದೆ ಮತ್ತು ಹಸ್ತಾಕ್ಷರ ಪಡೆದದ್ದು ನನ್ನ ಅದೃಷ್ಟ. ಇಂದು ಯುಎಇನಲ್ಲಿ ಅವರ ಕೊನೆಯ ಪಂದ್ಯದಲ್ಲಿ ಹಸ್ತಾಕ್ಷರ ಮಾಡಿದ ಬ್ಯಾಟ್ ಅನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆ. ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ, ನಾನು ಅವರಿಗೆ ವಿಶೇಷ ವಿನಂತಿಯನ್ನು ಮಾಡಿದ್ದೇನೆ ಮತ್ತು ಅವರು ಒಪ್ಪಿಕೊಂಡರು," ಎಂದು ಅಭಿಮಾನಿ ಹೇಳಿದರು.
ನಂತರ ಅವರನ್ನು ಈ ಬ್ಯಾಟ್ ಮಾರಾಟ ಮಾಡಲು ಬಯಸುತ್ತೀರಾ ಎಂದು ಕೇಳಲಾಯಿತು, ಆಗ ಆ ಅಭಿಮಾನಿಯ ಪ್ರತಿಕ್ರಿಯೆಯು ವಿಚಿತ್ರವಾಗಿತ್ತು, "ಇಲ್ಲಿ ಕೇಳು ಸಹೋದರ, ನಾನು ಬ್ಯಾಟ್ ಅನ್ನು ಮೊದಲು ಮಾರಿದ್ದರೆ ಯುನೋ ಕಹಾದಲ್ಲಿ 4000-5000 ದಿರ್ಹಮ್ಗಳಿಗೆ (1 ದಿರ್ಹಮ್ INR 21.68) ಮಾರುತ್ತಿತ್ತು. ಆದರೆ ವಿರಾಟ್ ಕೊಹ್ಲಿ ಹಸ್ತಾಕ್ಷರ ಬಿದ್ದ ನಂತರ ನೀವು 5 ಲಕ್ಷ ದಿರ್ಹಮ್ (INR 1.08 ಕೋಟಿ) ನೀಡಿದರೂ ಈ ಬ್ಯಾಟ್ ಅನ್ನು ಮಾರಾಟ ಮಾಡುವುದಿಲ್ಲ," ಎಂದರು.
ನನ್ನ ಬಳಿ ಸುಮಾರು 150 ಪ್ಲಸ್ ಬ್ಯಾಟ್ಗಳಿವೆ ಎಂದ ಆ ಅಭಿಮಾನಿ, ಕಳೆದ 8-9 ವರ್ಷಗಳಿಂದ ಸ್ಟಾರ್ ಕ್ರಿಕೆಟಿಗರ ಹಸ್ತಾಕ್ಷರವುಳ್ಳ ಬ್ಯಾಟ್ ಅನ್ನು ಸಂಗ್ರಹಿಸುತ್ತಿದ್ದಾರೆ. ನನ್ನ ಬಳಿ ಇಮ್ರಾನ್ ಖಾನ್, ಶಾಹಿದ್ ಅಫ್ರಿದಿ ಸೇರಿದಂತೆ ಭಾರತದಿಂದ ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅವರ ಬ್ಯಾಟ್ ಕೂಡ ಇವೆ," ಎಂದು ಅವರು ತಿಳಿಸಿದರು.

ಹಾಲಿ ಚಾಂಪಿಯನ್ ಭಾರತ ತಂಡ ಹೊರಬಿದ್ದಿದೆ
ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಗಳಿಸಿ ಭಾರತ ನಿಗದಿತ 20 ಓವರ್ಗಳಲ್ಲಿ 212 ರನ್ ಗಳಿಸಿತು. ಭುವನೇಶ್ವರ್ ಕುಮಾರ್ ತಮ್ಮ ಬಿಗಿ ಬೌಲಿಂಗ್ ದಾಳಿ ಮೂಲಕ ಅಫ್ಘಾನಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು ಮತ್ತು ಅಫ್ಘಾನಿಸ್ತಾನ ಕೇವಲ 111 ರನ್ ಗಳಿಸಿದರು. ಈ ಮೂಲಕ ಭಾರತಕ್ಕೆ 101 ರನ್ಗಳ ಅಭೂತಪೂರ್ವ ಜಯ ಒಲಿಯಿತು.
ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳೆದುರು ಸೋತ ನಂತರ, ಹಾಲಿ ಚಾಂಪಿಯನ್ ಭಾರತ ತಂಡ ಪಂದ್ಯಾವಳಿಯಿಂದ ಹೊರಬಿದ್ದಿತು. ಭಾರತ ಮತ್ತು ಅಫ್ಘಾನಿಸ್ತಾನವು ಫೈನಲ್ ರೇಸ್ನಿಂದ ಹೊರಬಿದ್ದಿರುವುದರಿಂದ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಮತ್ತು ದಸುನ್ ಶನಕ ನಾಯಕತ್ವದ ಶ್ರೀಲಂಕಾ ಏಷ್ಯಾ ಕಪ್ ಟ್ರೋಫಿಗಾಗಿ ಭಾನುವಾರ (ಸೆಪ್ಟೆಂಬರ್ 11) ಸೆಣಸಾಡಲಿವೆ.


Click it and Unblock the Notifications
