
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಾದಾರ್ಪಣೆ
25 ಫೆಬ್ರವರಿ 2019 ರಂದು 2018-19ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಲವನೀತ್ ಸಿಸೋಡಿಯಾ ಕರ್ನಾಟಕದ ಪರ ತಮ್ಮ ಮೊದಲ ಟಿ20 ಪಂದ್ಯವನ್ನು ಆಡಿದರು. ಏಳರಲ್ಲಿ ಮೂರು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ಸಿಗಲಿಲ್ಲ. ಉಳಿದ ಪಂದ್ಯಗಳಲ್ಲಿ 5, 1, 38 ರನ್ ಸೇರಿ ಕೇವಲ 45 ರನ್ ಕಲೆಹಾಕಿದ ಲವನೀತ್ ಮತ್ತೆ ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲಗೊಂಡಿದ್ದರು.
ಆದ್ರೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬ್ಯಾನ್ ಆಗುವ ಮೊದಲು 2019ರ ಸೀಸನ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಮಿಂಚಿದ ಲವನೀತ್ ಉತ್ತಮ ಟಿ20 ಆಟಗಾರನಾಗಿ, ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದರು.

2021ರಲ್ಲಿ ತ್ರಿಶತಕ ಸಿಡಿಸಿ ಗಮನ ಸೆಳೆದಿದ್ದ ಪ್ಲೇಯರ್
ಲವನೀತ್ ಕಾರ್ಪೋರೇಟ್ ತಂಡಗಳ ನಡುವಿನ ಏಕದಿನ ಪಂದ್ಯವೊಂದರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ರು. 129 ಎಸೆತಗಳಲ್ಲಿ ಬರೋಬ್ಬರಿ 26 ಸಿಕ್ಸರ್ ಸಿಡಿಸಿದ್ದ ಈತ 312 ರನ್ ಸಿಡಿಸುವ ಮೂಲಕ ಭಾರತ ಕ್ರಿಕೆಟ್ ಲೋಕ ಒಮ್ಮೆ ಈತನತ್ತ ತಿರುಗಿ ನೋಡುವಂತೆ ಮಾಡಿದ್ರು.
ಇಷ್ಟಲ್ಲದೆ ಬಿಸಿಸಿಐ ಅಂಡರ್-25 ಟ್ರೋಫಿಯ ಇತ್ತೀಚಿನ ಆವೃತ್ತಿಯಲ್ಲಿ ಈತ 230ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾನೆ.
ಐಪಿಎಲ್ 2022: RCB ಸೇರಿದ ಕರ್ನಾಟಕದ ಯುವ ಪ್ರತಿಭೆ ಅನೀಶ್ವರ್

ಆರ್ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ್ದ ಸಿಸೋಡಿಯಾ
ಸ್ಫೋಟಕ ಆಟಗಾರನಾಗಿ ಗುರುತಿಸಿಕೊಂಡಿದ್ದ ಲವನೀತ್ ಸಿಸೋಡಿಯಾ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಐಪಿಎಲ್ನಲ್ಲಿ ಆಡುವ ಅವಕಾಶ ಸಿಕ್ಕರೆ ಯಾವ ತಂಡದ ಪರ ಆಡಲು ಆಸೆ ಹೊಂದಿದ್ದೀಯಾ ಎಂದು ಕೇಳಿದ ಪ್ರಶ್ನೆಗೆ '' ನಾನು ಯಾವಾಗಲೂ ಆರ್ಸಿಬಿ ಫ್ಯಾನ್. ಇದು ತಂಡವಲ್ಲ ಆದರೆ ಒಂದು ಭಾವನೆ. ವಿರಾಟ್ ಕೊಹ್ಲಿ ಸುತ್ತಮುತ್ತ ಇರುವಾಗ ಮತ್ತು ಅವರ ಜೊತೆಗೆ ಇರುವ ಲೆಜೆಂಡ್ಗಳ ಜೊತೆ ಇರುವುದೇ ಅದ್ಭುತವಾಗಿದೆ. ನಾನು ದೊಡ್ಡ ಆರ್ಸಿಬಿ ಅಭಿಮಾನಿ ಮತ್ತು ಕರ್ನಾಟಕಕ್ಕೆ ಆಡುವಾಗ ಅದು ನನ್ನ ರಕ್ತದಲ್ಲಿ ಹರಿಯುತ್ತದೆ. ನಾನು ಆರ್ಸಿಬಿಯ ಭಾಗವಾಗಲು ಇಷ್ಟಪಡುತ್ತೇನೆ'' ಎಂದು ಲವನೀತ್ ಸಿಸೋಡಿಯಾ ತಮ್ಮ ಮನದಾಳದ ಮಾತನ್ನ ತಿಳಿಸಿದ್ದನು.
ಗುಜರಾತ್ ತಂಡ ಸೇರಿದ ಕರ್ನಾಟಕದ ಅಭಿನವ್ ಮನೋಹರ್ ಬಗ್ಗೆ ತಿಳಿದುಕೊಳ್ಳಿ

ಬೆಂಗಳೂರಿನ ಯುವ ಪ್ರತಿಬೆ ಲವನೀತ್
ಜನವರಿ 15, 2000ರಲ್ಲಿ ಜನಿಸಿದ ಲವನೀತ್ ಚಿಕ್ಕಂದಿನಿಂದಲೇ ಕ್ರಿಕೆಟ್ ಕುರಿತು ಸಾಕಷ್ಟು ಆಸಕ್ತಿ ಬೆಳೆಸಿಕೊಂಡಿದ್ದರು. ಆತನ ಪೋಷಕರು ಕೂಡ ಮಗನ ಆಸೆಗೆ ಇಲ್ಲ ಎನ್ನದೆ ಪ್ರೋತ್ಸಾಹಿಸಿದರು. ಬೆಂಗಳೂರಿನ ಮೂಲದ ಲವನೀತ್ ವಿಕೆಟ್ ಕೀಪಿಂಗ್ ಜೊತೆಗೆ ಎಡಗೈ ಮಧ್ಯಮ ವೇಗಿ ಬೌಲರ್ ಕೂಡ ಆಗಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಆಗಿರುವ ಲವನೀತ್ರನ್ನ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿದೆ.
ಆರ್ಸಿಬಿ ಪರ ಹಿರಿಯ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಇದ್ದು, ಅನುಜ್ ರಾವತ್ ಹೊರತುಪಡಿಸಿದ್ರೆ, ಮೂರನೇ ವಿಕೆಟ್ ಕೀಪರ್ ಆಗಿ ಯುವ ಆಟಗಾರ ಲವನೀತ್ ಸಿಸೋಡಿಯಾ ಸ್ಕ್ವಾಡ್ನಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಒಂದು ವೇಳೆ ಗಾಯಾಳುವಾದ ಸಂದರ್ಭದಲ್ಲಿ ಈ ಯುವ ಆಟಗಾರನಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.


Click it and Unblock the Notifications
