
37 ವರ್ಷದ ಸಾಹಾ, ತ್ರಿಪುರ ತಂಡದ ನಾಯಕನಾಗಿ ಆಯ್ಕೆ
ಪ್ರಸ್ತುತ ವರ್ಷದ ದೇಶೀಯ ಕ್ರಿಕೆಟ್ ಆಡಲು ತ್ರಿಪುರಗೆ ಸಹಿ ಮಾಡಿರುವ ವೃದ್ದಿಮಾನ್ ಸಾಹಾ ತಂಡದ ನಾಯಕನಾಗಿಯೂ ಸಹ ಆಯ್ಕೆಯಾಗಿದ್ದಾರೆ. ತಂಡವನ್ನ ಮೆಂಟರ್ ಆಗಿಯೂ ಮುಂದುವರಿದಿರುವ ಸಾಹಾ ಯುವ ತಂಡವನ್ನ ಮುನ್ನಡೆಸಲಿದ್ದಾರೆ.
ಗಮನಾರ್ಹವಾಗಿ, 2021-22 ರ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ಗಿಂತ ಮೊದಲು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನ ಅಧಿಕಾರಿಗಳಿಂದ ಬಂದಂತಹ ಹೇಳಿಕೆಗಳಿಂದ ನೊಂದ ಬಳಿಕ ಸಹಾ ತಮ್ಮ ಎನ್ಒಸಿಯನ್ನು ಕೇಳಿದ್ದರು.

ರಣಜಿ ಟ್ರೋಫಿಯಿಂದ ಹಿಂದೆ ಸರಿದಿದ್ದರು
ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು ಕಳೆದ ರಣಜಿ ಋತುವಿನಲ್ಲಿ ದೂರ ಉಳಿಯಲು ಬಯಸಿದ್ದರು. ಟೀಂ ಇಂಡಿಯಾಗೆ ಸಹಾ ಅವರ ಸೇವೆ ಅಗತ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾವಿಸಿರುವ ಹಿನ್ನೆಲೆಯಲ್ಲಿ ಸಾಹಾ ಈ ನಿರ್ಧಾರ ಕೈಗೊಂಡಿದ್ದರು. ಆದ್ರೆ ಇದನ್ನ ತಪ್ಪಾಗಿ ಭಾವಿಸಿದ ಸಿಎಬಿ ಟೀಕೆಗಳು ಸಾಹಾ ಅವರನ್ನ ರಾಜ್ಯದ ತಂಡದಿಂದ ಹೊರಬರುವಂತೆ ಮಾಡಿತು.
ಮತ್ತೊಮ್ಮೆ ಕೆಟ್ಟದಾಗಿ ಔಟಾದ ವಿರಾಟ್ ಕೊಹ್ಲಿ: ಇನ್ನೆಷ್ಟು ಚಾನ್ಸ್ ಕೊಡಬೇಕು ಎಂದ ನೆಟ್ಟಿಗರು!

ವಿವಾದಾತ್ಮಕ ಟ್ವೀಟ್ ಮಾಡಿದ್ದ ಸಾಹಾ
ಅನುಭವಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ಹಾಗೂ ಪತ್ರಕರ್ತರೊಂದಿಗಿನ ಸಂಭಾಷಣೆಯ ಸ್ಕ್ರೀನ್ಶಾಟ್ ಅನ್ನು ಸಾಹಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಪತ್ರಕರ್ತನ ಬೆದರಿಕೆಯಿಂದ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು, ಆದ್ರೆ ಆತನ ಹೆಸರನ್ನು ಮಾತ್ರ ಬಹಿರಂಗಪಡಿಸಿರಲಿಲ್ಲ. ಈ ಕುರಿತಾಗಿ ತುರ್ತಾಗಿ ತನಿಖೆ ನಡೆಸಬೇಕೆಂದು ಅನೇಕ ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಬಿಸಿಸಿಐ, ಸಾಹಾಗೆ ಬೆದರಿಕೆ ಹಾಕಿದ್ದ ಖ್ಯಾತ ಹಿರಿಯ ಪತ್ರಕರ್ತನಿಗೆ ಎರಡು ವರ್ಷಗಳ ನಿಷೇಧ ಕೂಡ ಹೇರಿತು.
ರಮೀಜ್ ರಾಜಾರನ್ನು ಐಪಿಎಲ್ಗೆ ಆಹ್ವಾನಿಸಿದ್ದ ಸೌರವ್ ಗಂಗೂಲಿ; ಪಾಕ್ ಕ್ರಿಕೆಟ್ ಅಧ್ಯಕ್ಷ ತಿರಸ್ಕರಿಸಿದ್ದೇಕೆ?

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಾಹಾ ರೆಕಾರ್ಡ್
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಹಾ ಅವರ ಅಂಕಿ-ಅಂಶಗಳನ್ನ ನೋಡಿದ್ರೆ, ಬಲಗೈ ಬ್ಯಾಟರ್ 122 ಪಂದ್ಯಗಳನ್ನು ಆಡಿದ್ದಾರೆ ಮತ್ತು ಸುಮಾರು 42 ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 6423 ರನ್ ಗಳಿಸಿದ್ದಾರೆ. ಇವರ ವೃತ್ತಿಜೀವನದಲ್ಲಿ 38 ಅರ್ಧಶತಕ ಮತ್ತು 13 ಶತಕಗಳನ್ನು ಸಹ ಹೊಡೆದಿದ್ದಾರೆ. ಗರಿಷ್ಠ ಅಜೇಯ 203ರನ್ ಕಲೆಹಾಕಿದ್ದಾರೆ.


Click it and Unblock the Notifications












