ಉತ್ತಮ ಆರಂಭ
ಟಾಸ್ ಗೆದ್ದ ಎ ತಂಡದ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡರು. ನಿರೀಕ್ಷೆಯಂತೆ ತಂಡಕ್ಕೆ ಉತ್ತಮ ಆರಂಭ ದೊರಕಿತು. ಅಭಿಮನ್ಯು ಈಶ್ವರನ್ ಮತ್ತು ಅನ್ಮೋಲ್ ಪ್ರೀತ್ ಸಿಂಗ್ ಮೊದಲ ವಿಕೆಟ್ಗೆ 99 ರನ್ ಕಲೆಹಾಕಿದರು. ಅನ್ಮೋಲ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ, ಅಭಿಮನ್ಯು ತಾಳ್ಮೆಯ ಆಟದ ಮೊರೆ ಹೋದರು.
ಜಾಧವ್, ಕಾರ್ತಿಕ್ ಅಬ್ಬರ
ಬಳಿಕ ನಿತೀಶ್ ರಾಣಾ ಕೂಡ ಅರ್ಧಶತಕ ದಾಖಲಿಸಿದರು. ಕೊನೆಯಲ್ಲಿ ನಾಯಕ ದಿನೇಶ್ ಕಾರ್ತಿಕ್ 32 (23 ಎಸೆತ) ಮತ್ತು ಕೇದಾರ್ ಜಾಧವ್ 41 (25 ಎಸೆತ) ರನ್ ಗತಿ ಹೆಚ್ಚಿಸಿದರು. ಹೀಗಾಗಿ ತಂಡ 293 ರನ್ಗಳ ಸವಾಲಿನ ಮೊತ್ತ ದಾಖಲಿಸಿತು.
ವಿಜಯ್ ಶಂಕರ್ ಮೂರು ವಿಕೆಟ್ ಕಿತ್ತು ಪರಿಣಾಮಕಾರಿ ಎನಿಸಿದರು.
ದೇವಧರ್ ಟ್ರೋಫಿ: ರಹಾನೆ ತಂಡ ಮಣಿಸಿ ಫೈನಲ್ ಪ್ರವೇಶಿಸಿದ ಶ್ರೇಯಸ್ ಬಳಗ
ರಹಾನೆ, ರೈನಾ ವೈಫಲ್ಯ
ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಗುರಿ ಬೆನ್ನತ್ತಿದ ಸಿ ತಂಡ, ಆರಂಭದಲ್ಲಿಯೇ ನಾಯಕ ಅಜಿಂಕ್ಯ ರಹಾನೆ (14) ವಿಕೆಟ್ ಕಳೆದುಕೊಂಡಿತು. ಉತ್ತಮ ಆರಂಭ ಪಡೆದರೂ ಅಭಿನವ್ ಮುಕುಂದ್, ಶಮ್ಸ್ ಮುಲಾನಿ ಅವರಿಗೆ ವಿಕೆಟ್ ಒಪ್ಪಿಸಿದರು.
ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಸುರೇಶ್ ರೈನಾ, ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅವಕಾಶವನ್ನು ಮತ್ತೊಮ್ಮೆ ಕಳೆದುಕೊಂಡರು. ಕೇವಲ ಎರಡು ರನ್ ಗಳಿಸಿ ರನೌಟ್ ಆದರು. ಒಂದೆಡೆ ಉತ್ತಮ ಆಟವಾಡುತ್ತಿದ್ದ ಶುಭ್ಮನ್ ಗಿಲ್ ಅವರಿಗೆ ವಿಕೆಟ್ ಕೀಪರ್ ಇಶನ್ ಕಿಶಾನ್ ಜತೆಯಾದರು. ಇಬ್ಬರೂ ನಾಲ್ಕನೆಯ ವಿಕೆಟ್ಗೆ 121 ರನ್ ಸೇರಿಸಿದರು.
ಸೂರ್ಯಕುಮಾರ್ ಅಬ್ಬರ
ಕಿಶಾನ್ ಔಟಾದ ನಂತರ ಬಂದ ಸೂರ್ಯಕುಮಾರ್ ಯಾದವ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 36 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಸಹಿತ 56 ರನ್ ಗಳಿಸಿದರು. ಮುರಿಯದ ಐದನೇ ವಿಕೆಟ್ಗೆ ಇಬ್ಬರೂ 90 ರನ್ ಸೇರಿಸಿ ಗೆಲುವಿನ ದಡ ಮುಟ್ಟಿಸಿದರು.
ರವಿಚಂದ್ರನ್ ಅಶ್ವಿನ್ ಸೇರಿದಂತೆ ಎ ತಂಡದ ಯಾವ ಬೌಲರ್ಗಳೂ ಎದುರಾಳಿಗಳನ್ನು ನಿಯಂತ್ರಿಸುವಲ್ಲಿ ಸಫಲರಾಗಲಿಲ್ಲ.
ದೇವಧರ್ ಟ್ರೋಫಿ: ದಿನೇಶ್ ಕಾರ್ತಿಕ್ ಹೋರಾಟ ವ್ಯರ್ಥ, ಭಾರತ ಬಿ ತಂಡಕ್ಕೆ ಜಯ
ಸಂಕ್ಷಿಪ್ತ ಸ್ಕೋರ್
ಭಾರತ ಎ: 293/6 (50) ಅಭಿಮನ್ಯು ಈಶ್ವರನ್ 69, ನಿತೀಶ್ ರಾಣಾ 68, ಅನ್ಮೋಲ್ಪ್ರೀತ್ ಸಿಂಗ್ 59, ಕೇದಾರ್ ಜಾಧವ್ 41, ವಿಜಯ್ ಶಂಕರ್ 40/3, ರಾಹುಲ್ ಚಾಹರ್ 79/2
ಭಾರತ ಸಿ: 296/4 (47) ಶುಭ್ಮನ್ ಗಿಲ್ 106*, ಇಶನ್ ಕಿಶಾನ್ 69, ಸೂರ್ಯಕುಮಾರ್ ಯಾದವ್ 56*, ಅಭಿನವ್ ಮುಕುಂದ್ 37, ಆರ್. ಅಶ್ವಿನ್ 46/1, ಶಮ್ಸ್ ಮುಲಾನಿ 51/1.
ಫಲಿತಾಂಶ: ಭಾರತ ಸಿ ತಂಡಕ್ಕೆ ಆರು ವಿಕೆಟ್ ಜಯ, ಫೈನಲ್ ಪ್ರವೇಶ
ಫೈನಲ್ ಪಂದ್ಯ
ಫೈನಲ್: ಭಾರತ ಬಿ ಮತ್ತು ಭಾರತ ಸಿ
ಸ್ಥಳ: ಫಿರೋಜ್ ಶಾ ಕೋಟ್ಲಾ, ದೆಹಲಿ
ಸಮಯ: ಶನಿವಾರ (ಅ.27), ಬೆಳಿಗ್ಗೆ 9
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2