
ಅತ್ಯುತ್ತಮ 11 ಆಟಗಾರರನ್ನ ಸೆಲೆಕ್ಟ್ ಮಾಡಬೇಕು
ಕಳೆದ ಸೀಸನ್ನಿಂದ ತಂಡವು ಸಾಕಷ್ಟು ಬದಲಾವಣೆಗಳಿಗೆ ಒಳಗಾಗಿದೆ. ಆದ್ದರಿಂದ ಜಡೇಜಾ ಅತ್ಯುತ್ತಮ 11 ಆಟಗಾರರನ್ನು ಹುಡುಕಬೇಕಾಗಿದೆ. ಇದು ಜಡೇಜಾ ಮುಂದಿರುವ ಪ್ರಮುಖ ಸವಾಲು. ಮುಖ್ಯವಾಗಿ 14 ಕೋಟಿ ರೂ.ಗೆ ತಂಡಕ್ಕೆ ಮರಳಿದ ದೀಪಕ್ ಚಹಾರ್ ಗಾಯದ ಕಾರಣದಿಂದ ಈ ಋತುವಿನ ಹೊರಗುಳಿಯಬಹುದು. ಆದ್ದರಿಂದ, ಉತ್ತಮ ಬದಲಿಯನ್ನು ಕಂಡುಹಿಡಿಯುವುದು ಅವಶ್ಯಕ. ಮೊದಲ ಪಂದ್ಯಗಳಲ್ಲಿ ತಂಡಕ್ಕೆ ಮೊಯಿನ್ ಅಲಿ ಕೂಡ ಸಿಗುವುದಿಲ್ಲ.
ಸ್ಪಿನ್ ಆಲ್ರೌಂಡರ್ಗಳಿಗೂ ಬದಲಿ ಆಟಗಾರರ ಅಗತ್ಯವಿದೆ. ಫಾಫ್ ಡುಪ್ಲೆಸಿಸ್ ಬದಲಿಗೆ ರಾಬಿನ್ ಉತ್ತಪ್ಪ ಮತ್ತು ಡೆವೊನ್ ಕಾನ್ವೆ ಅವರನ್ನು ಆರಂಭಿಕ ಆಟಗಾರರನ್ನಾಗಿ ನೇಮಿಸುವ ನಿರ್ಧಾರ ಕೂಡ ಜಡೇಜಾಗೆ ನಿರ್ಣಾಯಕವಾಗಿದೆ. ಧೋನಿ ತಂಡದ ಜೊತೆಗಿದ್ದಾರೆ ಎಂಬ ವಿಶ್ವಾಸ ಜಡೇಜಾ ಅವರಿಗಿದೆಯಾದರೂ, ಅತ್ಯುತ್ತಮ 11 ಆಟಗಾರರನ್ನು ಹುಡುಕುವುದು ನಾಯಕನಾಗಿ ಜಡೇಜಾ ಅವರ ಜವಾಬ್ದಾರಿಯಾಗಿದೆ.
ಸಿಎಸ್ಕೆ ನೂತನ ನಾಯಕನಾದ ಬಳಿಕ ರವೀಂದ್ರ ಜಡೇಜಾ ಹೇಳಿದ್ದೇನು ಗೊತ್ತಾ?

ಯುವ ಆಟಗಾರರಿಗೆ ಅವಕಾಶ ನೀಡಬೇಕು
ಸಿಎಸ್ಕೆ ಯಾವಾಗಲೂ ಯುವ ಆಟಗಾರರನ್ನು ಪೋಷಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಭಾರತ ತಂಡದಲ್ಲಿರುವ ಅನೇಕ ಸೂಪರ್ಸ್ಟಾರ್ಗಳು ಸಿಎಸ್ಕೆ ಮೂಲಕ ಬೆಳೆದವರು. ಜಡೇಜಾ ಇಂದಿನ ಸೂಪರ್ಸ್ಟಾರ್ ಆಗುವುದರ ಹಿಂದೆ ನಾಯಕ ಧೋನಿ ಮತ್ತು ಸಿಎಸ್ಕೆ ತಂಡದ ಬೆಂಬಲವಿದೆ. ಹೀಗಿರುವಾಗ ಜಡೇಜಾ ನಾಯಕನಾಗಿದ್ದಾಗಲೂ ಯುವ ಆಟಗಾರರನ್ನು ಹುಡುಕಿ ಸಾಕಷ್ಟು ಅವಕಾಶ ನೀಡಿ ಅವರನ್ನು ಬೆಳೆಸಬೇಕಿದೆ. ಯುವ ಆಟಗಾರರಿಗೆ ಮಾನಸಿಕ ಧೈರ್ಯ, ಉತ್ತಮ ಬೆಂಬಲ ಮತ್ತು ಅವಕಾಶಗಳನ್ನು ನೀಡಲು ಜಡೇಜಾ ಎಷ್ಟು ಸಮರ್ಥರಾಗುತ್ತಾರೆ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್!

ಸಿಎಸ್ಕೆಯ ಗೆಲುವಿನ ಪರಂಪರೆ ಮುಂದುವರಿಸುವುದು!
ಜಡೇಜಾ ಮುಂದಿರುವ ಪ್ರಮುಖ ಸವಾಲೆಂದರೆ ತಂಡದ ಪ್ರದರ್ಶನ ಕಡಿಮೆಯಾಗಿದೆ. 12 ಸೀಸನ್ಗಳನ್ನು ಆಡಿರುವ ಸಿಎಸ್ಕೆ ಒಂಬತ್ತು ಫೈನಲ್ಗಳನ್ನು , 11 ಪ್ಲೇ-ಆಫ್ಗಳನ್ನು ಆಡಿದ್ದು, ನಾಲ್ಕರಲ್ಲಿ ಕಪ್ ಗೆದ್ದಿರುವ ತಂಡವನ್ನ ಅನ್ನು ಅದೇ ಮಟ್ಟಕ್ಕೆ ಕೊಂಡೊಯ್ಯುವುದು ಸುಲಭವಲ್ಲ. ಹಾಗಾಗಿ ಆಲ್ ರೌಂಡರ್ ಆಗಿ ಮಿಂಚುತ್ತಿರುವ ಜಡೇಜಾ ಒತ್ತಡವನ್ನು ಮೆಟ್ಟಿನಿಂತು ತಂಡವನ್ನು ಪ್ರಶಸ್ತಿಯತ್ತ ಕೊಂಡೊಯ್ಯುವರೇ ಎಂಬುದನ್ನು ಕಾದು ನೋಡಬೇಕಿದೆ. ಜಡೇಜಾ ಅವರು ಒತ್ತಡದಲ್ಲಿ ಹಲವು ಬಾರಿ ಉತ್ತಮ ಪ್ರದರ್ಶನ ನೀಡಲು ಸಮರ್ಥರಾಗಿದ್ದಾರೆ. ಆದರೆ ನಾಯಕರಾದ ನಂತರ ಅವರು ಅದೇ ಪ್ರದರ್ಶನವನ್ನು ಮುಂದುವರಿಸುತ್ತಾರೆಯೇ ಎಂದು ನೋಡಬೇಕು.


Click it and Unblock the Notifications