ಕಳಪೆ ನಿರ್ವಹಣೆ ಎಂದ ಕನೇರಿಯಾ
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ದಾನಿಶ್ ಕನೇರಿಯಾ ಪ್ರತಿಕ್ರಿಯೆ ನೀಡಿದ್ದು ಶ್ರೀಲಂಕಾ ಕೋಚ್ ಮಿಕ್ಕಿ ಆರ್ಥರ್ ಕಳಪೆ ಆಟಗಾರರ ನಿರ್ವಹಣೆ ಕೌಶಲ್ಯದಲ್ಲಿ ಕಳಪೆಯಾಗಿದ್ದಾರೆ ಎಂದು ವಿವರಿಸಿದ್ದಾರೆ. ಪಾಕಿಸ್ತಾಮ ತಂಡದ ಮಾಜಿ ಕೋಚ್ ಆಗಿರುವ ಮಿಕ್ಕಿ ಆರ್ಥರ್ಗೆ ಕನೇರಿಯಾ ಕ್ರಿಕೆಟ್ ಹೊರತಾದ ವಿಚಾರಗಳ ಬಗ್ಗೆ ಸಲಹೆಯನ್ನು ನೀಡುವುದನ್ನು ಬಿಟ್ಟು ಕೋಚಿಂಗ್ ವಿಚಾರವಾಗಿ ದೃಷ್ಟಿಹರಿಸುವಂತೆ ಹೇಳಿದ್ದಾರೆ.
ಆರ್ಥರ್ ನಿರ್ಧಾರಕ್ಕೆ ಕನೇರಿಯಾ ಕಿಡಿ
"ಮಿಕ್ಕಿ ಆರ್ಥರ್ ತಮ್ಮ ಆಟಗಾರರಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಅವರು ಇವುಗಳ ಬದಲಿಗೆ ಎದುರಾಳಿಯ ವಿರುದ್ಧ ಸೂಕ್ತ ರಣತಂತ್ರದ ಬಗ್ಗೆ ಗಮನಹರಿಸಬೇಕಿದೆ. ಇದು ಸಾಮಾಜಿಕ ಜಾಲತಾಣಗಳ ಕಾಲ. ಬಯೋಬಬಲ್ನಲ್ಲಿ ಆಟಗಾರರು ಅದನ್ನು ಸಹಜವಾಗಿಯೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಾರೆ. ಅವುಗಳ ಮೇಲೆ ನಿಯಂತ್ರಣ ಸೂಕ್ತವಲ್ಲ" ಎಂದಿದ್ದಾರೆ ದಾನೀಶ್ ಕನೇರಿಯಾ.
ಆರ್ಥರ್ ಕೋಚ್ ಮಾಡಿದ ತಂಡಗಳು ಅವನತಿ
ಮುಂದುವರಿದು ಮಾತನಾಡಿದ ದಾನೀಶ್ ಕನೇರಿಯಾ ಕೋಚ್ ಆಗಿ ನಿಮ್ಮ ಸಾಧನೆಯೇನು ಎಂದು ಪ್ರಶ್ನಿಸಿದ್ದಾರೆ. "ಕೋಚ್ ಆಗಿ ನೀವು ಏನು ಸಾಧಿಸಿದ್ದೀರಿ? ನೀವು ಏನು ಮಾರ್ಗದರ್ಶನ ನೀಡಿದ್ದೀರಿ. ನೀವು ಯುವ ತಂಡವನ್ನು ಬೆಳೆಸಬೇಕಿದೆ. ಅದರ ಬದಲಿಗೆ ಸೋಲಿನ ನಂತರ ನಿಮ್ಮ ಕೋಪವನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಿ. ಅನಗತ್ಯ ಸಲಹೆಗಳನ್ನು ನೀಡುವುದನ್ನು ನಿಲ್ಲಿಸಿ. ಆತ ಮಾರ್ಗದರ್ಶನ ನೀಡಿದ ತಂಡಗಳೆಲ್ಲಾ ಅವನತಿಯತ್ತ ಸಾಗಿದೆ" ಎಂದು ದಾನಿಶ್ ಕನೇರಿಯಾ ಕಿಡಿಕಾರಿದ್ದಾರೆ.
ಟೀಮ್ ಇಂಡಿಯಾ ಬಗ್ಗೆ ಕನೇರಿಯಾ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ತಂಡದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನೀಶ್ ಕನೇರಿಯಾ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಹೊಂದಿರುವ ಅಪಾರ ಪ್ರಮಾಣದ ಯುವ ಪ್ರತಿಭೆಗಳ ಬಗ್ಗೆಯೂ ಕನೇರಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಭಾರತದ ಪ್ರಮುಖ ಆಟಗಾರರ ತಂಡ ಇಂಗ್ಲೆಂಡ್ನಲ್ಲಿರುವಂತೆಯೇ ಭಾರತದ ಈ ತಂಡ ನೀಡುತ್ತಿರುವ ಪ್ರದರ್ಶನ ತಮ್ಮ ಯೋಜನೆಗಳನ್ನು ಕಾರ್ಯನಿರ್ವಹಿಸುತ್ತಿರುವ ರೀತಿಯಿಂದಾಗಿ ಎದುರಾಳಿ ತಂಡಗಳು ಖಂಡಿತವಾಗಿಯೂ ಒತ್ತಡಕ್ಕೆ ಬೀಳುತ್ತಾರೆ. ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಅತ್ಯಂತ ಪ್ರಬಲ ಸ್ಪರ್ಧಿಯಾಗಿದೆ" ಎಂದು ದಾನೀಶ್ ಕನೇರಿಯಾ ಹೇಳಿಕೆ ನೀಡಿದ್ದಾರೆ.