ಫುಟ್ಬಾಲ್ ಬೆಳೆಸುವುದೇ ಉದ್ದೇಶ
ಶರತ್ ಅವರು ಮಾತನಾಡಿ, 'ವಿದೇಶಿ ತರಬೇತುದಾರರನ್ನು ಕರೆತಂದು ಪಂದ್ಯಾವಳಿಯನ್ನು ಗೆಲ್ಲುವುದು ನಮ್ಮ ಉದ್ದೇಶವಲ್ಲ. ಭಾರತೀಯ ಕ್ರೀಡಾ ಸಂಸ್ಕೃತಿಯಲ್ಲಿ ಫುಟ್ಬಾಲನ್ನು ಬೆಳಗಿಸುವುದು, ಆಟಗಾರರ ಅಭಿವೃದ್ಧಿ ಹಾಗು ಪೂಟ್ಬಾಲ್ ನಲ್ಲಿ ವೃತ್ತಿಪರತೆಯನ್ನು ನಿರಂತರವಾಗಿ ಉಳಿಸುವುದು ನಮ್ಮ ಉದ್ದೇಶ' ಎಂದರು.
ತಂಡ ಕಟ್ಟುವಲ್ಲಿ ತಂಡವೇ ಶ್ರಮ
ಯುವ ಫುಟ್ಬಾಲ್ ತಂಡವನ್ನು ಕಟ್ಟುವಲ್ಲಿ ಶ್ರಮಿಸಿದವರಲ್ಲಿ ಶರತ್ ಪ್ರಮುಖರು. ಆದರೆ ಇವರೊಟ್ಟಿಗೆ ಹೆಗಲು ಸೇರಿಸಿದವರೂ ಇದ್ದಾರೆ. ಅಂತಾರಾಷ್ಟ್ರೀಯ ನಿರ್ವಹಣಾ ತರಬೇತುದಾರರಾದ ಅಭಿಷೇಕ್ ಜಗನ್, ಕೋಚ್ ಎಸ್ ಪಿ ಶಾಜಿ ಅವರ ಸಹಕಾರದೊಂದಿಗೆ ತಂಡ ಬೆಳೆದು ನಿಂತಿದೆ. ರಾಮನ್ ಶಿಕ್ಷಣ ಸಂಸ್ಥೆ, ಜಿಎಮ್ ಇನ್ಫೈನೈಟ್, ಡೆಕಾಥ್ಲಾನ್, ಫಾಸ್ಟ್ ಆ್ಯಂಡ್ ಅಪ್ ಸಂಸ್ಥೆಗಳ ಸಹಕಾರವೂ ದೊರೆತಿದೆ.
ಕಡಿಮೆ ಅವಧಿಯಲ್ಲಿ ಉತ್ತಮ ತರಬೇತಿ
ಬಿಡಿಯುಎಫ್ಸಿ ಪ್ರಧಾನ ಕೋಚ್ ಶಾಜಿ ಮಾತನಾಡಿ, 'ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಆಟಗಾರರನ್ನು ತರಬೇತಿಗೊಳಿಸುವ ವಿಶ್ವಾಸ ನಮಗಿದೆ. ಬೆಂಗಳೂರಿನ ಯುವ ಪ್ರತಿಭೆಗಳನ್ನು ಸೀನಿಯರ್ ಹಂತದಲ್ಲಿ ಆಡಲು ಬೇಕಾದ ತರಬೇತಿ ನೀಡುತ್ತಿದ್ದೇವೆ. 16 ರಿಂದ 18 ವಯಸ್ಸಿನ ಪ್ರತಿಭಾವಂತರಿಗೆ ತೃತ್ತಿಪರ ಪರಬೇತಿ ನೀಡಲಾಗಿದೆ' ಎಂದು ತಿಳಿಸಿದರು.
ಜೆರ್ಸಿ ಅನಾವರಣ
ಈ ಸಂದರ್ಭ ಬೆಂಗಳೂರು ಡ್ರೀಮ್ಸ್ ಯುನೈಟೆಡ್ ತಂಡದ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಬಿಡಿಯುಎಫ್ಸಿಯ ಪದಾಧಿಕಾರಿಗಳು, ಆಟಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.