ಖಾಲಿ ಖಾಲಿ ಮೈದಾನ
ಭಾರತ ಆಡುವ ಯಾವುದೇ ಪಂದ್ಯಗಳ ವೇಳೆಯೂ ತುಂಬಿಕೊಂಡಿರುವ ಸ್ಟೇಡಿಯಂ ಈ ಬಾರಿ ಪಂದ್ಯದ ವೇಳೆ ಖಾಲಿ ಖಾಲಿ ಅನ್ನಿಸಿಕೊಳ್ಳಲಿದೆ. ಸುಮಾರು 22,000 ಜನರಿಗೆ ಬೇಕಾದ ಆಸನ ವ್ಯವಸ್ಥೆಯಿರುವ ಸ್ಟೇಡಿಯಂನಲ್ಲಿ ಮೊದಲ ಪಂದ್ಯಕ್ಕೆ ಶೇ. 40ರಷ್ಟು ಟಿಕೆಟ್ಗಳು ಮಾತ್ರ ಮಾರಾಟವಾಗಿವೆ. ಬುಧವಾರದ ವರೆಗೂ ಇಷ್ಟು ಟಿಕೆಟ್ಗಳು ಸೇಲಾಗಿವೆ ಎನ್ನುತ್ತಾರೆ ಆಯೋಜಕರು.
ಖಾಲಿ ಮೈದಾನಕ್ಕೆ ಕಾರಣ
ಮಾರಕ ಸೋಂಕು ಕೊರೊನಾ ವೈರಸ್ ಹಬ್ಬುವುದನ್ನು ತಪ್ಪಿಸಲು ಜನ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಪ್ರಯಾಣ ಮತ್ತು ಸಾರ್ವಜನಿಕವಾಗಿ ಒಂದೆಡೆ ಸೇರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮೈದಾನ ಈ ಬಾರಿ ಭರ್ತಿಯಾಗಿಲ್ಲ. ಕಾರ್ಪೊರೇಟ್ ಬಾಕ್ಸ್ಗಳೂ ಹೆಚ್ಚಿನವು ಖಾಲಿಖಾಲಿಯಾಗಿ ಉಳಿದಿವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕುಸಿದ ಕಾರ್ಪೊರೇಟ್ ಬಾಕ್ಸ್ ಬೇಡಿಕೆ
'ಈ ಬಾರಿ ಬರೀ ಎರಡು-ಮೂರು ಕಾರ್ಪೊರೇಟ್ ಬಾಕ್ಸ್ಗಳಷ್ಟೇ ಸೇಲಾಗಿವೆ,' ಎಂದು ಎಚ್ಪಿಸಿಎ ಕಾರ್ಯಕಾರಿ ಸಮಿತಿ ಹೇಳಿದೆ. ಧರ್ಮಶಾಲಾ ಸ್ಟೇಡಿಯಂನಲ್ಲಿ ಒಟ್ಟಿಗೆ 12 ಕಾರ್ಪೊರೇಟ್ ಬಾಕ್ಸ್ಗಳಿವೆ. ಪ್ರತಿ ಬಾಕ್ಸ್ನಲ್ಲೂ 20 ಆಸನ ವ್ಯವಸ್ಥೆಯಿದೆ. ಟಿ20 ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗನುಸಾರ ಪ್ರತೀ ಪಂದ್ಯಕ್ಕೆ ಸುಮಾರು 2,00,000ರವರೆಗೂ ಪ್ರತೀ ಬಾಕ್ಸ್ಗಳ ಬೆಲೆಯಿರುತ್ತದೆ.
ಆಟಗಾರರಲ್ಲೂ ಭೀತಿ
ಪ್ರವಾಸದ ವೇಳೆ ಕೈಕುಲುಕುವುದನ್ನು ಮಾಡಕೂಡದು ಎಂದು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ತನ್ನ ಆಟಗಾರರಿಗೆ ಸೂಚಿಸಿದ್ದಾರೆ. ಮಂಗಳವಾರ (ಮಾರ್ಚ್ 10) ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೂಡ ಮಾಸ್ಕ್ನೊಂದಿಗೆ ಕಾಣಿಸಿಕೊಂಡಿದ್ದರು (ಸಾಂಧರ್ಭಿಕ ಚಿತ್ರ).