ಪಂತ್ ಬಳಿ ಚರ್ಚಿಸಿದ್ದೀರಾ?
ಸೆಹ್ವಾಗ್ ಅಸಮಾದಾನಕ್ಕೆ ಕಾರಣವಾಗಿರೋದು ಪಂದ್ಯದಲ್ಲಿ ಆಟಗಾರರನ್ನು ಹೊರಗಿಡುವ ವಿಚಾರವಾಗಿ. ರಿಷಬ್ ಪಂತ್ ಕೈ ಬಿಟ್ಟಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿರುವ ವೀರೇಂದ್ರ ಸೆಹ್ವಾಗ್ ತಮ್ಮ ಖಡಕ್ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗಿಡುತ್ತಿರುವ ಬಗ್ಗೆ ಪಂತ್ ಬಳಿ ಚರ್ಚೆಯನ್ನು ನಡೆಸಿದ್ದೀರಾ ಎಂದು ಕೊಹ್ಲಿಯನ್ನು ಖಡಕ್ಕಾಗಿ ಪ್ರಶ್ನಿಸಿದ್ದಾರೆ.
ಧೋನಿಯನ್ನೇ ಅನುಸರಿಸುತ್ತಿದ್ದೀರಾ?
ವಿರಾಟ್ ಕೊಹ್ಲಿಗೆ ಖಡಕ್ ಪ್ರಶ್ನೆಯನ್ನು ಮುಂದಿಡುತ್ತಾ ವೀರೇಂದ್ರ ಸೆಹ್ವಾಗ್ ಧೋನಿ ವಿಚಾರವಾಗಿಯೂ ಮಾತನಾಡಿದ್ದಾರೆ. ತಾವು ಆಟಗಾರನಾಗಿದ್ದಾಗ ಟೀಮ್ ಇಂಡಿಯಾ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿಯೂ ಕೂಡ ತಂಡದಿಂದ ಕೈ ಬಿಡುವ ಬಗ್ಗೆ ಆಟಗಾರರಿಗೆ ಯಾವುದೇ ಮಾಹಿತಿಯನ್ನು ನೀಡುತ್ತಿರಲಿಲ್ಲ ಎಂದಿದ್ದಾರೆ.
ಧೋನಿ ಹೇಳಿಕೆ ಮಾಧ್ಯಮಗಳ ಮೂಲಕ ಅರಿವಿಗೆ ಬಂದಿತ್ತು
2012ರಲ್ಲಿ ಮಹೇಂದ್ರ ಸಿಂಗ್ ಧೋನಿ ತನ್ನನ್ನು(ವಿರೇಂದ್ರ ಸೆಹ್ವಾಗ್) ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರನ್ನು ರೊಟೇಷನ್ ಪದ್ದತಿಯಲ್ಲಿ ಆಡಿಸಿದ್ದರು. ಇದಕ್ಕೆ ಮಾಧ್ಯಮಗಳ ಮೂಲಕ ಫೀಲ್ಡಿಂಗ್ನಲ್ಲಿ ಈ ಆಟಗಾರರು ನಿಧಾನವಾಗಿರುತ್ತಾರೆ ಎಂಬ ಕಾರಣವನ್ನು ನೀಡಿದ್ದರು. ಆದರೆ ಈ ವಿಚಾರವನ್ನು ಟೀಮ್ ಮೀಟಿಂಗ್ನಲ್ಲಿ ನಮ್ಮ ಮುಂದೆ ಹೇಳಿಕೊಂಡೇ ಇಲ್ಲ, ಮಾಧ್ಯಮಗಳ ಮೂಲಕ ನಮಗೆ ಅರಿವಿಗೆ ಬಂತು ಎಂಬ ಮಾತನ್ನು ಹೇಳಿದ್ದಾರೆ.
ರೋಹಿತ್ ಉತ್ತಮ
ಸದ್ಯದ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಕೂಡ ಧೋನಿ ಮಾಡುತ್ತಿದ್ದ ರೀತಿಯಲ್ಲೇ ಮಾಡುತ್ತಿದ್ದಾರೆ ಎಂದು ಎನಿಸುತ್ತಿದೆ. ಮಾಜಿ ವಿರಾಟ್ ಕೊಹ್ಲಿಯೂ ಆಟಗಾರರ ಜೊತೆ ಚರ್ಚಿಸುತ್ತಿದ್ದಾರೆ ಎಂದು ನನಗನಿಸುತ್ತಿಲ್ಲ. ಆದರೆ ರೋಹಿತ್ ಶರ್ಮಾ ನಾಯಕರಾದ್ದ ಸಂದರ್ಭದಲ್ಲಿ ಆಟಗಾರರ ಜೊತೆ ಉತ್ತಮ ಸಂವಹನವನ್ನು ಇಟ್ಟುಕೊಂಡಿದ್ದರು ಎಂದು ತಂಡದೊಳಗಿನಿಂದಲೇ ಮಾಹಿತಿ ಸಿಕ್ಕಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.