ಸೋತಿದ್ದರೂ ತಲೆಕೆಡಿಸಿಕೊಳ್ಳಲ್ಲ
ಪಂದ್ಯ ಮುಗಿದ ನಂತರ ಮಾತನಾಡಿದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ, "ಒಂದೆರಡು ಪಂದ್ಯಗಳನ್ನು ಸೋತರೂ ಪರವಾಗಿಲ್ಲ, ಒತ್ತಡದಲ್ಲಿ ಗೆಲುವು ಸಾಧಿಸುವಂತೆ ತಂಡವನ್ನು ಸಿದ್ಧಪಡಿಸಲು ಬಯಸುತ್ತೇನೆ. " ಎಂದು ಹೇಳಿದರು.
2024ರ ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಈಗಿನಿಂದಲೇ ಸಜ್ಜುಗೊಳಿಸುತ್ತಿದೆ. ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಪಾಂಡ್ಯ ನಾಯಕತ್ವದಲ್ಲಿ ಭಾರತ ಯುವ ಪಡೆ ಶ್ರೀಲಂಕಾ ವಿರುದ್ಧದ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಒತ್ತಡದಲ್ಲಿ ಪ್ರದರ್ಶನ ನೀಡಬೇಕು
ಎಲ್ಲಾ ಪಂದ್ಯಗಳಲ್ಲಿ ಸುಲಭವಾಗಿ ಜಯಿಸುವುದು ಸಾಧ್ಯವಿಲ್ಲ. ಆಟಗಾರರು ಈ ರೀತಿಯ ಒತ್ತಡದ ಪಂದ್ಯಗಳಲ್ಲಿ ಕೂಡ ಗೆಲ್ಲುವ ಸಾಮರ್ಥ್ಯ ಹೊಂದಿರಬೇಕು, ಒಂದೆರಡು ಪಂದ್ಯಗಳಲ್ಲಿ ಸೋತರೂ ಪರವಾಗಿಲ್ಲ. ಆದರೆ, ಇಂತಹ ಪಂದ್ಯಗಳನ್ನು ಗೆಲ್ಲಲು ತಂಡ ಸಿದ್ಧವಾಗಬೇಕು ಎಂದು ಪಾಂಡ್ಯ ಹೇಳಿದರು.
"ಇಂತಹ ಕಷ್ಟಕರ ಸಂದರ್ಭಗಳಲ್ಲಿ ಆಡುವುದು ನಮಗೆ ದೊಡ್ಡ ಪಂದ್ಯಗಳಲ್ಲಿ ಸಹಾಯ ಮಾಡುತ್ತದೆ, ದ್ವಿಪಕ್ಷೀಯ ಸರಣಿಗಳು ನಮಗೆ ಸಿದ್ಧವಾಗಲು ಉತ್ತಮ ಅವಕಾಶಗಳಾಗಿವೆ.ಇಲ್ಲಿ ಕೆಲವು ಪಂದ್ಯಗಳನ್ನು ಸೋತರೂ ಪರವಾಗಿಲ್ಲ, ದೊಡ್ಡ ಪಂದ್ಯಾವಳಿಗಳಿಗೆ ಸಿದ್ಧವಾಗುವುದು ಮುಖ್ಯವಾಗಿದೆ" ಎಂದು ಹೇಳಿದರು.
ಹಾರ್ದಿಕ್ ಪಾಂಡ್ಯ ಅಚ್ಚರಿಯ ನಿರ್ಧಾರ
ಶ್ರೀಲಂಕಾ ತಂಡಕ್ಕೆ ಕೊನೆಯ ಓವರ್ನಲ್ಲಿ ಗೆಲುವಿಗಾಗಿ 13 ರನ್ ಅಗತ್ಯವಿತ್ತು, ಹಾರ್ದಿಕ್ ಪಾಂಡ್ಯಗೆ ಇನ್ನೂ ಒಂದು ಓವರ್ ಮಾಡುವುದು ಬಾಕಿ ಇತ್ತು, ಎಲ್ಲರೂ ಪಾಂಡ್ಯ ಬೌಲಿಂಗ್ ಮಾಡುತ್ತಾರೆ ಎಂದು ನಂಬಿದ್ದರು, ಆದರೆ ಪಾಂಡ್ಯ ಅಕ್ಷರ್ ಪಟೇಲ್ಗೆ ಕೊನೆಯ ಓವರ್ ಬೌಲಿಂಗ್ ಮಾಡಲು ಕೇಳಿದರು.
ನಾಯಕನ ನಂಬಿಕೆಯನ್ನು ಉಳಿಸಿಕೊಂಡ ಅಕ್ಷರ್ ಪಟೇಲ್ ಭಾರತಕ್ಕೆ 2 ರನ್ಗಳ ರೋಚಕ ಜಯ ತಂದುಕೊಟ್ಟರು.