ಬೆಂಗಳೂರು, ಮೇ 07: ಸತತ ಸೋಲಿನ ಬಳಿಕ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೆಕೆಆರ್ ತಂಡಕ್ಕೆ ಆರ್ ಸಿಬಿ ಸುಲಭವಾಗಿ ಶರಣಾಯಿತು. ಆರ್ ಸಿಬಿಯನ್ನು 158ಸ್ಕೋರಿಗೆ ನಿಯಂತ್ರಿಸಿದ್ದಲ್ಲದೆ, ಸುಲಭವಾಗಿ ರನ್ ಚೇಸ್ ಮಾಡಿ ಗೆಲುವು ದಾಖಲಿಸಿತು. ಕೆಕೆಆರ್ ತಂಡದ ಗೆಲುವಿಗೆ ಸುನಿಲ್ ನಾರಾಯಣ್ ಅವರ ತ್ವರಿತಗತಿ ಅರ್ಧಶತಕ(15 ಎಸೆತ) ಕಾರಣವಾಯಿತು.
ಮಳೆಯಿಂದ ಮಧ್ಯದಲ್ಲಿ ಕೆಲ ಸಮಯ ಪಂದ್ಯ ನಿಂತರೂ, ಕೆಕೆಆರ್ ತನ್ನ ಹಿಡಿತ ಸಡಿಸಲಿಲ್ಲ. ಪಂದ್ಯದುದ್ದಕ್ಕೂ ಉತ್ತಮವಾಗಿ ಆಡಿ 6 ವಿಕೆಟ್ ಗಳಿಂದ ಅರ್ಹ ಜಯ ದಾಖಲಿಸಿತು.
ಕೆಕೆಆರ್ ರನ್ ಚೇಸ್: ಮೊದಲ ಆರು ಓವರ್ ಗಳಲ್ಲೆ ಪಂದ್ಯದ ಹಣೆಬರಹ ಬರೆದ ಕೆಕೆಆರ್
* ಸುನಿಲ್ ನಾರಾಯಣ್ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಹೊಸ ಐಪಿಎಲ್ ದಾಖಲೆ
* 17 ಎಸೆತಗಳಲ್ಲಿ 54 (6 ಬೌಂಡರಿ, 4 ಸಿಕ್ಸರ್) ರನ್ ಬಾರಿಸಿದ ಸುನಿಲ್ ನಾರಾಯಣ್
* ಮತ್ತೆ ತಂಡಕ್ಕೆ ಮರಳಿದ ಕ್ರಿಸ್ ಲಿನ್ 22 ಎಸೆತಗಳಲ್ಲಿ 50ರನ್ ಬಾರಿಸಿದರು.
* ಗೌತಮ್ ಗಂಭೀರ್ 14, ಕಾಲಿನ್ 34ರನ್ ಗಳಿಸಿ 15.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 159ರನ್
ಆರ್ ಸಿಬಿ: ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್, ಮನ್ದೀಪ್ ಸಿಂಗ್, ಟ್ರಾವಿಸ್ ಹೆಡ್, ಕೇದಾರ್ ಜಾಧನ್ (ವಿಕೆಟ್ ಕೀಪರ್), ಪವನ್ ನೇಗಿ, ಸ್ಯಾಮುಯಲ್ ಬದ್ರಿ, ಶ್ರೀನಾಥ್ ಅರವಿಂದ್, ಯಜುವೇಂದ್ರ ಚಾಹಲ್, ಅನಿಕೇತ್ ಚೌಧರಿ.