
ಈ 'ಸಾರಿ ಕಪ್ ಬಿಡಲ್ಲ' ಅನ್ನೋ ಹುರುಪು
ಐಪಿಎಲ್ ನಲ್ಲಿ ಟ್ರೋಫಿಯೇ ಗೆಲ್ಲದ ತಂಡವಾಗಿ ವಿರಾಟ್ ಕೊಹ್ಲಿ ಬಳಗ ಆರ್ಸಿಬಿಯಿದೆ. ಆದರೆ 'ಈ ಸಾರಿ ಕಪ್ ಬಿಡಲ್ಲ' ಅಂತ ಬೆಂಗಳೂರು ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿತ್ತು. ಆಟಗಾರರ ಹರಾಜಿನ ವೇಳೆ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಗ್ಯಾರಿ ಕಸ್ಟರ್ನ್, ಆಶೀಷ್ ನೆಹ್ರಾ ಕೋಚಿಂಗ್ ವಿಭಾಗವನ್ನು ಬಲಗೊಳಿಸಿದ್ದರು.

ಆರ್ಸಿಬಿ ಸೋಲಿನ ದಾರಿ
ಆರ್ಸಿಬಿ ತಂಡ ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೇ ಸಿಎಸ್ಕೆ ವಿರುದ್ಧ ಸೋತು ಅಭಿಮಾನಿಗಳನ್ನು ನಿರಾಶೆಗಳಿಸಿತ್ತು. ಅನಂತರ ಮತ್ತೂ ಮೂರು ಪಂದ್ಯಗಳಲ್ಲಿ ಸೋಲಿನ ದಾರಿಯನ್ನೇ ಹಿಡಿದಿತ್ತು. ಹೀಗಾಗಿ ಆರ್ಸಿಬಿ ಅಭಿಮಾನಿಗಳೂ, ನಾಯಕ ವಿರಾಟ್ ಕೊಹ್ಲಿಯೂ ಇನ್ನಷ್ಟು ನಿರಾಶೆ ಪಡುವಂತಾಗಿದೆ.

ಮುಂಬೈ ಇದಕ್ಕಿಂತಲೂ ಕೆಟ್ಟ ಪ್ರದರ್ಶನ ನೀಡಿತ್ತು
ಆರ್ಸಿಬಿಗೆ ಟ್ರೋಫಿ ಗೆಲ್ಲಲು ಇನ್ನೂ ಅವಕಾಶವಿದೆ ಎನ್ನುತ್ತಿದೆ ಐಪಿಎಲ್ ಇತಿಹಾಸ. ಯಾಕೆಂದರೆ ಐಪಿಎಲ್ನಲ್ಲಿ ಒಟ್ಟು ಮೂರು ಸಾರಿ ಚಾಂಪಿಯನ್ ಅನ್ನಿಸಿದ್ದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಅತೀ ಕೆಟ್ಟ ಪ್ರದರ್ಶನ ನೀಡಿಯೂ ಒಂದುಸಾರಿ ಪ್ಲೇ-ಆಫ್ ಪ್ರವೇಶಿಸಿದೆ. ಇನ್ನೊಂದು ಸಾರಿ ಟ್ರೋಫಿಯೇ ಗೆದ್ದಿದೆ! (ಚಿತ್ರ ಕೃಪೆ: ಬಿಸಿಸಿಐ).

ಆರ್ಸಿಬಿ ಕಪ್ಪಿನಾಸೆ ಈಗಲೂ ಜೀವಂತ
ಮುಂಬೈ ಹೆಚ್ಚಿನ ಸಾರಿ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಸೋಲೋದು ಮಾಮೂಲಿಯಾಗಿದೆ. ಆಗಿದ್ದೂ ಮುಂಬೈ ಇಂಡಿಯನ್ಸ್ 2014ರಲ್ಲಿ ಪ್ಲೇ ಆಫ್ಗೆ ಪ್ರವೇಶಿಸಿತ್ತು. 2015ರಲ್ಲಿ ಚಾಂಪಿಯನ್ ಆಗಿತ್ತು. ಅಂದ್ಹಾಗೆ 2014ರ ಸೀಸನ್ ಆರಂಭದ 5 ಪಂದ್ಯಗಳನ್ನು ಮತ್ತು 2015ರ ಆರಂಭಿಕ 4 ಪಂದ್ಯಗಳನ್ನು ಸೋತು ಮುಂಬೈ ಮುಖಭಂಗ ಅನುಭವಿಸಿತ್ತು. ಆದರೆ ಹಾಗೆ ಸೋತರೂ ಮತ್ತೆ ಪ್ಲೇ ಆಫ್ ಪ್ರವೇಶಿಸಿ, ಟ್ರೋಫಿ ಗೆದ್ದು ಬೆರಗು ಮೂಡಿಸಿತ್ತು! ಆರ್ಸಿಬಿ ಇನ್ನುಳಿದ ಪಂದ್ಯಗಲ್ಲಿ ಹೆಚ್ಚಿನವನ್ನು ಗೆದ್ದರೆ ಕಪ್ ನಮ್ಮದಾಗುವ ಅವಕಾಶ ಖಂಡಿತಾ ಇದೆ.


Click it and Unblock the Notifications
