ಇಬ್ಬರಿಗೂ ಮತ್ತೊಂದು ಅವಕಾಶ
ಸಂಜಯ್ ಮಂಜ್ರೇಕರ್ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು ಮುಂದಿನ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಇಬ್ಬರೂ ಯುವ ಕ್ರಿಕೆಟಿಗರು ತಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡುವ ಮೂಲಕ ಈ ವಿಶ್ವಕಪ್ಗೆ ಸ್ಥಾನವನ್ನು ಪಡೆಯುವ ಅವಕಾಶ ಮುಂದಿದೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಅದ್ಘುತ ಆಟಗಾರರು
ರಿಷಭ್ ಪಂತ್ ಆಟದಲ್ಲಿ ಖಂಡಿತವಾಗಿಯೂ ಅದ್ಭುತವಾದ ಶಕ್ತಿಯಿದೆ. ಕಳೆದೇ ಹೋಗಬಹುದಾದ ಪಂದ್ಯವನ್ನು ಹತ್ತೇ ನಿಮಿಷದಲ್ಲಿ ಮರಳಿ ಗಳಿಸುವ ಶಕ್ತಿ ಅವರಲ್ಲಿದೆ. ಸಂಜು ಸ್ಯಾಮ್ಸನ್ ಕೂಡ ಹಾಗೆಯೇ ಉತ್ತಮ ಲಯದಲ್ಲಿದ್ದಾಗ ಬ್ಯಾಟಿಂಗ್ ಮೂಲಕ ನಿಮ್ಮ ಉಸಿರನ್ನೇ ನಿಲ್ಲಿಸಿಬಿಡುವಷ್ಟು ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಇಬ್ಬರೂ ಯುವ ಕ್ರಿಕೆಟಿಗರನ್ನು ಸಂಜಯ್ ಮಂಜ್ರೇಕರ್ ಪ್ರಶಂಸಿಸಿದ್ದಾರೆ.
ಪಂತ್ ವೈಫಲ್ಯತೆ
ಸೀಮಿತ ಓವರ್ಗಳಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ವಹಿಸಿಕೊಂಡು ಯಶಸ್ವಿಯಾದ ನಂತರ ಪಂತ್ ಮತ್ತೆ ತಂಡದಲ್ಲಿ ಅವಕಾಶವನ್ನು ಗಳಿಸಲು ಸಫಲರಾಗಲಿಲ್ಲ. ಟೆಸ್ಟ್ ತಂಡದಲ್ಲಿ ಅವಕಾಶ ಪಡೆದರೂ ಅಲ್ಲೂ ತಂಡಕ್ಕೆ ಉಪಯೋಗವಾಗುವ ಪ್ರದರ್ಶನ ನೀಡಲಿಲ್ಲ.
ಸಂಜುಗೆ ನಿರಾಸೆ
ಮತ್ತೊಂದೆಡೆ ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು. ಆದರೆ ಕೇವಲ 6 ರನ್ ಗಳಿಸಿ ನಿರಾಸೆ ಅನುಭವಿಸಿದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಮತ್ತೆ ಅವಕಾಶ ಪಡೆದ ಸಂಜು 8 ಹಾಗೂ 2 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು.