ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT: ಮೇಘಾಲಯ ವಿರುದ್ಧ 9 ವಿಕೆಟ್‌ಗಳ ಅಮೋಘ ಜಯ ಸಾಧಿಸಿದ ಕರ್ನಾಟಕ: ಟೂರ್ನಿಯಲ್ಲಿ 2ನೇ ಗೆಲುವು

SMAT 2022: Mayank agarwal led Karnatak won the match by 9 wickets against Meghalaya

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಇಂದು ಕರ್ನಾಟಕ ತಂಡ ಮೇಘಾಲಯ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಬಳಗ ಎಲ್ಲಾ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ 9 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಕರ್ನಾಟಕ ತಂಡಕ್ಕೆ ಮೇಘಾಲಯ ಯಾವ ಹಂತದಲ್ಲಿಯೂ ಪ್ರತಿಸ್ಪರ್ಧೆ ನೀಡಲು ವಿಫಲವಾಗಿದ್ದು ಹೀನಾಯ ಸೋಲು ಅನುಭವಿಸಿದೆ.

ಈ ಗೆಲುವಿನೊಂದಿಗೆ ಕರ್ನಾಟಕ ಈ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಪಂದ್ಯದಲ್ಲಿ ಕೇರಳ ತಂಡದ ವಿರುದ್ಧ ಸೋಲು ಅನುಭವಿಸಿದ್ದ ಕರ್ನಾಟಕ ಈ ಗೆಲುವಿನೊಂದಿಗೆ ಮತ್ತೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಬೌಲಿಂಗ್ ವಿಭಾಗದ ಪ್ರದರ್ಶನ ತಂಡದ ಬಲವನ್ನು ಹೆಚ್ಚಿಸಿದೆ.

T20 World Cup: ಈ ಐವರು ಯುವ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿದ ನಿರೀಕ್ಷೆT20 World Cup: ಈ ಐವರು ಯುವ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿದ ನಿರೀಕ್ಷೆ

ಸ್ಕೋರ್‌ಕಾರ್ಡ್ ಹೀಗಿದೆ

1
9888-nonopta-55143
90 ರನ್‌ಗಳ ಗುರಿ ನೀಡಿದ ಮೇಘಾಲಯ

90 ರನ್‌ಗಳ ಗುರಿ ನೀಡಿದ ಮೇಘಾಲಯ

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಮೇಘಾಲಯ ತಂಡ ಕೇವಲ 89 ರನ್‌ಗಳನ್ನು ಗಳಿಸಲು ಮಾತ್ರವೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಆಟಗಾರರಾದ ಲಾರಿ ಸಂಗ್ಮಾ ಹಾಗೂ ಯೋಗೇಶ್ ತಿವಾರಿ ಅರ್ಧ ಶತಕದ ಜೊತೆಯಾಟ ನೀಡಿದ ಕಾರಣ ಈ ಮೊತ್ತವನ್ನು ತಲುಪಲು ಮೇಘಾಲಯ ಸಾಧ್ಯವಾಯಿತು. ಮೂವರು ಆಟಗಾರರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ದಾಂಡಿಗರು ಒಂದಂಕಿಗೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ಕರ್ನಾಟಕದ ಬರವಾಗಿ ಬೌಲಿಂಗ್‌ನಲ್ಲಿ ವಿಜಯ್‌ಕುಮಾರ್ ವೈಶಾಕ್ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ.

ಮಯಾಂಕ್ ಮನೀಶ್ ಭರ್ಜರಿ ಆಟ

ಮಯಾಂಕ್ ಮನೀಶ್ ಭರ್ಜರಿ ಆಟ

ಇನ್ನು ಮೇಘಾಲಯ ನೀಡಿದ ಸುಲಭ ಸವಾಲನ್ನು ಬೆನ್ನಟ್ಟಿದ ಕರ್ನಾಟಕ ಮೊದಲ ವಿಕೆಟ್‌ಅನ್ನು ಶೀಘ್ರವಾಗಿ ಕಳೆದುಕೊಂಡಿತು. ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟಾದರು. ಆದರೆ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 10 ಓವರ್‌ಗಳಲ್ಲಿ ತಂಡದ ಗೆಲುವಿಗೆ ಕಾರಣವಾದರು. ಮಯಾಂಕ್ ಅಗರ್ವಾಲ್ 29 ಎಸೆತಗಳಲ್ಲಿ 47 ರನ್‌ಗಳಿಸಿದರೆ ಮನೀಶ್ ಪಾಂಡೆ 28 ಎಸೆತಗಳಲ್ಲಿ 42 ರನ್ ಸಿಡಿಸಿದರು. ಈ ಮೂಲಕ ಕರ್ನಾಟಕ ಈ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಕರ್ನಾಟಕ: ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ, ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ಮನೋಜ್ ಭಾಂಡಗೆ, ವಿಜಯಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ, ಮುರಳೀಧರ ವೆಂಕಟೇಶ್
ಬೆಂಚ್: ಎಲ್ ಆರ್ ಚೇತನ್, ಶ್ರೇಯಸ್ ಗೋಪಾಲ್, ಶರತ್ ಬಿಆರ್

ಮೇಘಾಲಯ: ರಾಜ್ ಬಿಸ್ವಾ, ಕಿಶನ್ ಲಿಂಗ್ಡೋಹ್, ಚಿರಾಗ್ ಖುರಾನಾ, ಪುನಿತ್ ಬಿಶ್ತ್ (ನಾಯಕ & ವಿಕೆಟ್ ಕೀಪರ್), ಲ್ಯಾರಿ ಸಂಗ್ಮಾ, ರಾಜೇಶ್ ಬಿಷ್ಣೋಯ್ ಜೂನಿಯರ್, ಯೋಗೇಶ್ ತಿವಾರಿ, ಅನೀಶ್ ಚರಕ್, ಸ್ವರಜೀತ್ ದಾಸ್, ಅಭಿಷೇಕ್ ಕುಮಾರ್, ಚೆಂಗಮ್ ಸಂಗ್ಮಾ, ಕಿಲ್ಕೊ ಮರಕ್
ಬೆಂಚ್: ದಿಪ್ಪು ಸಂಗ್ಮಾ, ಆಕಾಶ್ ಚೌಧರಿ, ರೋಹಿತ್ ಶಾ

Story first published: Friday, October 14, 2022, 12:40 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X